ಜಿಲ್ಲೆಯಲ್ಲಿ ಮಳೆ ಕೊರತೆ ಇಲ್ಲ. ಬಿತ್ತನೆ ಪ್ರಮಾಣ ಆಶಾದಾಯಕವಾಗಿದೆ. ತೊಗರಿ 300 ಹೆಕ್ಟೇರ್ನಲ್ಲಿ ಹಾಗೂ ನೆಲಗಡಲೆ 380 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ
ಎಂ.ಆರ್.ಸುಮಾ ಕೃಷಿ ಜಂಟಿ ನಿರ್ದೇಶಕಿ ಕೋಲಾರ
ಬೆಳೆ ವಿಮೆ ನೋಂದಣಿಗೆ ಗಡುವು
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಹೆಸರು ನೋಂದಾಯಿಸಲಾಗುತ್ತಿದೆ. ಜಿಲ್ಲೆಯ ಅಧಿಸೂಚಿತ ಬೆಳೆಗಳಾದ ಮಳೆಯಾಶ್ರಿತ ನೆಲಗಡಲೆ (ಶೇಂಗಾ) ಬೆಳೆಗೆ ಜುಲೈ 1ರ ವರೆಗೆ ಟೊಮೆಟೊ ಮಳೆಯಾಶ್ರಿತ ತೊಗರಿ ಮಳೆಯಾಶ್ರಿತ ಭತ್ತ ಬೆಳೆಗಳಿಗೆ ಜುಲೈ 31ರ ವರೆಗೆ ಹಾಗೂ ನೀರಾವರಿ ಹಾಗೂ ಮಳೆಯಾಶ್ರಿತ ರಾಗಿ ನೀರಾವರಿಯಾಶ್ರಿತ ಭತ್ತ ಮಳೆಯಾಶ್ರಿತ ಹುರಳಿ ಬೆಳೆಗಳಿಗೆ ಆಗಸ್ಟ್ 16 ಕೊನೆಯ ದಿನವಾಗಿರುತ್ತದೆ. ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ ನಾಟಿ ಮಾಡಲು ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುತ್ತದೆ.