<p><strong>ಗಂಗಾವತಿ: </strong>ನಗರದ 28ನೇ ವಾರ್ಡ್ನ ಶಿಕ್ಷಕರ ಕಾಲೊನಿಯಲ್ಲಿ ನಗರಸಭೆ ನಿರ್ಮಿಸಿದ ಸರ್ವಪಲ್ಲಿ ರಾಧಾಕೃಷ್ಣ ಉದ್ಯಾನ ಗಮನ ಸೆಳೆಯುತ್ತಿದೆ.</p>.<p>ಉತ್ತಮ ನಿರ್ವಹಣೆಯ ಕಾರಣಕ್ಕೆ ಚಿಣ್ಣರು, ಯುವಕರು, ಮಹಿಳೆಯರು ಹಾಗೂ ವೃದ್ಧರನ್ನು ಆಕರ್ಷಿಸುತ್ತಿದೆ.</p>.<p>ಇದನ್ನು 2019-20ನೇ ಸಾಲಿನ ನಗರಸಭೆಯ ