<p><strong>ಕೋಲಾರ: </strong>‘ಪದೇ ಪದೇ ತರಕಾರಿ ಬೆಳೆದರೆ ರೋಗಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ವರ್ಷದಲ್ಲಿ ಒಂದು ಬಾರಿ ರಾಗಿ ಬೆಳೆದರೆ ಮುಂದಿನ ಬೆಳೆಗಳಲ್ಲಿ ಉತ್ತಮ ಪ್ರತಿಫಲ ಕಾಣಬಹುದು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಿವಲಿಂಗಯ್ಯ ತಿಳಿಸಿದರು.</p>.<p>ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ರೇಷ್ಮೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಡಿ ತಾಲ್ಲೂಕಿನ ದಿನ್ನೆ ಹೊಸಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ರಾಗಿ ವಿತರಿಸಿ ಮಾತನಾಡಿದರು.</p>.<p>ರಾಗಿ ಬೆಳೆಯುವುದರಲ್ಲಿ ಹಲವು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಬೇಸಿಗೆಯಲ್ಲಿ ರಾಗಿ ಬೆಳೆದರೆ ಹಾಗೂ ಪರಿವರ್ತನೆ ಮಾಡಿದರೆ ರೋಗಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.</p>.<p>ರಾಗಿಯಲ್ಲಿ ವಿವಿಧ ತಳಿಗಳು ಇವೆ. ಇದರಲ್ಲಿ ಎಂಎಲ್-365 ತಳಿಯನ್ನು ವರ್ಷಪೂರ್ತಿ ಬೆಳೆಯಬಹುದಾಗಿದೆ. ಈ ತಳಿಯನ್ನು 105 ರಿಂದ 110 ದಿನಗಳ ಒಳಗೆ ಬೆಳೆಯಬಹುದು. ಈ ರಾಗಿಯಿಂದ ಮುದ್ದೆ ಮಾಡಿದರೆ ಬೇಗ ಹಳಸುವುದಿಲ್ಲ. ಇದಕ್ಕೆ ಇಣಕು ರೋಗ ಬರುವುದಿಲ್ಲ. ಇಳುವರಿ ಹೆಚ್ಚಾಗಿ ಬರುತ್ತದೆ ಎಂದು ವಿವರಿಸಿದರು.</p>.<p>ಸಹ ಪ್ರಾಧ್ಯಾಪಕ ಸಿ. ನಾರಾಯಣಸ್ವಾಮಿ ಮಾತನಾಡಿ, ರಾಗಿಗೆ ಪೋಷಕಾಂಶ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಉಪಯೋಗಿಸಬೇಕು ಎಂದು ತಿಳಿಸಿದರು.</p>.<p>ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಪದ್ಧತಿಯನ್ನು ಪ್ರತಿಯೊಬ್ಬ ರೈತರು ಅಳವಡಿಕೊಳ್ಳಬೇಕು ಎಂದುದರು.</p>.<p>ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಮೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಾಲಾ, ಮುಖಂಡರಾದ ಟಿ. ರಾಜೇಂದ್ರ, ಎನ್. ಶ್ರೀನಿವಾಸ್, ರಾಜೇಶ್, ಮಂಜುನಾಥ್, ದೇವರಾಜ್, ಡಿ.ಎಂ. ಕೃಷ್ಣಪ್ಪ, ನಾರಾಯಣಸ್ವಾಮಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>‘ಪದೇ ಪದೇ ತರಕಾರಿ ಬೆಳೆದರೆ ರೋಗಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ವರ್ಷದಲ್ಲಿ ಒಂದು ಬಾರಿ ರಾಗಿ ಬೆಳೆದರೆ ಮುಂದಿನ ಬೆಳೆಗಳಲ್ಲಿ ಉತ್ತಮ ಪ್ರತಿಫಲ ಕಾಣಬಹುದು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಿವಲಿಂಗಯ್ಯ ತಿಳಿಸಿದರು.</p>.<p>ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ರೇಷ್ಮೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಡಿ ತಾಲ್ಲೂಕಿನ ದಿನ್ನೆ ಹೊಸಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಬಿತ್ತನೆ ರಾಗಿ ವಿತರಿಸಿ ಮಾತನಾಡಿದರು.</p>.<p>ರಾಗಿ ಬೆಳೆಯುವುದರಲ್ಲಿ ಹಲವು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಬೇಸಿಗೆಯಲ್ಲಿ ರಾಗಿ ಬೆಳೆದರೆ ಹಾಗೂ ಪರಿವರ್ತನೆ ಮಾಡಿದರೆ ರೋಗಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.</p>.<p>ರಾಗಿಯಲ್ಲಿ ವಿವಿಧ ತಳಿಗಳು ಇವೆ. ಇದರಲ್ಲಿ ಎಂಎಲ್-365 ತಳಿಯನ್ನು ವರ್ಷಪೂರ್ತಿ ಬೆಳೆಯಬಹುದಾಗಿದೆ. ಈ ತಳಿಯನ್ನು 105 ರಿಂದ 110 ದಿನಗಳ ಒಳಗೆ ಬೆಳೆಯಬಹುದು. ಈ ರಾಗಿಯಿಂದ ಮುದ್ದೆ ಮಾಡಿದರೆ ಬೇಗ ಹಳಸುವುದಿಲ್ಲ. ಇದಕ್ಕೆ ಇಣಕು ರೋಗ ಬರುವುದಿಲ್ಲ. ಇಳುವರಿ ಹೆಚ್ಚಾಗಿ ಬರುತ್ತದೆ ಎಂದು ವಿವರಿಸಿದರು.</p>.<p>ಸಹ ಪ್ರಾಧ್ಯಾಪಕ ಸಿ. ನಾರಾಯಣಸ್ವಾಮಿ ಮಾತನಾಡಿ, ರಾಗಿಗೆ ಪೋಷಕಾಂಶ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಉಪಯೋಗಿಸಬೇಕು ಎಂದು ತಿಳಿಸಿದರು.</p>.<p>ಹವಾಮಾನಕ್ಕೆ ತಕ್ಕಂತೆ ಬೆಳೆಯುವ ಪದ್ಧತಿಯನ್ನು ಪ್ರತಿಯೊಬ್ಬ ರೈತರು ಅಳವಡಿಕೊಳ್ಳಬೇಕು ಎಂದುದರು.</p>.<p>ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಮೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮಾಲಾ, ಮುಖಂಡರಾದ ಟಿ. ರಾಜೇಂದ್ರ, ಎನ್. ಶ್ರೀನಿವಾಸ್, ರಾಜೇಶ್, ಮಂಜುನಾಥ್, ದೇವರಾಜ್, ಡಿ.ಎಂ. ಕೃಷ್ಣಪ್ಪ, ನಾರಾಯಣಸ್ವಾಮಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>