<p><strong>ಶ್ರೀನಿವಾಸಪುರ</strong>: ಈಗಾಗಲೇ ನನ್ನ ಅನುದಾನದಲ್ಲಿ ₹ 5 ಕೋಟಿಯನ್ನು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೊಟ್ಟಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.</p>.<p>ಪಟ್ಟಣ ಹೊರವಲಯದ ಹೊಗಳಗೆರ ತೋಟಗಾರಿಕೆ ಇಲಾಖೆಯ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಮಾತನಾಡಿದರು.</p>.<p>ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ₹ 100 ಕೋಟಿ ಅನುದಾನ ಬರಬೇಕಿದ್ದು, ಈ ಕುರಿತು ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದೇನೆ. ತೀರ್ಪು ಬಂದ ನಂತರ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.</p>.<p>ಕ್ಷೇತ್ರಕ್ಕೆ ಸಂಬಂದಿದಂತೆ ಎಲ್ಲಾ ಬಹುತೇಕ ಗ್ರಾಮಗಳಲ್ಲಿ ಹೈಮಾಸ್ಟ್ ಲೈಟ್ಗಳನ್ನು ಅಳವಡಿಸಲಾಗಿದೆ. ಕೋಲಾರ ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳು ನಡೆಸಲು ಬೇಕಾಗಿರುವುದನ್ನ ಇಒ ಮಂಜುನಾಥ್ ಗಮನಿಸಬೇಕು ಎಂದರು.</p>.<p>ಕೆಲ ಹಳ್ಳಿಗಳಲ್ಲಿನ ರಸ್ತೆಗಳ ಬದಿಯಲ್ಲಿನ ಗಿಡಗಳು ಬೆಳೆದಿದ್ದು ಸ್ವಚ್ಛ ಮಾಡಬೇಕು. ಯಾವ ಪಂಚಾಯಿತಿಯಲ್ಲಿಯಾದರೂ ಶುದ್ಧ ನೀರಿನ ಘಟಕಗಳ ಕೆಟ್ಟು ನಿಂತಿದ್ದರೆ, ಹೈಮಾಸ್ಟ್ ಲೈಟ್ಗಳು ಕೆಟ್ಟುಹೋಗಿದ್ದರೆ ಸ್ಥಳೀಯ ಪಿಡಿಒಗಳು ಸರಿಪಡಿಸಬೇಕು ಎಂದು ಸೂಚನೆ ನೀಡಿದರು.</p>.<p>ಇಲಾಖೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ, ತಕ್ಷಣ ಸ್ಪಂದಿಸಿ, ಅವರ ಕೆಲಸ ಕಾರ್ಯಗಳನ್ನು ಮಾಡಿಸಿಕೊಡಿ ಎಂದರು.</p>.<p>ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ.ನಾರಾಯಣಸ್ವಾಮಿ, ತಾ.ಪಂ ಆಡಳಿತಾಧಿಕಾರಿ ಎಂ.ವಿ.ಮಂಜುಳಾ, ಇಒ ಕೆ.ಸರ್ವೆಶ್, ಕೋಲಾರ ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ಕೆಡಿಪಿ ಸದಸ್ಯ ಹೊಗಳಗೆರೆ ಆಂಜಿ, ಶ್ರೀನಿವಾಸಪುರ ತಾ.ಪಂ.ಎಡಿ ರಾಮಪ್ಪ, ಸಿಬ್ಬಂದಿಗ ಅರುಣದೇವಿ, ಕೆ.ಎಂ.ಶ್ರೀನಾಥ್, ಸುದರ್ಶನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ</strong>: ಈಗಾಗಲೇ ನನ್ನ ಅನುದಾನದಲ್ಲಿ ₹ 5 ಕೋಟಿಯನ್ನು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೊಟ್ಟಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.</p>.<p>ಪಟ್ಟಣ ಹೊರವಲಯದ ಹೊಗಳಗೆರ ತೋಟಗಾರಿಕೆ ಇಲಾಖೆಯ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಮಾತನಾಡಿದರು.</p>.<p>ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ₹ 100 ಕೋಟಿ ಅನುದಾನ ಬರಬೇಕಿದ್ದು, ಈ ಕುರಿತು ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದೇನೆ. ತೀರ್ಪು ಬಂದ ನಂತರ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.</p>.<p>ಕ್ಷೇತ್ರಕ್ಕೆ ಸಂಬಂದಿದಂತೆ ಎಲ್ಲಾ ಬಹುತೇಕ ಗ್ರಾಮಗಳಲ್ಲಿ ಹೈಮಾಸ್ಟ್ ಲೈಟ್ಗಳನ್ನು ಅಳವಡಿಸಲಾಗಿದೆ. ಕೋಲಾರ ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳು ನಡೆಸಲು ಬೇಕಾಗಿರುವುದನ್ನ ಇಒ ಮಂಜುನಾಥ್ ಗಮನಿಸಬೇಕು ಎಂದರು.</p>.<p>ಕೆಲ ಹಳ್ಳಿಗಳಲ್ಲಿನ ರಸ್ತೆಗಳ ಬದಿಯಲ್ಲಿನ ಗಿಡಗಳು ಬೆಳೆದಿದ್ದು ಸ್ವಚ್ಛ ಮಾಡಬೇಕು. ಯಾವ ಪಂಚಾಯಿತಿಯಲ್ಲಿಯಾದರೂ ಶುದ್ಧ ನೀರಿನ ಘಟಕಗಳ ಕೆಟ್ಟು ನಿಂತಿದ್ದರೆ, ಹೈಮಾಸ್ಟ್ ಲೈಟ್ಗಳು ಕೆಟ್ಟುಹೋಗಿದ್ದರೆ ಸ್ಥಳೀಯ ಪಿಡಿಒಗಳು ಸರಿಪಡಿಸಬೇಕು ಎಂದು ಸೂಚನೆ ನೀಡಿದರು.</p>.<p>ಇಲಾಖೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ, ತಕ್ಷಣ ಸ್ಪಂದಿಸಿ, ಅವರ ಕೆಲಸ ಕಾರ್ಯಗಳನ್ನು ಮಾಡಿಸಿಕೊಡಿ ಎಂದರು.</p>.<p>ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ.ನಾರಾಯಣಸ್ವಾಮಿ, ತಾ.ಪಂ ಆಡಳಿತಾಧಿಕಾರಿ ಎಂ.ವಿ.ಮಂಜುಳಾ, ಇಒ ಕೆ.ಸರ್ವೆಶ್, ಕೋಲಾರ ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ಕೆಡಿಪಿ ಸದಸ್ಯ ಹೊಗಳಗೆರೆ ಆಂಜಿ, ಶ್ರೀನಿವಾಸಪುರ ತಾ.ಪಂ.ಎಡಿ ರಾಮಪ್ಪ, ಸಿಬ್ಬಂದಿಗ ಅರುಣದೇವಿ, ಕೆ.ಎಂ.ಶ್ರೀನಾಥ್, ಸುದರ್ಶನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>