ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣದ ಹನುಮಂತಮ್ಮ ಪೊಲೀಸ್ ಪಾಟೀಲ ಎಂಬುವವರು ತಮ್ಮ ಜಮೀನಿನಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸಿ ನಂತರ ಗುಂಡಿಯನ್ನು ಮುಚ್ಚಿಲ್ಲ ಅಥವಾ ಅದರ ಸುತ್ತಲೂ ರಕ್ಷಣೆಗೆ ಬೇಲಿ ಹಾಕಿಲ್ಲ. ಅವರ ನಿರ್ಲಕ್ಷ್ಯದಿಂದ ತಮ್ಮ ಮಗ ಮೃತಪಟ್ಟಿದ್ದು ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಮೃತ ಬಾಲಕನ ತಾಯಿ ಹುಲಿಗೆಮ್ಮ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಅನ್ವಯ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರಭಾರ ಸಬ್ ಇನ್ಸ್ಪೆಕ್ಟರ್ ವೀರಪ್ಪ ನಾಯಕ ತಿಳಿಸಿದರು.