<p><strong>ಗಂಗಾವತಿ</strong>: ಅವಿಭಜಿತ ಗಂಗಾವತಿ ತಾಲ್ಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾರುಪತ್ಯ ಮೆರೆಯುತ್ತಿದ್ದರೆ, ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರುಸುತ್ತಿವೆ.</p>.<p>ಅವಿಭಜಿತ ಗಂಗಾವತಿ ತಾಲ್ಲೂಕಿನ (ಗಂಗಾವತಿ, ಕನಕಗಿರಿ, ಕಾರಟಗಿ) ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 171, ಪ್ರೌಢಶಾಲೆಗಳಲ್ಲಿ 686 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಾಗಿದೆ ಎಂಬ ಆತಂಕ ಪಾಲಕರಲ್ಲಿದೆ.</p>.<p>ಮೂರು ತಾಲ್ಲೂಕುಗಳಲ್ಲಿ ಒಟ್ಟು 135 ಅನುದಾನರಹಿತ (ಪ್ರಾಥಮಿಕ, ಪ್ರೌಢ), 25 ಅನುದಾನ ಸಹಿತ ಶಾಲೆ, 357 ಸರ್ಕಾರಿ ಶಾಲೆ, 9 ವಸತಿ ಶಾಲೆ, ಅಲ್ಪಸಂಖ್ಯಾತರ ಇಲಾಖೆಯ 3 ಮೌಲಾನಾ ಆಜಾದ್ ವಸತಿ ಶಾಲೆಗಳಿವೆ. ಸದ್ಯ ಅನುದಾನ ಸಹಿತ ಮತ್ತು ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ.</p>.<p>310 ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 1,823 ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದು, 1,137 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 47 ಪ್ರೌಢಶಾಲೆಗಳಲ್ಲಿ 391 ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದು, 220 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.</p>.<p>ಪ್ರಾಥಮಿಕ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳು:</p>.<p>ಮಕ್ಕಳಿಗೆ ಆರಂಭಿಕ ಹಂತದ ಶಿಕ್ಷಣ ತುಂಬ ಮುಖ್ಯವಿದ್ದು, ಅಖಂಡ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ 43 ಹಿರಿಯ ಮುಖ್ಯಶಿಕ್ಷಕರು, 37 ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲೆಯ 238 ಶಿಕ್ಷಕರು, 354 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, 14 ಗ್ರೇಡ್-2 ದೈಹಿಕ ಶಿಕ್ಷಕರು, 1 ಚಿತ್ರಕಲಾ ಶಿಕ್ಷಕರ ಹುದ್ದೆಗಳು ಖಾಲಿಯಿವೆ.</p>.<p><strong>ಪ್ರೌಢ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳು:</strong></p>.<p>ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಪ್ರೌಢಶಾಲಾ ಶಿಕ್ಷಣ ತುಂಬ ಅಗತ್ಯ. ಆದರಿಲ್ಲಿ ಸಂಪನ್ಮೂಲ ಶಿಕ್ಷಕರ ಕೊರತೆಯಿಂದ ಕೆಲ ವರ್ಷಗಳಿಂದ ಫಲಿತಾಂಶ ಇಳಿಮುಖವಾಗುತ್ತಿದೆ. ಸದ್ಯ ಪ್ರೌಢಶಾಲೆಗಳಲ್ಲಿ ಕನ್ನಡ ಕಲಾ-28, ಕನ್ನಡ-47, ಇಂಗ್ಲಿಷ್-26, ಹಿಂದಿ-23, ಪಿಸಿಎಂ (ಕನ್ನಡ) 24, ಪಿಸಿಎಂ (ಉರ್ದು)-1, ಸಿಬಿಝಡ್ (ಕನ್ನಡ)-21, ಸಿಬಿಝಡ್ (ಇಂಗ್ಲೀಷ್) -1 ಹುದ್ದೆ ಖಾಲಿಯಿವೆ.</p>.<p><strong>ಫಲಿತಾಂಶ ಏರುಪೇರು:</strong> ಕಳೆದ ವರ್ಷ ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಶೇ 92ರಷ್ಟು ಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿತ್ತು. ಆದರೆ ಈ ಬಾರಿಯ ಫಲಿತಾಂಶ ಶೇ 63.28 ರಷ್ಟು ಗಳಿಸಿ ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದು, ಫಲಿತಾಂಶ ಹಿನ್ನಡೆಗೆ ಸಂಪನ್ಮೂಲ ಶಿಕ್ಷಕರ ಕೊರತೆ ಸಹ ಮೂಲ ಕಾರಣವಾಗಿದೆ. ಹಾಗಾಗಿ ಪಾಲಕರು ಸೂಕ್ತ ಶಿಕ್ಷಕರ ನೇಮಕಾತಿಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಅವಿಭಜಿತ ಗಂಗಾವತಿ ತಾಲ್ಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾರುಪತ್ಯ ಮೆರೆಯುತ್ತಿದ್ದರೆ, ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರುಸುತ್ತಿವೆ.</p>.<p>ಅವಿಭಜಿತ ಗಂಗಾವತಿ ತಾಲ್ಲೂಕಿನ (ಗಂಗಾವತಿ, ಕನಕಗಿರಿ, ಕಾರಟಗಿ) ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 171, ಪ್ರೌಢಶಾಲೆಗಳಲ್ಲಿ 686 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಾಗಿದೆ ಎಂಬ ಆತಂಕ ಪಾಲಕರಲ್ಲಿದೆ.</p>.<p>ಮೂರು ತಾಲ್ಲೂಕುಗಳಲ್ಲಿ ಒಟ್ಟು 135 ಅನುದಾನರಹಿತ (ಪ್ರಾಥಮಿಕ, ಪ್ರೌಢ), 25 ಅನುದಾನ ಸಹಿತ ಶಾಲೆ, 357 ಸರ್ಕಾರಿ ಶಾಲೆ, 9 ವಸತಿ ಶಾಲೆ, ಅಲ್ಪಸಂಖ್ಯಾತರ ಇಲಾಖೆಯ 3 ಮೌಲಾನಾ ಆಜಾದ್ ವಸತಿ ಶಾಲೆಗಳಿವೆ. ಸದ್ಯ ಅನುದಾನ ಸಹಿತ ಮತ್ತು ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ.</p>.<p>310 ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 1,823 ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದು, 1,137 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 47 ಪ್ರೌಢಶಾಲೆಗಳಲ್ಲಿ 391 ಶಿಕ್ಷಕರ ಮಂಜೂರಾತಿ ಹುದ್ದೆಗಳಿದ್ದು, 220 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.</p>.<p>ಪ್ರಾಥಮಿಕ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳು:</p>.<p>ಮಕ್ಕಳಿಗೆ ಆರಂಭಿಕ ಹಂತದ ಶಿಕ್ಷಣ ತುಂಬ ಮುಖ್ಯವಿದ್ದು, ಅಖಂಡ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ 43 ಹಿರಿಯ ಮುಖ್ಯಶಿಕ್ಷಕರು, 37 ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲೆಯ 238 ಶಿಕ್ಷಕರು, 354 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, 14 ಗ್ರೇಡ್-2 ದೈಹಿಕ ಶಿಕ್ಷಕರು, 1 ಚಿತ್ರಕಲಾ ಶಿಕ್ಷಕರ ಹುದ್ದೆಗಳು ಖಾಲಿಯಿವೆ.</p>.<p><strong>ಪ್ರೌಢ ಶಾಲಾ ಶಿಕ್ಷಕರ ಖಾಲಿ ಹುದ್ದೆಗಳು:</strong></p>.<p>ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಪ್ರೌಢಶಾಲಾ ಶಿಕ್ಷಣ ತುಂಬ ಅಗತ್ಯ. ಆದರಿಲ್ಲಿ ಸಂಪನ್ಮೂಲ ಶಿಕ್ಷಕರ ಕೊರತೆಯಿಂದ ಕೆಲ ವರ್ಷಗಳಿಂದ ಫಲಿತಾಂಶ ಇಳಿಮುಖವಾಗುತ್ತಿದೆ. ಸದ್ಯ ಪ್ರೌಢಶಾಲೆಗಳಲ್ಲಿ ಕನ್ನಡ ಕಲಾ-28, ಕನ್ನಡ-47, ಇಂಗ್ಲಿಷ್-26, ಹಿಂದಿ-23, ಪಿಸಿಎಂ (ಕನ್ನಡ) 24, ಪಿಸಿಎಂ (ಉರ್ದು)-1, ಸಿಬಿಝಡ್ (ಕನ್ನಡ)-21, ಸಿಬಿಝಡ್ (ಇಂಗ್ಲೀಷ್) -1 ಹುದ್ದೆ ಖಾಲಿಯಿವೆ.</p>.<p><strong>ಫಲಿತಾಂಶ ಏರುಪೇರು:</strong> ಕಳೆದ ವರ್ಷ ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಶೇ 92ರಷ್ಟು ಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿತ್ತು. ಆದರೆ ಈ ಬಾರಿಯ ಫಲಿತಾಂಶ ಶೇ 63.28 ರಷ್ಟು ಗಳಿಸಿ ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದು, ಫಲಿತಾಂಶ ಹಿನ್ನಡೆಗೆ ಸಂಪನ್ಮೂಲ ಶಿಕ್ಷಕರ ಕೊರತೆ ಸಹ ಮೂಲ ಕಾರಣವಾಗಿದೆ. ಹಾಗಾಗಿ ಪಾಲಕರು ಸೂಕ್ತ ಶಿಕ್ಷಕರ ನೇಮಕಾತಿಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>