ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಮಾತನಾಡಿ, ಸ್ವಚ್ಚ ಭಾರತ ಪಟ್ಟಿಯಲ್ಲಿ ರಾಬರ್ಟಸನ್ಪೇಟೆ ನಗರಸಭೆ 25ನೇ ಸ್ಥಾನದಲ್ಲಿದೆ. ಅದನ್ನು ಕಡಿಮೆ ಸ್ಥಾನಕ್ಕೆ ತರಬೇಕು. ಪೌರಕಾರ್ಮಿಕರೊಂದಿಗೆ ನಗರಸಭೆ ಸದಸ್ಯರು ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಇಬ್ಬರೂ ಸಮಾನ ಮನಸ್ಕರಾಗಿ ಕೆಲಸ ಮಾಡಿದರೆ ನಗರದಲ್ಲಿ ಉತ್ತಮ ಕೆಲಸ ಆಗುತ್ತವೆ. ಪೌರಕಾರ್ಮಿಕರಿಗೆ ಸಂಬಳದ ಗೊಂದಲ ಸದಾ ಇದೆ. ಆದ್ದರಿಂದ ಒಂದು ವರ್ಷಕ್ಕೆ ಬೇಕಾದಷ್ಟು ಸಂಬಳ ಮೀಸಲಿಡಲು ಯೋಚಿಸಲಾಗುತ್ತಿದೆ ಎಂದರು.