<p><strong>ಮಾಲೂರು:</strong> ಪಟ್ಟಣದಲ್ಲಿ ಶಿಕ್ಷಕರ ಭವನ ನಿರ್ಮಾಣ ಮಾಡಬೇಕು ಎಂಬ ಕನಸಿಗೆ ಎರಡು ದಶಕ ಪೂರ್ಣವಾಗಿದೆ. 2017ರಲ್ಲಿ ಕಾಮಗಾರಿ ಆರಂಭವಾಗಿ ಸಿಮೆಂಟ್ ಪಿಲ್ಲರ್ಗಳ ಹಂತಕ್ಕೆ ಬಂದು ಮತ್ತೆ ಸ್ಥಗಿತಗೊಂಡಿದೆ.</p>.<p>ಪಟ್ಟಣದ ಕೋರ್ಟ್ ವಸತಿ ಗೃಹಗಳ ಪಕ್ಕದಲ್ಲೇ ಇರುವ 20 ಗುಂಟೆ ಜಮೀನು 1975-76ರಲ್ಲಿ ಸರ್ಕಾರದಿಂದ ಮಂಜೂರಾಗಿದೆ. ಶಿಕ್ಷಕರ ಸಂಘಗಳಲ್ಲಿನಹೊಂದಾಣಿಕೆ ಕೊರತೆ, ಅಧಿಕಾರಿಗಳ ಅಸಡ್ಡೆ , ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಫಲವೆನ್ನುವಂತೆ ಶಿಕ್ಷಕರ ಭವನ ಕಾಮಗಾರಿ 2016ರವರೆಗೂ ಆರಂಭವಾಗಿರಲಿಲ್ಲ. 2017ರಲ್ಲಿ ಅಂದಿನ ಜೆಡಿಎಸ್ ಶಾಸಕ ಕೆ.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ, ಶಿಕ್ಷಕರ ಸಂಘದ ಅಧ್ಯಕ್ಷರುಗಳನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು.</p>.<p>ಶಿಕ್ಷಕರ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ₹1.25 ಕೋಟಿ ಯೋಜನೆ ರೂಪಿಸಿದ್ದು, ತಾಲ್ಲೂಕಿನಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಒಂದು ದಿನ ವೇತನವನ್ನು ಕಟ್ಟಡ ಕಾಮಗಾರಿಗೆ ನೀಡಿದ್ದಾರೆ. ಇದರ ಜೊತೆಗೆ ಕೆ.ಎಸ್.ಮಂಜುನಾಥಗೌಡರ ಸಹಕಾರದಿಂದಸುಮಾರು ₹17 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ, ಪಿಲ್ಲರ್ಗಳ ಹಂತಕ್ಕೆ ಕಾಮಗಾರಿ ಬಂದಿದೆ. ನಂತರ ಎರಡು ವರ್ಷಗಳು ಕಳೆದರೂ ಶಿಕ್ಷಕರ ಭವನ ಕಟ್ಟಡ ಕಾಮಗಾರಿ ಆರಂಭವಾಗದೆ, ಗಿಡಗಳು ಬೆಳೆದು ಸಾರ್ವಜನಿಕರ ಮೂತ್ರ ವಿಸರ್ಜನೆ ತಾಣವಾಗಿದೆ.</p>.<p><strong>ದೇಣಿಗೆ ಸಂಗ್ರಹ: </strong>ಕಳೆದ ಎರಡು ವರ್ಷದಲ್ಲಿ ಸಮಿತಿ ಒಂದೇ ಒಂದು ಸಭೆ ನಡೆಸಿಲ್ಲ. ಶೇ 25ರಷ್ಟು ಹಣ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದರೆ, ಶಿಕ್ಷಕರ ಕಲ್ಯಾಣ ನಿಧಿಯಿಂದ ಸುಮಾರು ₹ 50ಲಕ್ಷ ಬಿಡುಗಡೆ<br />ಯಾಗುತ್ತಿತ್ತು ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ನರಸಿಂಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು:</strong> ಪಟ್ಟಣದಲ್ಲಿ ಶಿಕ್ಷಕರ ಭವನ ನಿರ್ಮಾಣ ಮಾಡಬೇಕು ಎಂಬ ಕನಸಿಗೆ ಎರಡು ದಶಕ ಪೂರ್ಣವಾಗಿದೆ. 