ವಾರಾಂತ್ಯದ ಎರಡು ದಿನ ಮಾತ್ರ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಬೇಕು ಎಂದೇ ವ್ಯಾಪಾರಿಗಳು ತಿಳಿದಿದ್ದರು. ಹಾಗಾಗಿ ಬೆಳಿಗ್ಗೆ ಹತ್ತು ಗಂಟೆಯವರೆಗೂ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು. ಪೊಲೀಸರು ಲಾಠಿ ಹಿಡಿದು ರಸ್ತೆಗೆ ಇಳಿಯುತ್ತಿದ್ದಂತೆ ವ್ಯಾಪಾರಸ್ಥರು ಗಲಿಬಿಲಿಗೊಂಡರು. ಕಿರಾಣಿ, ಔಷಧ, ತರಕಾರಿ ಇತರ ಅಗತ್ಯ ಸೇವೆಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲವುಗಳನ್ನೂ ಮುಚ್ಚಿಸಿದರು.