ಸಭೆಗೂ ಮುನ್ನ ಈಚೆಗೆ ನಿಧನರಾದ ನಿವೃತ್ತ ನೌಕರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೊಪ್ಪಳ ಜಿಲ್ಲೆಯ ಎನ್.ಕೆ.ಬಸಪ್ಪ(ಉಪಾಧ್ಯಕ್ಷ), ಆದನಗೌಡ (ಕಾರ್ಯದರ್ಶಿ), ದೊಡ್ಡಪ್ಪ (ಸಹಕಾರ್ಯದರ್ಶಿ) ಆಯ್ಕೆಯಾದರು. ಬಳ್ಳಾರಿ ಜಿಲ್ಲೆಯ ಬಿ. ವೆಂಕಟೇಶಲು (ಉಪಾಧ್ಯಕ್ಷ), ಎಂ ನಾಗರಾಜ (ಕಾರ್ಯದರ್ಶಿ), ಜೆ. ಬಸವರಾಜ (ಸಹಕಾರ್ಯದರ್ಶಿ) ಅವಿರೋಧ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿ ಸಿದ್ದರಾಮಪ್ಪ ನವಲಸಪುರ, ಚನ್ನಬಸಪ್ಪ, ಬೂದಣ್ಣ, ಏನ್.ಕೆ. ಬಸಪ್ಪ, ಸೈಯದ್ ಅಜಮತ್ ಉಲ್ಲಾ ಹುಸೇನಿ, ಬಿ.ಜಹಾಂಗೀರ್, ಸಿ.ಎಂ.ಅರಕೇರಿ, ಎಂ.ಎಂ. ಚಿಕ್ಕಮಠ್, ನಾಗರಾಜ, ದೊಡ್ಡಪ್ಪ, ಬಸವರಾಜ ಇದ್ದರು.