ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಗ್ರಾಮ ಸಮೀಪದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಗುರುವಾರ ನಡೆಯಿತು.
ತಹಶೀಲ್ದಾರ್ ಮಂಜುನಾಥ ನೇತೃತ್ವದಲ್ಲಿ ಹಣ ಎಣಿಕೆ ಮಾಡಲಾಗಿದ್ದು, ಆ.9 ರಿಂದ ಸೆ.21ರವರೆಗೆ ₹31,77,385 ಹಣ ಸಂಗ್ರಹವಾಗಿದೆ. ಇದರಲ್ಲಿ ಎರಡು ವಿದೇಶಿ ನೋಟು (ಯುಎಸ್ಎ, ಸೌದಿ ಅರೇಬಿಯಾ), ಮೂರು ವಿದೇಶಿ ನಾಣ್ಯಗಳು (ಇಂಗ್ಲೆಂಡ್, ಓಮನ್, ಯುಎಸ್ಎ) ಸಂಗ್ರಹವಾಗಿವೆ.
ಕಳೆದ ಬಾರಿ ಆ.8ರಂದು ಹುಂಡಿಹಣ ಎಣಿಕೆ ಮಾಡಿದ ವೇಳೆಯಲ್ಲಿ ₹25, 27,155 ಹಣ ಸಂಗ್ರಹವಾಗಿತ್ತು. ಈ ಹುಂಡಿ ಎಣಿಕೆ ಕಾರ್ಯವು ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಿತು.
ಗ್ರೇಡ್-2 ತಹಶೀಲ್ದಾರ್ ವಿ.ಎಚ್.ಹೊರಪೇಟಿ, ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ, ಮಂಜುನಾಥ ಹಿರೇಮಠ, ಹಾಲೇಶ ಗುಂಡಿ, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಶ್ರೀಕಂಠ, ಗುರುರಾಜ, ಇಂದಿರಾ, ಸೌಭಾಗ್ಯ, ಸೈಯದ್ ಮುರ್ತುಜಾ, ಕವಿತಾ, ಪೂಜಾ ಸಾಣಾಪುರದ ಪಿಕೆಜಿಬಿ ಬ್ಯಾಂಕ್ ಸಿಬ್ಬಂದಿ ರಾಜಶೇಖರ, ಸುನೀಲ್, ಪೊಲೀಸ್ ಸಿಬ್ಬಂದಿ ರೇಖಾ.ಸಿ, ಪ್ರವಾಸಿ ಮಿತ್ರ ಹನುಮಂತಪ್ಪ, ಹುಸೇನಸಾಬ, ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.