ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊತ್ತೂರು ಮಂಜುನಾಥ್ ಕೋಲಾರದಲ್ಲಿ ಶಾಸಕರಾಗುತ್ತಾರೆ ಎನ್ನುವ ಕನಸು ಯಾರಿಗಾದರೂ ಬಂದಿತ್ತೇ? ಅವರು ಕ್ಷೇತ್ರದ ಒಡನಾಟ ಇಟ್ಟುಕೊಂಡಿದ್ದರು, ಹೈಕಮಾಂಡ್ ಸೂಚಿಸಿದ ತಕ್ಷಣ ಸ್ಪರ್ಧಿಸಿ ಗೆದ್ದರು. ಅದೇ ರೀತಿ ಕ್ಷೇತ್ರದ ಒಡನಾಟವಿರುವ ಅಭ್ಯರ್ಥಿಯನ್ನು ಕಣಕ್ಕಿಸಲಾಗುತ್ತದೆ. ಕಾಂಗ್ರೆಸ್ ಪಕ್ಷವು ಸಮುದ್ರವಿದ್ದಂತೆ. ಹೀಗಾಗಿ, ಆಕಾಂಕ್ಷಿಗಳು ಹೆಚ್ಚಾಗಿ ಇದ್ದಾರೆ’ ಎಂದರು.