‘ವಾರದಿಂದ ಗ್ರಾಮದ ಸುತ್ತಮುತ್ತ ಓಡಾಡಿಕೊಂಡಿತ್ತು. ಕಾಲು ಹಾಗೂ ಸೊಂಟದ ನೋವಿನಿಂದ ಬಳಲುತಿತ್ತು. ಕರು ತಿನ್ನಲು ಬಂದಿದ್ದು, ಸ್ಥಳೀಯರು ಓಡಿಸಿದ್ದಾರೆ. ಆಗ ಹುಲ್ಲಿನ ಮೆದೆ ಅಡಿಗೆ ತೆರಳಿತು. ಬರಲು ಸಾಧ್ಯವಾಗಲಿಲ್ಲ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳಿವೆ. ನಾಯಿ, ಕರು, ಕುರಿ, ಮೇಕೆ ಹಿಡಿಯುತ್ತಿದ್ದು ನಮಗೆ ರಾತ್ರಿ ನಿದ್ದೆ ಇಲ್ಲದಂತಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮವಹಿಸಬೇಕು’ ಎಂದು ಗ್ರಾಮಸ್ಥರು
ಆಗ್ರಹಿಸಿದರು.