<p><strong>ಕುಷ್ಟಗಿ:</strong> ತಾಲ್ಲೂಕಿನ ಕೆಲ ಕುಟುಂಬದವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಅವರು ವಾಸಿಸುವ ಮನೆಗಳ ಸುತ್ತಲಿನ ನೆರೆಹೊರೆಯರು ದೂರ ಉಳಿದಿದ್ದಾರೆ. ಮಾತನಾಡುವುದಕ್ಕೂ ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಅನೇಕ ಸೊಂಕಿತ ವ್ಯಕ್ತಿಗಳ ಕುಟುಂಬಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.</p>.<p>ಮನೆಯಲ್ಲಿನ ಒಬ್ಬರಿಗೆ ಸೋಂಕು ದೃಢಪಟ್ಟರೆ ಸಂಬಂಧಿಸಿದ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಆ ಕುಟುಂಬದವರು ಮನೆಯಿಂದ ಹೊರಗೆ ಬೇರೆಯವರನ್ನು ನೋಡುವುದಕ್ಕೂ ಮುಜುಗರ ಅನುಭವಿಸುವಂತಾಗಿದೆ.</p>.<p>ಸೋಂಕಿತರ ಕೆಲ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿಲ್ಲದ ಕಾರಣ ಊರಿನ ಇತರೆ ಜನರು ಏಳುವ ಮೊದಲು ಮತ್ತು ಬೆಳಕು ಹರಿಯುವ ಮೊದಲೇ ಬಹಿರ್ದೆಸೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ.</p>.<p>ಕುಡಿಯುವ ನೀರು, ಹಾಲು, ತರಕಾರಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿದ್ದಾರೆ. ಗ್ರಾಮದಲ್ಲಿರುವ ಅಂಗಡಿಗಳಿಗೆ ಹೋಗುವಂತಿಲ್ಲ. ಬೇರೆಯವರೂ ಮನೆಯ ಹತ್ತಿರ ಸುಳಿಯುವುದಿಲ್ಲ. ಮಕ್ಕಳು ಆಟವಾಡಲು ಹೊರಗೆ ಹೋಗುವಂತಿಲ್ಲ. ಸೋಂಕಿತ ವ್ಯಕ್ತಿಗಳ ಮನೆಯವರು ಹೊರಗೆ ಹೋದರೆ ಇತರೆ ಜನ ಕೆಂಗಣ್ಣಿನಿಂದ ನೋಡುತ್ತಾರೆ.</p>.<p>ಬಡ ಕುಟುಂಬಗಳ ಜನರಲ್ಲಿ ಕೈಯಲ್ಲಿ ಕಾಸಿಲ್ಲ. ತಮ್ಮ ಹೊಟ್ಟೆಗೇ ಸೀಲ್ಡೌನ್ ಮಾಡಿಕೊಳ್ಳುವಂತಾಗಿದೆ. ಯಾರೂ ಸಹಾಯಕ್ಕೆ ಬಾರದ ಕಾರಣ ಬಹುತೇಕ ಜನರಲ್ಲಿ ಆತ್ಮಸ್ಥೈರ್ಯವೇ ಉಡುಗಿಹೋಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಕೆಲ ಪ್ರಮುಖರು 'ಪ್ರಜಾವಾಣಿ'ಗೆ ಸಮಸ್ಯೆಯನ್ನು ವಿವರಿಸಿದರು.</p>.<p>ಶಾಸಕಬಯ್ಯಾಪುರ ಭೇಟಿ:</p>.<p>ಈ ಮಧ್ಯೆ ಭಾನುವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಅಮರೇಗೌಡ ಬಯ್ಯಾಪುರ, ಸೋಂಕಿತರ ಕುಟುಂಬದವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಅಲ್ಲದೆ ಸೋಂಕಿತ ವ್ಯಕ್ತಿಗಳ ಕುಟುಂಬದವರಿಗೆ ಹೊರಗಡೆಯಿಂದ ಇತರೆ ಜನರು ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಮಾನವೀಯತೆ ಮೆರೆಯುವಂತೆ ಹೇಳಿದರು.</p>.<p>ನಂತರ ಮಾತನಾಡಿದ ಶಾಸಕ ಬಯ್ಯಾಪುರ, ‘ಸೋಂಕಿತರ ಕುಟುಂಬದವರು ಬಹಳಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಿರುವುದು ಗೊತ್ತಾಗಿದೆ. ಅವರ ಸಂಬಂಧಿಕರು, ಅಷ್ಟೇ ಏಕೆ ಅವರವರ ಜಾತಿಯ ಜನರೇ ಹತ್ತಿರ ಸುಳಿಯುತ್ತಿಲ್ಲ. ಈ ರೀತಿ ಯಾರೂ ಮಾಡಬಾರದು‘ ಎಂದು ಹೇಳಿದರು.</p>.<p>ಸೋಂಕು ದೃಢಪಟ್ಟಿರುವ ಪ್ರತಿ ಹಳ್ಳಿಯಲ್ಲಿಯೂ ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜನರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಸುರಕ್ಷತೆಯಿಂದ ಇರುವಂತೆಯೂ ಸೂಚಿಸುತ್ತಿದ್ದಾರೆ ಎಂದರು.</p>.<p>ಕೆಲ ಸೋಂಕಿತ ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಕಿಟ್ಗಳನ್ನು ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ತಾಲ್ಲೂಕಿನ ಕೆಲ ಕುಟುಂಬದವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಅವರು ವಾಸಿಸುವ ಮನೆಗಳ ಸುತ್ತಲಿನ ನೆರೆಹೊರೆಯರು ದೂರ ಉಳಿದಿದ್ದಾರೆ. ಮಾತನಾಡುವುದಕ್ಕೂ ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಅನೇಕ ಸೊಂಕಿತ ವ್ಯಕ್ತಿಗಳ ಕುಟುಂಬಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ.</p>.<p>ಮನೆಯಲ್ಲಿನ ಒಬ್ಬರಿಗೆ ಸೋಂಕು ದೃಢಪಟ್ಟರೆ ಸಂಬಂಧಿಸಿದ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಆ ಕುಟುಂಬದವರು ಮನೆಯಿಂದ ಹೊರಗೆ ಬೇರೆಯವರನ್ನು ನೋಡುವುದಕ್ಕೂ ಮುಜುಗರ ಅನುಭವಿಸುವಂತಾಗಿದೆ.</p>.<p>ಸೋಂಕಿತರ ಕೆಲ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿಲ್ಲದ ಕಾರಣ ಊರಿನ ಇತರೆ ಜನರು ಏಳುವ ಮೊದಲು ಮತ್ತು ಬೆಳಕು ಹರಿಯುವ ಮೊದಲೇ ಬಹಿರ್ದೆಸೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ.</p>.<p>ಕುಡಿಯುವ ನೀರು, ಹಾಲು, ತರಕಾರಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳಿಲ್ಲದೆ ಪರದಾಡುತ್ತಿದ್ದಾರೆ. ಗ್ರಾಮದಲ್ಲಿರುವ ಅಂಗಡಿಗಳಿಗೆ ಹೋಗುವಂತಿಲ್ಲ. ಬೇರೆಯವರೂ ಮನೆಯ ಹತ್ತಿರ ಸುಳಿಯುವುದಿಲ್ಲ. ಮಕ್ಕಳು ಆಟವಾಡಲು ಹೊರಗೆ ಹೋಗುವಂತಿಲ್ಲ. ಸೋಂಕಿತ ವ್ಯಕ್ತಿಗಳ ಮನೆಯವರು ಹೊರಗೆ ಹೋದರೆ ಇತರೆ ಜನ ಕೆಂಗಣ್ಣಿನಿಂದ ನೋಡುತ್ತಾರೆ.</p>.<p>ಬಡ ಕುಟುಂಬಗಳ ಜನರಲ್ಲಿ ಕೈಯಲ್ಲಿ ಕಾಸಿಲ್ಲ. ತಮ್ಮ ಹೊಟ್ಟೆಗೇ ಸೀಲ್ಡೌನ್ ಮಾಡಿಕೊಳ್ಳುವಂತಾಗಿದೆ. ಯಾರೂ ಸಹಾಯಕ್ಕೆ ಬಾರದ ಕಾರಣ ಬಹುತೇಕ ಜನರಲ್ಲಿ ಆತ್ಮಸ್ಥೈರ್ಯವೇ ಉಡುಗಿಹೋಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಕೆಲ ಪ್ರಮುಖರು 'ಪ್ರಜಾವಾಣಿ'ಗೆ ಸಮಸ್ಯೆಯನ್ನು ವಿವರಿಸಿದರು.</p>.<p>ಶಾಸಕಬಯ್ಯಾಪುರ ಭೇಟಿ:</p>.<p>ಈ ಮಧ್ಯೆ ಭಾನುವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಅಮರೇಗೌಡ ಬಯ್ಯಾಪುರ, ಸೋಂಕಿತರ ಕುಟುಂಬದವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಅಲ್ಲದೆ ಸೋಂಕಿತ ವ್ಯಕ್ತಿಗಳ ಕುಟುಂಬದವರಿಗೆ ಹೊರಗಡೆಯಿಂದ ಇತರೆ ಜನರು ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಮಾನವೀಯತೆ ಮೆರೆಯುವಂತೆ ಹೇಳಿದರು.</p>.<p>ನಂತರ ಮಾತನಾಡಿದ ಶಾಸಕ ಬಯ್ಯಾಪುರ, ‘ಸೋಂಕಿತರ ಕುಟುಂಬದವರು ಬಹಳಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಿರುವುದು ಗೊತ್ತಾಗಿದೆ. ಅವರ ಸಂಬಂಧಿಕರು, ಅಷ್ಟೇ ಏಕೆ ಅವರವರ ಜಾತಿಯ ಜನರೇ ಹತ್ತಿರ ಸುಳಿಯುತ್ತಿಲ್ಲ. ಈ ರೀತಿ ಯಾರೂ ಮಾಡಬಾರದು‘ ಎಂದು ಹೇಳಿದರು.</p>.<p>ಸೋಂಕು ದೃಢಪಟ್ಟಿರುವ ಪ್ರತಿ ಹಳ್ಳಿಯಲ್ಲಿಯೂ ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜನರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಸುರಕ್ಷತೆಯಿಂದ ಇರುವಂತೆಯೂ ಸೂಚಿಸುತ್ತಿದ್ದಾರೆ ಎಂದರು.</p>.<p>ಕೆಲ ಸೋಂಕಿತ ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಕಿಟ್ಗಳನ್ನು ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>