ಮತ್ತೊಬ್ಬ ದಲಿತ ಮುಖಂಡ, ‘ಮೀಸಲಾತಿ ವಿರೋಧಿ ಅಲ್ಲ ಎನ್ನುತ್ತೀರಿ, ಏಕೆ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದೀರಿ? ದೆಹಲಿಯ ಜಂತರ್ ಮಂತರ್ ಬಳಿ ನಿಮ್ಮದೇ ಹಿಂದೂ ಕಾರ್ಯಕರ್ತರು ಸಂವಿಧಾನ ಪ್ರತಿ ಸುಟ್ಟಾಗ ಏನು ಮಾಡಿದಿರಿ? ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ರಾಜ್ಯದ ಬಿಜೆಪಿ ಸಂಸದರೊಬ್ಬರು ಹೇಳಿದ್ದು ಏಕೆ’ ಎಂದು ಪ್ರಶ್ನಿಸಿದರು.