2017ರಲ್ಲಿ ಕಾಮಗಾರಿ ಆರಂಭವಾಗಿ ಸಿಮೆಂಟ್ ಪಿಲ್ಲರ್ಗಳ ಹಂತಕ್ಕೆ ಬಂದು ಮತ್ತೆ ಸ್ಥಗಿತಗೊಂಡಿದೆ.</p>.<p>ಪಟ್ಟಣದ ಕೋರ್ಟ್ ವಸತಿ ಗೃಹಗಳ ಪಕ್ಕದಲ್ಲೇ ಇರುವ 20 ಗುಂಟೆ ಜಮೀನು 1975-76ರಲ್ಲಿ ಸರ್ಕಾರದಿಂದ ಮಂಜೂರಾಗಿದೆ. ಶಿಕ್ಷಕರ ಸಂಘಗಳಲ್ಲಿನಹೊಂದಾಣಿಕೆ ಕೊರತೆ, ಅಧಿಕಾರಿಗಳ ಅಸಡ್ಡೆ , ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಫಲವೆನ್ನುವಂತೆ ಶಿಕ್ಷಕರ ಭವನ ಕಾಮಗಾರಿ 2016ರವರೆಗೂ ಆರಂಭವಾಗಿರಲಿಲ್ಲ. 2017ರಲ್ಲಿ ಅಂದಿನ ಜೆಡಿಎಸ್ ಶಾಸಕ ಕೆ.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ, ಶಿಕ್ಷಕರ ಸಂಘದ ಅಧ್ಯಕ್ಷರುಗಳನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು.</p>.<p>ಶಿಕ್ಷಕರ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ₹1.25 ಕೋಟಿ ಯೋಜನೆ ರೂಪಿಸಿದ್ದು, ತಾಲ್ಲೂಕಿನಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಒಂದು ದಿನ ವೇತನವನ್ನು ಕಟ್ಟಡ ಕಾಮಗಾರಿಗೆ ನೀಡಿದ್ದಾರೆ. ಇದರ ಜೊತೆಗೆ ಕೆ.ಎಸ್.ಮಂಜುನಾಥಗೌಡರ ಸಹಕಾರದಿಂದಸುಮಾರು ₹17 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ, ಪಿಲ್ಲರ್ಗಳ ಹಂತಕ್ಕೆ ಕಾಮಗಾರಿ ಬಂದಿದೆ. ನಂತರ ಎರಡು ವರ್ಷಗಳು ಕಳೆದರೂ ಶಿಕ್ಷಕರ ಭವನ ಕಟ್ಟಡ ಕಾಮಗಾರಿ ಆರಂಭವಾಗದೆ, ಗಿಡಗಳು ಬೆಳೆದು ಸಾರ್ವಜನಿಕರ ಮೂತ್ರ ವಿಸರ್ಜನೆ ತಾಣವಾಗಿದೆ.</p>.<p><strong>ದೇಣಿಗೆ ಸಂಗ್ರಹ: </strong>ಕಳೆದ ಎರಡು ವರ್ಷದಲ್ಲಿ ಸಮಿತಿ ಒಂದೇ ಒಂದು ಸಭೆ ನಡೆಸಿಲ್ಲ. ಶೇ 25ರಷ್ಟು ಹಣ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದರೆ, ಶಿಕ್ಷಕರ ಕಲ್ಯಾಣ ನಿಧಿಯಿಂದ ಸುಮಾರು ₹ 50ಲಕ್ಷ ಬಿಡುಗಡೆ<br />ಯಾಗುತ್ತಿತ್ತು ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ನರಸಿಂಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>