‘ಹಣಕ್ಕಾಗಿ ಮಾರಿಕೊಂಡವರಿಗೆ, ಮುಂಬೈಗೆ ಹೋದವರಿಗೆ, ಕ್ಷೇತ್ರದ ಹೊರಗಿನವರಿಗೆ, ಜಿಲ್ಲೆಯ ಅಭಿವೃದ್ಧಿ ಮಾಡದವರಿಗೆ, ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರೂ ನಿರ್ಲಕ್ಷಿಸಿರುವವರಿಗೆ, ರೈತರ ಸಮಸ್ಯೆಗಳಿಗೆ ಸ್ಪಂದಿಸದವರಿಗೆ, ರೈತರ ಮೇಲೆ ಗೋಲಿಬಾರ್ ನಡೆಸಿರುವ ಸರ್ಕಾರಗಳಿಗೆ ಕೋಲಾರದ ಮತದಾರರು ಮತದಾನ ಮಾಡುವುದಿಲ್ಲ’ ಎಂದು ನಗರದ ಎಪಿಎಂಸಿ ಮಾರುಕಟ್ಟೆಯ ಸಮೀಪದ ನರಸಿಂಹಸ್ವಾಮಿ ದೇಗುಲ ಬಳಿ ಪ್ರಮಾಣ ಮಾಡಿದ್ದಾರೆ.