ಪನಸಮಾಕನಹಳ್ಳಿ ಗ್ರಾಮದ ಶಿಕ್ಷಕ ನಾರಾಯಣಸ್ವಾಮಿ ತಮ್ಮ ಸ್ನೇಹಿತರೊಂದಿಗೆ ಶುಕ್ರವಾರ ಬೆಳಿಗ್ಗೆ ರೈಲು ಹಳಿಗಳ ಪಕ್ಕದಲ್ಲಿ ವಾಯುವಿಹಾರಕ್ಕೆ ತೆರಳಿದ್ದಾಗ, ರೈಲು ಹಳಿಗಳ ಮಧ್ಯೆ ಸಿಕ್ಕಿಕೊಂಡು, ಜಲ್ಲಿ ಕಲ್ಲುಗಳ ಮೇಲೆ ನಡೆಯಲು ಕಷ್ಟಪಡುತ್ತಿದ್ದ ಆಮೆಯನ್ನು
ನೋಡಿ, ಎತ್ತಿ ಸಮತಟ್ಟಾದ ಪ್ರದೇಶದಲ್ಲಿನ ಪೊದೆಯೊಂದರ ಕೆಳಗೆ ಬಿಡುವ ಮೂಲಕ ಪ್ರಾಣಿ ದಯೆ ಮೆರೆದಿದ್ದಾರೆ.