ಅಳವಂಡಿ: ಕ್ರೀಡೆಯಿಂದ ಉತ್ತಮ ಆರೋಗ್ಯರ ಜೀವನ ನಡೆಸಲು ಸಾಧ್ಯ. ದೈಹಿಕ , ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆ ಮನುಷ್ಯನ ಜೀವನದ ದೈನಂದಿನ ಅವಶ್ಯಕತೆಯಾಗಬೇಕು ಎಂದು ಶಿಕ್ಷಕ ಗಂಗಪ್ಪ ಅಂಬಿಗೇರ ಹೇಳಿದರು.
ಸಮೀಪದ ತಿಗರಿ ಗ್ರಾಮದಲ್ಲಿ ತಾಯಮ್ಮ ದೇವಿ ಯುವಕ ಸಂಘ ವತಿಯಿಂದ ನಡೆದ ತಿಗರಿ ಪ್ರೀಮಿಯರ್ ಲೀಗ್ ( ಟಿಪಿಎಲ್) ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.
ಮುಖಂಡ ಹನುಮಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಅವಶ್ಯಕವಾಗಿವೆ. ಹಾಗಾಗಿ ಯುವಕರು ಖುಷಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.