ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಔಷಧಿ, ಮಾತ್ರೆಗಳನ್ನು ಕವರ್ಗಳಲ್ಲಿ ಇಟ್ಟು ನೀಡದೆ ನೇರವಾಗಿ ನೀಡಲಾಗುತ್ತಿದೆ. ಚರ್ಮ ಕಾಯಿಲೆಗೆ ಔಷಧಿ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ, ನಗು ಮಗು ಆಂಬುಲೆನ್ಸ್ ಎಲ್ಲೆಂದರಲ್ಲಿ ನಿಲ್ಲುವ ಸ್ಥಿತಿಯಲ್ಲಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ ಎಂದು ದೂರಿದರು.