<p><strong>ಯಲಬುರ್ಗಾ</strong>: ತಾಲ್ಲೂಕಿನ ಬೇವೂರು ಠಾಣೆ ವ್ಯಾಪ್ತಿಯ ವಟಪವರಿ ಗ್ರಾಮದದಲ್ಲಿ ವಿಪರೀತ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಕೂಡಲೇ ನಿಯಂತ್ರಣಗೊಳಿಸಿ ಹಾಳಾಗುತ್ತಿರುವ ಯುವಕರು ಮತ್ತು ಕುಟುಂಬಗಳನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. </p>.<p>ಠಾಣೆಯ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ ಗ್ರಾಮಸ್ಥರು ಸುಮಾರು ಒಂದುವರೆ ವರ್ಷದಿಂದಲೂ ದಿನದಿಂದ ದಿನಕ್ಕೆ ಮದ್ಯ ವ್ಯಸನೀಗಳು ಹೆಚ್ಚಾಗುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 6-7ಕಡೆ ಸಾಕಷ್ಟು ಸಂಖ್ಯೆಯ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಯಾವುದೇ ಭಯ ಮತ್ತು ಅಂಚಿಕೆಯಿಲ್ಲದೇ ಮಾರಾಟ ಮಾಡುತ್ತಿದ್ದಾರೆ. ಮಳೆಯರುವ ನೆಮ್ಮದಿಂದ ಇರಲು ಸಾಧ್ಯವಾಗುತ್ತಿಲ್ಲ, ಯುವಕರು ಹಾಗೂ ವಯಸ್ಸಾದವರು ಕೂಡಾ ಮದ್ಯ ಸೇವಿಸಿ ರಸ್ತೆಯಲ್ಲಿ ಅವಾಚ್ಯಪದಗಳಿಂದ ಜನಸಾಮಾನ್ಯರನ್ನು ಬೈದಾಡುತ್ತಿದ್ದಾರೆ. ಅನೇಕ ಕುಟುಂಬಗಳು ಬೀದಿಗೆ ಬಂದಿವೆ.</p><p>ಕಾರಣ ಅಕ್ರಮವಾಗಿ ಮಾರಾಟ ಮಾಡುವುದನ್ನು ನಿಯಂತ್ರಿಸಬೇಕಾಗಿದೆ. ಸಂಬಂಧಪಟ್ಟ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಸಲ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಕಾರಣ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. <br> ಗ್ರಾಪಂ ಅಧ್ಯಕ್ಷ ಮಂಜುನಾಥ ನಕ್ಲರ, ದುರಗಪ್ಪ ನೂತಲಗಂಟಿ, ದುರಗಪ್ಪ, ಶೇಖರಪ್ಪ ಕೊಳಜಿ, ಶರಣಪ್ಪ ಟನಕನಕಲ್ಲ,ಭೀಮಪ್ಪ, ವೆಂಕಟೇಶ ಹನಮಂತಪ್ಪ ಬಡಿಗೇರ ಸೇರಿ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ</strong>: ತಾಲ್ಲೂಕಿನ ಬೇವೂರು ಠಾಣೆ ವ್ಯಾಪ್ತಿಯ ವಟಪವರಿ ಗ್ರಾಮದದಲ್ಲಿ ವಿಪರೀತ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಕೂಡಲೇ ನಿಯಂತ್ರಣಗೊಳಿಸಿ ಹಾಳಾಗುತ್ತಿರುವ ಯುವಕರು ಮತ್ತು ಕುಟುಂಬಗಳನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. </p>.<p>ಠಾಣೆಯ ಅಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ ಗ್ರಾಮಸ್ಥರು ಸುಮಾರು ಒಂದುವರೆ ವರ್ಷದಿಂದಲೂ ದಿನದಿಂದ ದಿನಕ್ಕೆ ಮದ್ಯ ವ್ಯಸನೀಗಳು ಹೆಚ್ಚಾಗುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 6-7ಕಡೆ ಸಾಕಷ್ಟು ಸಂಖ್ಯೆಯ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಯಾವುದೇ ಭಯ ಮತ್ತು ಅಂಚಿಕೆಯಿಲ್ಲದೇ ಮಾರಾಟ ಮಾಡುತ್ತಿದ್ದಾರೆ. ಮಳೆಯರುವ ನೆಮ್ಮದಿಂದ ಇರಲು ಸಾಧ್ಯವಾಗುತ್ತಿಲ್ಲ, ಯುವಕರು ಹಾಗೂ ವಯಸ್ಸಾದವರು ಕೂಡಾ ಮದ್ಯ ಸೇವಿಸಿ ರಸ್ತೆಯಲ್ಲಿ ಅವಾಚ್ಯಪದಗಳಿಂದ ಜನಸಾಮಾನ್ಯರನ್ನು ಬೈದಾಡುತ್ತಿದ್ದಾರೆ. ಅನೇಕ ಕುಟುಂಬಗಳು ಬೀದಿಗೆ ಬಂದಿವೆ.</p><p>ಕಾರಣ ಅಕ್ರಮವಾಗಿ ಮಾರಾಟ ಮಾಡುವುದನ್ನು ನಿಯಂತ್ರಿಸಬೇಕಾಗಿದೆ. ಸಂಬಂಧಪಟ್ಟ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಸಲ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಕಾರಣ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. <br> ಗ್ರಾಪಂ ಅಧ್ಯಕ್ಷ ಮಂಜುನಾಥ ನಕ್ಲರ, ದುರಗಪ್ಪ ನೂತಲಗಂಟಿ, ದುರಗಪ್ಪ, ಶೇಖರಪ್ಪ ಕೊಳಜಿ, ಶರಣಪ್ಪ ಟನಕನಕಲ್ಲ,ಭೀಮಪ್ಪ, ವೆಂಕಟೇಶ ಹನಮಂತಪ್ಪ ಬಡಿಗೇರ ಸೇರಿ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>