ಬೆಮಲ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ನಿವೃತ್ತಿಯಾಗಿದ್ದರೂ, ಕನ್ನಡದ ಕೆಲಸ ಮಾಡುತ್ತಲೇ ಇದ್ದಾರೆ. ಆಹ್ವಾನವಿರಲಿ, ಇಲ್ಲದೇ ಇರಲಿ ಕನ್ನಡ ಕಾರ್ಯಕ್ರಮಕ್ಕೆ ಇವರ ಹಾಜರಾತಿ ಇದ್ದೆ ಇರುತ್ತದೆ. ಕನ್ನಡ ಭಾಷೆಗೆ ಅವಮಾನವಾದರೆ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ, ಕನ್ನಡದ ಹಿರಿಯ ಹೋರಾಟಗಾರರಿಗೆ ದೂರು ಸಲ್ಲಿಸಿ, ಅದು ಸರಿಯಾಗುವ ತನಕ ಬಿಡುವುದಿಲ್ಲ. ಯಾರು ಏನೇ ಅಂದುಕೊಳ್ಳಲಿ, ಕನ್ನಡದ ಕೆಲಸ ಮಾಡುವುದಕ್ಕೆ ಅಂಜಿಕೆ ಏಕೆ ಎನ್ನುವುದು ಅವರ ಅಭಿಪ್ರಾಯ.