<p>ಮುಳಬಾಗಲು: ತಾಲ್ಲೂಕಿನ ಆವಣಿ ಗ್ರಾಮದ ರಾಮಲಿಂಗೇಶ್ವರಸ್ವಾಮಿ ಜಾನುವಾರು ಜಾತ್ರೆ ಈ ವರ್ಷ ಕಳೆಕಟ್ಟಿದೆ. ಕಳೆದ ಮೂರು ದಿನಗಳಿಂದಲೂ ಜಾನುವಾರುಗಳು ನಿರಂತರವಾಗಿ ಬರುತ್ತಿವೆ.ತಾಲ್ಲೂಕಿನ ಸುತ್ತಮುತ್ತಲ ಗ್ರಾಮ, ಜಿಲ್ಲೆಯಲ್ಲದೆ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ಮಾರಾಟಕಕ್ಕಾಗಿ ಜಾನುವಾರುಗಳನ್ನು ತರಲಾಗಿದೆ. ಅಲ್ಲದೇ ಮಾರಾಟದ ಭರಾಟೆ ಕೂಡ ಕಳೆದ ವರ್ಷಗಳಿಗೆ ಹೋಲಿಸಿಕೊಂಡರೆ ಈ ಸಲ ಜೋರಾಗಿದ್ದು, ದನಗಳ ಬೆಲೆ ಕೂಡ ದುಪ್ಪಟ್ಟಾಗಿದೆ.<br /> <br /> ಕನಿಷ್ಠ ಜೊತೆಗೆ 25 ಸಾವಿರ ರೂಪಾಯಿಂದ ಗರಿಷ್ಠ 1.5 ಲಕ್ಷ ಮೌಲ್ಯದವರೆಗೂ ಎತ್ತುಗಳು ಮಾರಾಟವಾಗಿವೆ. ಜಾತ್ರೆಯಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದ್ದು, ಸುಮಾರು ಐದು ಕೋಟಿ ರೂಪಾಯಿ ವ್ಯಾಪಾರ-ವಹಿವಾಟು ನಡೆಯುವ ನಿರೀಕ್ಷೆಯಿದೆ. ಎತ್ತುಗಳು ಕೊಂಡುಕೊಂಡು ಜಾತ್ರೆಯಲ್ಲೇ ಮರುಮಾರಾಟ ಮಾಡುವ ಪ್ರಕ್ರಿಯೆಯೂ ಜೋರಾಗಿಯೇ ನಡೆದಿದ್ದು, ಲಾಭ ಕೂಡ ಹೆಚ್ಚಿದೆ ಎಂದು ಇದೇ ವ್ಯಾಪಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಹೇಳಿದರು.<br /> <br /> ಎತ್ತಿನ ಹಲ್ಲು, ಅವುಗಳ ಮುಖ ಲಕ್ಷಣ, ಕಾಲುಗಳ ಆಕಾರ, ನೆತ್ತಿಯ ಮೇಲಿರುವ ಸುಳಿ, ಬಣ್ಣ ಇವೆಲ್ಲವನ್ನು ಲೆಕ್ಕಾಚಾರ ಹಾಕುತ್ತಿರುವುದು ವಿಶೇಷ. ಈ ಎಲ್ಲಾ ಲಕ್ಷಣಗಳಿರುವ ಎತ್ತುಗಳ ಬೆಲೆಯೂ ಹೆಚ್ಚಾಗಿರುತ್ತದೆ, ಗಿರಾಕಿಗಳು ಹೆಚ್ಚು. ದಲ್ಲಾಳಿಗಳ ಪಾತ್ರವು ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಜಾತ್ರೆಯ ಖದರಿನಿಂದಾಗಿ ಅವರೆಲ್ಲರೂ ‘ದಿಲ್ ಖುಷ್’ ಮೂಡಿನಲ್ಲಿರುವುದು ‘ಪ್ರಜಾವಾಣಿ’ಗೆ ಕಂಡುಬಂತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಳಬಾಗಲು: ತಾಲ್ಲೂಕಿನ ಆವಣಿ ಗ್ರಾಮದ ರಾಮಲಿಂಗೇಶ್ವರಸ್ವಾಮಿ ಜಾನುವಾರು ಜಾತ್ರೆ ಈ ವರ್ಷ ಕಳೆಕಟ್ಟಿದೆ. ಕಳೆದ ಮೂರು ದಿನಗಳಿಂದಲೂ ಜಾನುವಾರುಗಳು ನಿರಂತರವಾಗಿ ಬರುತ್ತಿವೆ.