ಕೋಲಾರ: ಸ್ವಾತಂತ್ರ್ಯ ಅಮೃತ ಮಹೋತ್ಸವd ಪ್ರಯುಕ್ತ ಅಮೃತ್ ಸರೋವರ್ ಯೋಜನೆಯಡಿ ಜಿಲ್ಲೆಯ ಕೆರೆಗಳ ಶುದ್ಧೀಕರಣ, ಪುನರುಜ್ಜೀವನ ಹಾಗೂ ಸುಂದರೀಕರಣ ಕಾಮಗಾರಿಗೆ ಬೇಗನೇ ಚಾಲನೆ ನೀಡಬೇಕು ಎಂದು ಸಂಸದ ಎಸ್. ಮುನಿಸ್ವಾಮಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂಬಂಧ ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಯೋಜನೆಗೆ ಬಿಡುಗಡೆಯಾಗಿರುವ ₹ 24 ಕೋಟಿ ಅನುದಾನ ಸಂಬಂಧ ಪರಿಶೀಲನೆ ನಡೆಸಿದರು.
‘ಕಾಮಗಾರಿಗೆ ಚಾಲನೆ ನೀಡಿ ಕೆರೆಗಳನ್ನು ಪುನರುಜ್ಜೀವನ ಗೊಳಿಸಿ, ಸುಂದರವಾಗಿಸಬೇಕು’ ಎಂದರು.
ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಜಿಲ್ಲೆಯ ಎಲ್ಲಾ ತಾಲ್ಲೂಕು ಅಧಿಕಾರಿಗಳು, ತಹಶೀಲ್ದಾರ್ ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಇದ್ದರು.