<p>ಪ್ರಜಾವಾಣಿ ವಾರ್ತೆ</p>.<p>ಕೋಲಾರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮದನಹಳ್ಳಿ ಸಹಯೋಗದೊಂದಿಗೆ ಒಂದು ವಾರ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಸಂಸ್ಥೆಯು ಬೇಸಿಗೆ ಶಿಬಿರವನ್ನು ತಾಲ್ಲೂಕಿನ ಮದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿತ್ತು.</p>.<p>ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ ಸುರೇಶ್ ಬಾಬು ಮಾತನಾಡಿ, ‘ಎಸ್ವಿವೈಎಂ ಸಂಸ್ಥೆಯು 25 ಶಾಲೆಗಳನ್ನು ದತ್ತು ತೆಗೆದುಕೊಂಡು ಗಣಿತ ವಿಜ್ಞಾನ ಮತ್ತು ಸ್ಕಿಲ್ಲಿಂಗ್ ಲ್ಯಾಬ್ಗಳಿಗೆ ಸಾಮಗ್ರಿ ಒದಗಿಸಿದೆ. ಪ್ರತಿ ಶಾಲೆಗೂ ಶಿಕ್ಷಕರನ್ನು ಸಹ ನೀಡಿದೆ’ ಎಂದರು.</p>.<p>ಮುಖ್ಯ ಶಿಕ್ಷಕ ಬದ್ರಿನಾರಾಯಣ ಮಾತನಾಡಿ, ‘ಸಂಸ್ಥೆಯು ಬೇಸಿಗೆ ಶಿಬಿರದಲ್ಲಿ ಒಂದು ವಾರ ಉತ್ತಮ ವಿಷಯ ಕಲಿಸುತ್ತಿದೆ. ಗಡಿಯಾರ, ಮಿಕ್ಸಡ್ ಮೀಡಿಯಾ, ಸಂಚಾರ ನಿಯಮಗಳು, ವಿಲೇಜ್ ಮ್ಯಾಪಿಂಗ್, ಕ್ಷೇತ್ರ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಪನ್ಮೂಲ ವ್ಯಕ್ತಿಗಳ ಜೊತೆ ವಿದ್ಯಾರ್ಥಿಗಳ ಸಂಭಾಷಣೆ. ಈ ಎಲ್ಲಾ ಚಟುವಟಿಕೆಗಳು ಮಕ್ಕಳಲ್ಲಿ ಉತ್ಸಾಹವನ್ನು ತುಂಬಿವೆ’ ಎಂದು ಹೇಳಿದರು.</p>.<p>ಗ್ರಾಮದ ಬೈರಾ ರೆಡ್ಡಿ ಮತ್ತು ಮನೋಹರ್, ಶಾಲಾ ಶಿಕ್ಷಕ ಮುನಿರಾಜು, ಎಸ್ವಿವೈಎಂ ಸಂಸ್ಥೆಯ ಎಸ್.ಎಸ್.ಎಫ್ ಚೇತನ್, ಎಸ್.ಎಫ್ ನಂದಿನಿ ಮಾತನಾಡಿದರು.</p>.<p>ಕಾರ್ಯಕ್ರಮದಲ್ಲಿ ಶಿಕ್ಷಕರಾದ ದ್ರಾಕ್ಷಾಯಿಣಿ, ಗ್ರಾಮ ಪಂಚಾಯತಿ ಸದಸ್ಯರಾದ ರಾಮಾಂಜಿ, ಎಸ್.ವಿ.ವೈ.ಎಂ ಎಸ್.ಎಫ್ಓ ಗಳಾದ ಆನಂದ್, ಸುಷ್ಮಾ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮೈತ್ರಿ, ಆಂಜಿನಪ್ಪ, ಸದಸ್ಯರಾದ ಮಮತಾ, ವೀಣಾ, ನಾರಾಯಣಸ್ವಾಮಿ, ಸೌಮ್ಯ, ವೆಂಕಟರೋಣಪ್ಪ, ಮುನಿರಾಜು, ಆಶಾ, ಅನಿತಾ, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಕೋಲಾರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮದನಹಳ್ಳಿ ಸಹಯೋಗದೊಂದಿಗೆ ಒಂದು ವಾರ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಸಂಸ್ಥೆಯು ಬೇಸಿಗೆ ಶಿಬಿರವನ್ನು ತಾಲ್ಲೂಕಿನ ಮದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿತ್ತು.</p>.<p>ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ ಸುರೇಶ್ ಬಾಬು ಮಾತನಾಡಿ, ‘ಎಸ್ವಿವೈಎಂ ಸಂಸ್ಥೆಯು 25 ಶಾಲೆಗಳನ್ನು ದತ್ತು ತೆಗೆದುಕೊಂಡು ಗಣಿತ ವಿಜ್ಞಾನ ಮತ್ತು ಸ್ಕಿಲ್ಲಿಂಗ್ ಲ್ಯಾಬ್ಗಳಿಗೆ ಸಾಮಗ್ರಿ ಒದಗಿಸಿದೆ. ಪ್ರತಿ ಶಾಲೆಗೂ ಶಿಕ್ಷಕರನ್ನು ಸಹ ನೀಡಿದೆ’ ಎಂದರು.</p>.<p>ಮುಖ್ಯ ಶಿಕ್ಷಕ ಬದ್ರಿನಾರಾಯಣ ಮಾತನಾಡಿ, ‘ಸಂಸ್ಥೆಯು ಬೇಸಿಗೆ ಶಿಬಿರದಲ್ಲಿ ಒಂದು ವಾರ ಉತ್ತಮ ವಿಷಯ ಕಲಿಸುತ್ತಿದೆ. ಗಡಿಯಾರ, ಮಿಕ್ಸಡ್ ಮೀಡಿಯಾ, ಸಂಚಾರ ನಿಯಮಗಳು, ವಿಲೇಜ್ ಮ್ಯಾಪಿಂಗ್, ಕ್ಷೇತ್ರ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಪನ್ಮೂಲ ವ್ಯಕ್ತಿಗಳ ಜೊತೆ ವಿದ್ಯಾರ್ಥಿಗಳ ಸಂಭಾಷಣೆ. ಈ ಎಲ್ಲಾ ಚಟುವಟಿಕೆಗಳು ಮಕ್ಕಳಲ್ಲಿ ಉತ್ಸಾಹವನ್ನು ತುಂಬಿವೆ’ ಎಂದು ಹೇಳಿದರು.</p>.<p>ಗ್ರಾಮದ ಬೈರಾ ರೆಡ್ಡಿ ಮತ್ತು ಮನೋಹರ್, ಶಾಲಾ ಶಿಕ್ಷಕ ಮುನಿರಾಜು, ಎಸ್ವಿವೈಎಂ ಸಂಸ್ಥೆಯ ಎಸ್.ಎಸ್.ಎಫ್ ಚೇತನ್, ಎಸ್.ಎಫ್ ನಂದಿನಿ ಮಾತನಾಡಿದರು.</p>.<p>ಕಾರ್ಯಕ್ರಮದಲ್ಲಿ ಶಿಕ್ಷಕರಾದ ದ್ರಾಕ್ಷಾಯಿಣಿ, ಗ್ರಾಮ ಪಂಚಾಯತಿ ಸದಸ್ಯರಾದ ರಾಮಾಂಜಿ, ಎಸ್.ವಿ.ವೈ.ಎಂ ಎಸ್.ಎಫ್ಓ ಗಳಾದ ಆನಂದ್, ಸುಷ್ಮಾ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮೈತ್ರಿ, ಆಂಜಿನಪ್ಪ, ಸದಸ್ಯರಾದ ಮಮತಾ, ವೀಣಾ, ನಾರಾಯಣಸ್ವಾಮಿ, ಸೌಮ್ಯ, ವೆಂಕಟರೋಣಪ್ಪ, ಮುನಿರಾಜು, ಆಶಾ, ಅನಿತಾ, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>