ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ಹಿಂದುತ್ವದ ಮಂತ್ರ ಜಪಿಸಿದ ಯೋಗಿ, ‘ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ರಾಮನ ಭಕ್ತನ ಕ್ಷೇತ್ರ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಡಬಲ್ ಎಂಜಿನ್ ಸರ್ಕಾರಕ್ಕೆ ಎರಡು ಬಾಗಿಲುಗಳು ಇದ್ದು, ದುಪ್ಪಟ್ಟು ಶಕ್ತಿಯನ್ನೂ ಹೊಂದಿದೆ. ಈ ಸರ್ಕಾರಗಳ ವೇಗ ಕಡಿಮೆಯಾಗಲು ಬಿಡಬೇಡಿ. ಉತ್ತರ ಪ್ರದೇಶದಲ್ಲಿ ಈಗ ಶಾಂತಿ ನೆಲೆಸಲು ಕಾರಣವಾಗಿದ್ದೇ ಡಬಲ್ ಎಂಜಿನ್ ಸರ್ಕಾರ’ ಎಂದು ಹೇಳಿದರು.