ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ | ಮಂಜುನಾಥಗೌಡ ಗೆದ್ದರೆ ರಾಜಕೀಯ ನಿವೃತ್ತಿ: ನಂಜೇಗೌಡ ಸವಾಲು

Published : 18 ಸೆಪ್ಟೆಂಬರ್ 2025, 5:56 IST
Last Updated : 18 ಸೆಪ್ಟೆಂಬರ್ 2025, 5:56 IST
ಫಾಲೋ ಮಾಡಿ
Comments
ಮರು ಮತ ಎಣಿಕೆ ನಡೆಯಲಿ ಅಥವಾ ಹೊಸದಾಗಿ ಚುನಾವಣೆ ನಡೆಯಲಿ ಮಂಜುನಾಥಗೌಡಗೆ ಮತ್ತೊಮ್ಮೆ ಸೋಲು ಕಟ್ಟಿಟ್ಟ ಬುತ್ತಿ. ಆತ ಮತ್ತೆ ಮಾಲೂರಿನಲ್ಲಿ ಶಾಸಕ ಆಗಲ್ಲ
ಕೆ.ವೈ.ನಂಜೇಗೌಡ ಶಾಸಕ
ಸುರ್ಜೇವಾಲಾ ಸಿ.ಎಂ ಮಾತನಾಡಿದ್ದಾರೆ
‘ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸೇರಿದಂತೆ ಅನೇಕರು ನನ್ನ ಜೊತೆ ಮಾತನಾಡಿದ್ದಾರೆ. ಈ ಪ್ರಕರಣದಿಂದ ಜನರಲ್ಲಿ ನನ್ನ ಬಗ್ಗೆ ಕನಿಕರ ಬಂದಿದೆ’ ಎಂದು ನಂಜೇಗೌಡ ಹೇಳಿದರು
ಬೆಂಗಳೂರಿನಿಂದ ಬಂದು ಹೋಗುವ ರಿಯಲ್‌ ಎಸ್ಟೇಟ್‌ದಾರ ನಾನಲ್ಲ
‘ನಾನು 1986ರಿಂದ ಮಾಲೂರು ತಾಲ್ಲೂಕಿನಲ್ಲಿ ರಾಜಕಾರಣದಲ್ಲಿದ್ದೇನೆ. ಕ್ಷೇತ್ರದ ಜನ ನನಗೆ ಹಲವು ಅವಕಾಶ ಮಾಡಿಕೊಟ್ಟಿದ್ದಾರೆ. ಹೈಕೋರ್ಟ್‌ ಆದೇಶ ಬಂದ ದಿನ ಮಧ್ಯರಾತ್ರಿವರೆಗೆ ಜನರು ನನ್ನ ಮನೆ ಬಳಿ ಇದ್ದರು ಬೆಳಿಗ್ಗೆ ಮತ್ತೆ ಸಾವಿರಾರು ಜನ ಸೇರಿದ್ದರು. ಬೆಂಗಳೂರಿನಿಂದ ಮಾಲೂರು ಕ್ಷೇತ್ರಕ್ಕೆ ಬಂದು ಹೋಗುವ ರಿಯಲ್‌ ಎಸ್ಟೇಟ್‌ದಾರರಂತೆ ನಾನು ಅಲ್ಲ’ ಎಂದು ನಂಜೇಗೌಡ ಹೇಳಿದರು.  ‘ಹಣೇಲಿ ಬರೆದಿದ್ದರೆ ಮುಂದೆ ಮಂತ್ರಿ ಆಗುತ್ತೇನೆ ಇಲ್ಲದಿದ್ದರೆ ಮನೆಯಲ್ಲಿರುತ್ತೇನೆ. ಅ.31ಕ್ಕೆ ಮಾಲೂರು ಕ್ಷೇತ್ರದಲ್ಲಿ ನಿಗದಿಯಾಗಿರುವ ಮುಖ್ಯಮಂತ್ರಿ ಕಾರ್ಯಕ್ರಮ ನಡೆಯುತ್ತದೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT