ಹೊಲ, ತೋಟ, ಕಟ್ಟಡ ನಿರ್ಮಾಣ ಹಾಗೂ ಕೂಲಿ ಕೆಲಸ ಮಾಡಿ ಸೋಮವಾರ ದಿನಗೂಲಿ ಪಡೆದುಕೊಂಡು ದಿನಸಿ, ತರಕಾರಿ, ಕಿರಾಣಿ ಸಾಮಗ್ರಿ ಖರೀದಿಸುವ ಬಡವರು ಬಹಳ ಜನ ಇದ್ದಾರೆ. ಈಗ ಅವರಿಗೆ ಕೂಲಿ ಕೆಲಸವೂ ಸಿಗುತ್ತಿಲ್ಲ. ಸಾಲ ಮಾಡಿ ಕಿರಾಣಿ ಖರೀದಿಸಬೇಕು ಎಂದರೆ ಅಂಗಡಿಗಳಿಗೆ ಕೀಲಿ ಹಾಕಲಾಗಿದೆ ಬಡವರು ಏನು ತಿಂದು ಬದುಕುಬೇಕು ಎಂದು ಶಾಂತಪ್ಪ ಪ್ರಶ್ನಿಸಿದರು.