ಭಾನುವಾರ ರಾತ್ರಿ ಆಚರಸಲ್ಪಡುವ ಹೂವಿನ ಕರಗಕ್ಕೂ ಮುನ್ನ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ಗುರುವಾರ ಸಂಜೆ ಹಸಿಕರಗ ಮೆರವಣಿಗೆ ನಡೆಯಿತು. ಶುಕ್ರವಾರದ ಸಿಡಿ-ದೀಪೋತ್ಸವ ನಡೆಯಿತು. ಶನಿವಾರ ಕಲ್ಯಾಣೋತ್ಸವ, ಪಟಾಲಮ್ಮ-ಮುತ್ಯಾಲಮ್ಮ ಜಾತ್ರಾ ಮಹೋತ್ಸವದ ಆಚರಣೆ, ಭಾನುವಾರ ಐತಿಹಾಸಿಕ ಧರ್ಮರಾಯಸ್ವಾಮಿ ದ್ರೌಪದಾಂಬ ಹೂವಿನ ಕರಗ, ಸೋಮವಾರ ಗಾವು, ಮಂಗಳವಾರದಂದು ವಸಂತೋತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ಊರಿನ ಹೆಣ್ಣು ಮಕ್ಕಳು, ಬಂಧುಗಳು ಸೇರಿ ಸಂಭ್ರಮದಿಂದ ಆಚರಿಸಲಾಗುತ್ತದೆ.