<p><strong>ಮಂಗಸಂದ್ರ (ಕೋಲಾರ):</strong> ಕಾಲು ನೋವಿನಿಂದ ಅಸ್ವಸ್ಥಗೊಂಡಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.</p>.<p>ಗ್ರಾಮದ ಬಳಿ ಹುಲ್ಲಿನ ಮೆದೆಯಡಿ ಸಿಲುಕಿ ಒಂದು ವರ್ಷದ ಗಂಡು ಚಿರತೆಯು ಅಸ್ವಸ್ಥಗೊಂಡಿತ್ತು. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಬನ್ನೇರುಘಟ್ಟದಿಂದಬಂದಿದ್ದ ಉಮಾಶಂಕರ್ ಹಾಗೂ ಕೋಲಾರ ಆರ್ಎಫ್ಒ ವಾಸುದೇವಮೂರ್ತಿ ಅವರನ್ನು ಒಳಗೊಂಡ ತಂಡದ ಸದಸ್ಯರು ರಕ್ಷಿಸಿದ್ದಾರೆ.</p>.<p>ಬಲೆಯ ನೆರವಿನಿಂದ ಬೋನಿಗೆ ಹಾಕಿಕೊಂಡು ಚಿಕಿತ್ಸೆ ನೀಡಲು ವಾಹನದಲ್ಲಿ ಬನ್ನೇರು ಘಟ್ಟಕ್ಕೆ<br />ಕೊಂಡೊಯ್ದರು.</p>.<p>‘ವಾರದಿಂದ ಗ್ರಾಮದ ಸುತ್ತಮುತ್ತ ಓಡಾಡಿಕೊಂಡಿತ್ತು. ಕಾಲು ಹಾಗೂ ಸೊಂಟದ ನೋವಿನಿಂದ ಬಳಲುತಿತ್ತು. ಕರು ತಿನ್ನಲು ಬಂದಿದ್ದು, ಸ್ಥಳೀಯರು ಓಡಿಸಿದ್ದಾರೆ. ಆಗ ಹುಲ್ಲಿನ ಮೆದೆ ಅಡಿಗೆ ತೆರಳಿತು. ಬರಲು ಸಾಧ್ಯವಾಗಲಿಲ್ಲ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳಿವೆ. ನಾಯಿ, ಕರು, ಕುರಿ, ಮೇಕೆ ಹಿಡಿಯುತ್ತಿದ್ದು ನಮಗೆ ರಾತ್ರಿ ನಿದ್ದೆ ಇಲ್ಲದಂತಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮವಹಿಸಬೇಕು’ ಎಂದು ಗ್ರಾಮಸ್ಥರು<br />ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಸಂದ್ರ (ಕೋಲಾರ):</strong> ಕಾಲು ನೋವಿನಿಂದ ಅಸ್ವಸ್ಥಗೊಂಡಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.</p>.<p>ಗ್ರಾಮದ ಬಳಿ ಹುಲ್ಲಿನ ಮೆದೆಯಡಿ ಸಿಲುಕಿ ಒಂದು ವರ್ಷದ ಗಂಡು ಚಿರತೆಯು ಅಸ್ವಸ್ಥಗೊಂಡಿತ್ತು. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಬನ್ನೇರುಘಟ್ಟದಿಂದಬಂದಿದ್ದ ಉಮಾಶಂಕರ್ ಹಾಗೂ ಕೋಲಾರ ಆರ್ಎಫ್ಒ ವಾಸುದೇವಮೂರ್ತಿ ಅವರನ್ನು ಒಳಗೊಂಡ ತಂಡದ ಸದಸ್ಯರು ರಕ್ಷಿಸಿದ್ದಾರೆ.</p>.<p>ಬಲೆಯ ನೆರವಿನಿಂದ ಬೋನಿಗೆ ಹಾಕಿಕೊಂಡು ಚಿಕಿತ್ಸೆ ನೀಡಲು ವಾಹನದಲ್ಲಿ ಬನ್ನೇರು ಘಟ್ಟಕ್ಕೆ<br />ಕೊಂಡೊಯ್ದರು.</p>.<p>‘ವಾರದಿಂದ ಗ್ರಾಮದ ಸುತ್ತಮುತ್ತ ಓಡಾಡಿಕೊಂಡಿತ್ತು. ಕಾಲು ಹಾಗೂ ಸೊಂಟದ ನೋವಿನಿಂದ ಬಳಲುತಿತ್ತು. ಕರು ತಿನ್ನಲು ಬಂದಿದ್ದು, ಸ್ಥಳೀಯರು ಓಡಿಸಿದ್ದಾರೆ. ಆಗ ಹುಲ್ಲಿನ ಮೆದೆ ಅಡಿಗೆ ತೆರಳಿತು. ಬರಲು ಸಾಧ್ಯವಾಗಲಿಲ್ಲ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳಿವೆ. ನಾಯಿ, ಕರು, ಕುರಿ, ಮೇಕೆ ಹಿಡಿಯುತ್ತಿದ್ದು ನಮಗೆ ರಾತ್ರಿ ನಿದ್ದೆ ಇಲ್ಲದಂತಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮವಹಿಸಬೇಕು’ ಎಂದು ಗ್ರಾಮಸ್ಥರು<br />ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>