<p><strong>ಕೋಲಾರ</strong>: ‘ಸಮಾಜದ ಸ್ವಾಸ್ಥ್ಯ ಕೆಟ್ಟಿದ್ದು, ಪ್ರತಿನಿತ್ಯ ಅಶಾಂತಿ ನೋಡುತ್ತಿದ್ದೇವೆ. ಈ ವಿಷಮ ಸ್ಥಿತಿಗೆ ನಾವೇ ಕಾರಣರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಮಾರ್ಮಿಕವಾಗಿ ನುಡಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಸಂವಾದದಲ್ಲಿ ಮಾತನಾಡಿ, ‘5 ಶಕ್ತಿಗಳು ಇಡೀ ಸಮಾಜವನ್ನು ನಿಯಂತ್ರಿಸುತ್ತಿವೆ. ಪುರೋಹಿತಶಾಹಿ, ಅಧಿಕಾರಶಾಹಿ, ರಾಜಕೀಯಶಾಹಿ, ಬಂಡವಾಳಶಾಹಿ ಹಾಗೂ ಭೂಒಡೆಯರ ಹಿಡಿತದಲ್ಲಿ ಇಡೀ ವ್ಯವಸ್ಥೆ ಒದ್ದಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ರಾಜಕೀಯಶಾಹಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಅದನ್ನು ನಾವು ಸರಿಯಾಗಿ ವಿವೇಚಿಸಿ ತಿಳಿದುಕೊಳ್ಳಬೇಕು. ಇಂದಿನ ಈ ಸ್ಥಿತಿಗೆ ನಾವೆಲ್ಲಾ ಕಾರಣರು. ಹಿಂದೆ ಸರ್ಕಾರಗಳು ಹೋರಾಟಗಾರರನ್ನು ನೋಡಿ ಹೆದರಿಕೊಳ್ಳುತ್ತಿದ್ದವು, ಚಳವಳಿಗೆ ಬೆಲೆಯಿತ್ತು. ಆದರೆ, ಈಗ ಸ್ವಾರ್ಥಕ್ಕೆ ಹಾಗೂ ಸ್ವಂತ ಜೀವನಕ್ಕೆ ಹೋರಾಟಗಳು ದಾರಿ ತಪ್ಪಿದ್ದರಿಂದ ಈ ದುಸ್ಥಿತಿ ಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ. ನಾವೇ ಅಧಿಕಾರಕ್ಕೆ ತಂದಿರುವ ಸರ್ಕಾರಗಳು ನಮ್ಮನ್ನು ಹೇಗೆ ನಡೆಸಿಕೊಳ್ಳಬಲ್ಲವು ಎಂಬ ಮುಂದಾಲೋಚನೆ ಮತ್ತು ಜವಾಬ್ದಾರಿ ಇರಬೇಕು. ಈ ಎಚ್ಚರ ತಪ್ಪಿದಾಗ ಪ್ರಜಾಪ್ರಭುತ್ವದ ವಿರುದ್ಧದ ಸನ್ನಿವೇಶ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.</p>.<p>‘ಪ್ರಜಾಪ್ರಭುತ್ವವು ಮತದಾನದ ಹಕ್ಕು ನೀಡಿದೆ. ನಾವು ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಆಲೋಚಿಸಬೇಕು. ವ್ಯವಸ್ಥೆಯಲ್ಲಿ ನಾವೇ ಮೆಚ್ಚಿಕೊಂಡು ಅಧಿಕಾರ ಕೊಟ್ಟಿದ್ದೇವೆ. ನಾವು ಯೋಚನೆ ಮಾಡದೆಯೇ ಅವರಿಗೆ ಅಧಿಕಾರ ಕೊಟ್ಟು ಆಳುವವರನ್ನು ನಿಂದಿಸುವಂತಾಗಿದೆ’ ಎಂದರು.</p>.<p><strong>ದಲಿತ ಪದ: </strong>‘ಅಂಬೇಡ್ಕರ್ ಎಲ್ಲಿಯೂ ದಲಿತ ಎಂಬ ಪದ ಬಳಕೆ ಮಾಡಿರಲಿಲ್ಲ. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ದಲಿತ ಪದ ಬಳಸದೆ ಬಹುಜನ ಎಂಬ ಪದ ಬಳಕೆ ಮಾಡಿ ಆ ಜನಾಂಗ ಅನುಭವಿಸುತ್ತಿರುವ ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದರೆ, ಅವರ ಅನುಯಾಯಿಗಳು ದಲಿತ ಎಂಬ ಪದ ಹುಟ್ಟು ಹಾಕಿದರು. ಆದರೆ, ಮಹಾರಾಷ್ಟ್ರ ಹೈಕೋರ್ಟ್ ದಲಿತ ಎಂಬ ಪದವನ್ನು ರದ್ದುಪಡಿಸಿ ಅದನ್ನು ಬಳಸದಂತೆ ಎಚ್ಚರಿಕೆ ನೀಡಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ‘ಸಮಾಜದ ಸ್ವಾಸ್ಥ್ಯ ಕೆಟ್ಟಿದ್ದು, ಪ್ರತಿನಿತ್ಯ ಅಶಾಂತಿ ನೋಡುತ್ತಿದ್ದೇವೆ. ಈ ವಿಷಮ ಸ್ಥಿತಿಗೆ ನಾವೇ ಕಾರಣರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಮಾರ್ಮಿಕವಾಗಿ ನುಡಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಸಂವಾದದಲ್ಲಿ ಮಾತನಾಡಿ, ‘5 ಶಕ್ತಿಗಳು ಇಡೀ ಸಮಾಜವನ್ನು ನಿಯಂತ್ರಿಸುತ್ತಿವೆ. ಪುರೋಹಿತಶಾಹಿ, ಅಧಿಕಾರಶಾಹಿ, ರಾಜಕೀಯಶಾಹಿ, ಬಂಡವಾಳಶಾಹಿ ಹಾಗೂ ಭೂಒಡೆಯರ ಹಿಡಿತದಲ್ಲಿ ಇಡೀ ವ್ಯವಸ್ಥೆ ಒದ್ದಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ರಾಜಕೀಯಶಾಹಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಅದನ್ನು ನಾವು ಸರಿಯಾಗಿ ವಿವೇಚಿಸಿ ತಿಳಿದುಕೊಳ್ಳಬೇಕು. ಇಂದಿನ ಈ ಸ್ಥಿತಿಗೆ ನಾವೆಲ್ಲಾ ಕಾರಣರು. ಹಿಂದೆ ಸರ್ಕಾರಗಳು ಹೋರಾಟಗಾರರನ್ನು ನೋಡಿ ಹೆದರಿಕೊಳ್ಳುತ್ತಿದ್ದವು, ಚಳವಳಿಗೆ ಬೆಲೆಯಿತ್ತು. ಆದರೆ, ಈಗ ಸ್ವಾರ್ಥಕ್ಕೆ ಹಾಗೂ ಸ್ವಂತ ಜೀವನಕ್ಕೆ ಹೋರಾಟಗಳು ದಾರಿ ತಪ್ಪಿದ್ದರಿಂದ ಈ ದುಸ್ಥಿತಿ ಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ. ನಾವೇ ಅಧಿಕಾರಕ್ಕೆ ತಂದಿರುವ ಸರ್ಕಾರಗಳು ನಮ್ಮನ್ನು ಹೇಗೆ ನಡೆಸಿಕೊಳ್ಳಬಲ್ಲವು ಎಂಬ ಮುಂದಾಲೋಚನೆ ಮತ್ತು ಜವಾಬ್ದಾರಿ ಇರಬೇಕು. ಈ ಎಚ್ಚರ ತಪ್ಪಿದಾಗ ಪ್ರಜಾಪ್ರಭುತ್ವದ ವಿರುದ್ಧದ ಸನ್ನಿವೇಶ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.</p>.<p>‘ಪ್ರಜಾಪ್ರಭುತ್ವವು ಮತದಾನದ ಹಕ್ಕು ನೀಡಿದೆ. ನಾವು ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಆಲೋಚಿಸಬೇಕು. ವ್ಯವಸ್ಥೆಯಲ್ಲಿ ನಾವೇ ಮೆಚ್ಚಿಕೊಂಡು ಅಧಿಕಾರ ಕೊಟ್ಟಿದ್ದೇವೆ. ನಾವು ಯೋಚನೆ ಮಾಡದೆಯೇ ಅವರಿಗೆ ಅಧಿಕಾರ ಕೊಟ್ಟು ಆಳುವವರನ್ನು ನಿಂದಿಸುವಂತಾಗಿದೆ’ ಎಂದರು.</p>.<p><strong>ದಲಿತ ಪದ: </strong>‘ಅಂಬೇಡ್ಕರ್ ಎಲ್ಲಿಯೂ ದಲಿತ ಎಂಬ ಪದ ಬಳಕೆ ಮಾಡಿರಲಿಲ್ಲ. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ದಲಿತ ಪದ ಬಳಸದೆ ಬಹುಜನ ಎಂಬ ಪದ ಬಳಕೆ ಮಾಡಿ ಆ ಜನಾಂಗ ಅನುಭವಿಸುತ್ತಿರುವ ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದರೆ, ಅವರ ಅನುಯಾಯಿಗಳು ದಲಿತ ಎಂಬ ಪದ ಹುಟ್ಟು ಹಾಕಿದರು. ಆದರೆ, ಮಹಾರಾಷ್ಟ್ರ ಹೈಕೋರ್ಟ್ ದಲಿತ ಎಂಬ ಪದವನ್ನು ರದ್ದುಪಡಿಸಿ ಅದನ್ನು ಬಳಸದಂತೆ ಎಚ್ಚರಿಕೆ ನೀಡಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>