ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮುಳಬಾಗಿಲು: ರಾಜಕಾಲುವೆಯಲ್ಲಿ ಗಿಡಗಂಟಿಗಳ ಕಾಡು

Published : 18 ಅಕ್ಟೋಬರ್ 2024, 6:58 IST
Last Updated : 18 ಅಕ್ಟೋಬರ್ 2024, 6:58 IST
ಫಾಲೋ ಮಾಡಿ
Comments
ರಾಜ ಕಾಲುವೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಸ್ವಚ್ಛತೆ, ನೂತನ ಕಾಲುವೆ ನಿರ್ಮಾಣ ಹಾಗೂ ಗಿಡಗಂಟಿ ತೆರವು ಜವಾಬ್ದಾರಿ ಆ ಇಲಾಖೆಯದ್ದೇ ಆಗಿರುತ್ತದೆ. ಕಾಲುವೆಗೂ ಪಂಚಾಯಿತಿಗೂ ಸಂಬಂಧವಿಲ್ಲ.
–ಚಂದ್ರಶೇಖರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಮಣ್ಣಿನ ಕಾಲುವೆಯನ್ನು ಸಿಮೆಂಟ್, ಕಲ್ಲು ಅಥವಾ ಕಾಂಕ್ರೀಟ್‌ನಿಂದ ನಿರ್ಮಿಸಿದರೆ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆಯಲಾರವು. ನೀರು ಸಹ ಸರಾಗವಾಗಿ ಹರಿಯುತ್ತದೆ. ಆದರೆ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ
–ಸ್ಥಳೀಯ ನಿವಾಸಿಗಳು
ಬೈರಕೂರು ರಾಜಕಾಲುವೆ ಸ್ಥಿತಿ ಹಾಗೂ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
–ಬಿ.ಆರ್.ಮುನಿವೆಂಕಟಪ್ಪ, ತಹಶೀಲ್ದಾರ್
ಮನೆಗಳಿಗೆ ನುಗ್ಗುವ ಹಾವು
ಕಾಲುವೆಯಲ್ಲಿ ಬೆಳೆದ ಬೃಹತ್ ಮಟ್ಟದ ಪೊದೆಗಳಲ್ಲಿ ಅಡಗಿರುವ ಹಾವು ಸೇರಿದಂತೆ ಇನ್ನಿತರ ವಿಷಜಂತುಗಳು ಕೆಲವೊಮ್ಮೆ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿವೆ. ಹಾವುಗಳು ಚಿಕ್ಕ ಮಕ್ಕಳನ್ನು ಕಚ್ಚುತ್ತವೆ ಎಂಬ ಭೀತಿ ಸ್ಥಳೀಯರಲ್ಲಿದೆ. ಸಾಂಕ್ರಾಮಿಕ ರೋಗಗಳ ಭೀತಿ: ಕಾಲುವೆಯಲ್ಲಿ ನೀರು ಕೊಳೆತು ಪಾಚಿಗಟ್ಟಿದ್ದು, ಕೊಳೆತ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಹಗಲು–ರಾತ್ರಿ ಎನ್ನದೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಜನರು ಮಲೇರಿಯಾ, ಡೆಂಗೀ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT