ವೈಕುಂಠ ಏಕಾದಶಿಯಂದು ದೇವಸ್ಥಾನದ ಉತ್ತರ ಭಾಗದಲ್ಲಿ ವೈಕುಂಠ ನಾರಾಯಣನಾದ ವೆಂಕಟರಮಣ ಸ್ವಾಮಿಯ ಮೂಲ ವಿಗ್ರಹದ ಜೊತೆಗೆ ಲಕ್ಷ್ಮಿ, ಪದ್ಮಾವತಿ ವಿಗ್ರಹಗಳನ್ನು ಕೂರಿಸಿ ಸಪ್ತ ದ್ವಾರಗಳನ್ನು ನಿರ್ಮಿಸಿ, ಆ ದ್ವಾರಗಳ ಮೂಲಕ ಭಕ್ತರಿಗೆ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಈ ಸಪ್ತದ್ವಾರಗಳಲ್ಲಿ ಹೋಗಿ ದೇವರನ್ನು ದರ್ಶಿಸಿದರೆ ವೈಕುಂಠ ವಾಸ ಒಳ್ಳೆಯದನ್ನು ಮಾಡುತ್ತಾನೆ ಎನ್ನುತ್ತಾರೆ ಪ್ರಧಾನ ಅರ್ಚಕರಾಮಾನುಜನ್.