ತಾಲ್ಲೂಕಿನ ಸುತ್ತಮುತ್ತಲ ಗ್ರಾಮ, ಜಿಲ್ಲೆಯಲ್ಲದೆ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ಮಾರಾಟಕಕ್ಕಾಗಿ ಜಾನುವಾರುಗಳನ್ನು ತರಲಾಗಿದೆ. ಅಲ್ಲದೇ ಮಾರಾಟದ ಭರಾಟೆ ಕೂಡ ಕಳೆದ ವರ್ಷಗಳಿಗೆ ಹೋಲಿಸಿಕೊಂಡರೆ ಈ ಸಲ ಜೋರಾಗಿದ್ದು, ದನಗಳ ಬೆಲೆ ಕೂಡ ದುಪ್ಪಟ್ಟಾಗಿದೆ.<br /> <br /> ಕನಿಷ್ಠ ಜೊತೆಗೆ 25 ಸಾವಿರ ರೂಪಾಯಿಂದ ಗರಿಷ್ಠ 1.5 ಲಕ್ಷ ಮೌಲ್ಯದವರೆಗೂ ಎತ್ತುಗಳು ಮಾರಾಟವಾಗಿವೆ. ಜಾತ್ರೆಯಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದ್ದು, ಸುಮಾರು ಐದು ಕೋಟಿ ರೂಪಾಯಿ ವ್ಯಾಪಾರ-ವಹಿವಾಟು ನಡೆಯುವ ನಿರೀಕ್ಷೆಯಿದೆ. ಎತ್ತುಗಳು ಕೊಂಡುಕೊಂಡು ಜಾತ್ರೆಯಲ್ಲೇ ಮರುಮಾರಾಟ ಮಾಡುವ ಪ್ರಕ್ರಿಯೆಯೂ ಜೋರಾಗಿಯೇ ನಡೆದಿದ್ದು, ಲಾಭ ಕೂಡ ಹೆಚ್ಚಿದೆ ಎಂದು ಇದೇ ವ್ಯಾಪಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಹೇಳಿದರು.<br /> <br /> ಎತ್ತಿನ ಹಲ್ಲು, ಅವುಗಳ ಮುಖ ಲಕ್ಷಣ, ಕಾಲುಗಳ ಆಕಾರ, ನೆತ್ತಿಯ ಮೇಲಿರುವ ಸುಳಿ, ಬಣ್ಣ ಇವೆಲ್ಲವನ್ನು ಲೆಕ್ಕಾಚಾರ ಹಾಕುತ್ತಿರುವುದು ವಿಶೇಷ. ಈ ಎಲ್ಲಾ ಲಕ್ಷಣಗಳಿರುವ ಎತ್ತುಗಳ ಬೆಲೆಯೂ ಹೆಚ್ಚಾಗಿರುತ್ತದೆ, ಗಿರಾಕಿಗಳು ಹೆಚ್ಚು. ದಲ್ಲಾಳಿಗಳ ಪಾತ್ರವು ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಜಾತ್ರೆಯ ಖದರಿನಿಂದಾಗಿ ಅವರೆಲ್ಲರೂ ‘ದಿಲ್ ಖುಷ್’ ಮೂಡಿನಲ್ಲಿರುವುದು ‘ಪ್ರಜಾವಾಣಿ’ಗೆ ಕಂಡುಬಂತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>