<p><strong>ಕನಕಗಿರಿ:</strong> ಅಲ್ಲಿ ಮಂತ್ರಾಕ್ಷತೆ ಇರಲಿಲ್ಲ. ಸಂಪ್ರದಾಯದ ಕಟ್ಟುಪಾಡುಗಳಿರಲಿಲ್ಲ. ವಾದ್ಯಗಳ ಸದ್ದೂ ಇರಲಿಲ್ಲ. ಪರಸ್ಪರ ನಂಬಿಕೆ, ವಿಶ್ವಾಸದ ಬಾಂಧವ್ಯಗಳು ರಾರಾಜಿಸುತ್ತಿದ್ದವು.</p>.<p>ರಾಯಚೂರು ಜಿಲ್ಲೆಯ ಯುವ ಜೋಡಿ ಬುದ್ಧ, ಬಸವ ಹಾಗೂ ಅಂಬೇಡ್ಕರ್, ಜ್ಯೋತಿಬಾಫುಲೆ ಹಾಕಿಕೊಟ್ಟ ಆದರ್ಶ ಪಥವನ್ನು ಸ್ಮರಿಸಿ, ಸಂವಿಧಾನದ ಪೀಠಿಕೆ ಓದುವ ಮೂಲಕ ಪರಸ್ಪರ ಹಾರ ಬದಲಾಯಿಸಿಕೊಂಡು ಮಂಗಳವಾರ ನೂತನ ದಾಂಪತ್ಯಕ್ಕೆ ಕಾಲಿಟ್ಟಿತು.</p>.<p>ಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದ ರಂಗಭೂಮಿ ಕಲಾವಿದ ಧರ್ಮರಾಜ್ ಗೋನಾಳ ಹಾಗೂ ಅದೇ ತಾಲ್ಲೂಕಿನ ಚಿಕ್ಕ<br />ಕಡಬೂರಿನ ಗೌರಮ್ಮ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಧರ್ಮರಾಜನ ನಾಯಕತ್ವ ಮೆಚ್ಚಿದ ಗೌರಮ್ಮ ಕೈ ಹಿಡಿದಿದ್ದಾಳೆ.</p>.<p>ಆರ್ವೈಎಫ್ನ ರಾಜ್ಯ ಸಂಚಾಲಕ ನಾಗರಾಜ ಪೂಜಾರ, ಪ್ರಗತಿಪರ ಚಿಂತಕರಾದ ದೇವರಾಜ, ಮಂಜು ಸಾಸಲಮರಿ, ಸೋಮನಾಥ, ಸಿದ್ದು ಉದ್ಬಾಳ, ಮರಿದೇವ, ಕಿರಣಕುಮಾರ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಸಮಾನ ಮನಸ್ಕರ ಗೆಳೆಯರ ತಂಡ ಭಾಗವಹಿಸಿ ಶುಭ ಹಾರೈಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ:</strong> ಅಲ್ಲಿ ಮಂತ್ರಾಕ್ಷತೆ ಇರಲಿಲ್ಲ. ಸಂಪ್ರದಾಯದ ಕಟ್ಟುಪಾಡುಗಳಿರಲಿಲ್ಲ. ವಾದ್ಯಗಳ ಸದ್ದೂ ಇರಲಿಲ್ಲ. ಪರಸ್ಪರ ನಂಬಿಕೆ, ವಿಶ್ವಾಸದ ಬಾಂಧವ್ಯಗಳು ರಾರಾಜಿಸುತ್ತಿದ್ದವು.</p>.<p>ರಾಯಚೂರು ಜಿಲ್ಲೆಯ ಯುವ ಜೋಡಿ ಬುದ್ಧ, ಬಸವ ಹಾಗೂ ಅಂಬೇಡ್ಕರ್, ಜ್ಯೋತಿಬಾಫುಲೆ ಹಾಕಿಕೊಟ್ಟ ಆದರ್ಶ ಪಥವನ್ನು ಸ್ಮರಿಸಿ, ಸಂವಿಧಾನದ ಪೀಠಿಕೆ ಓದುವ ಮೂಲಕ ಪರಸ್ಪರ ಹಾರ ಬದಲಾಯಿಸಿಕೊಂಡು ಮಂಗಳವಾರ ನೂತನ ದಾಂಪತ್ಯಕ್ಕೆ ಕಾಲಿಟ್ಟಿತು.</p>.<p>ಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದ ರಂಗಭೂಮಿ ಕಲಾವಿದ ಧರ್ಮರಾಜ್ ಗೋನಾಳ ಹಾಗೂ ಅದೇ ತಾಲ್ಲೂಕಿನ ಚಿಕ್ಕ<br />ಕಡಬೂರಿನ ಗೌರಮ್ಮ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಧರ್ಮರಾಜನ ನಾಯಕತ್ವ ಮೆಚ್ಚಿದ ಗೌರಮ್ಮ ಕೈ ಹಿಡಿದಿದ್ದಾಳೆ.</p>.<p>ಆರ್ವೈಎಫ್ನ ರಾಜ್ಯ ಸಂಚಾಲಕ ನಾಗರಾಜ ಪೂಜಾರ, ಪ್ರಗತಿಪರ ಚಿಂತಕರಾದ ದೇವರಾಜ, ಮಂಜು ಸಾಸಲಮರಿ, ಸೋಮನಾಥ, ಸಿದ್ದು ಉದ್ಬಾಳ, ಮರಿದೇವ, ಕಿರಣಕುಮಾರ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಸಮಾನ ಮನಸ್ಕರ ಗೆಳೆಯರ ತಂಡ ಭಾಗವಹಿಸಿ ಶುಭ ಹಾರೈಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>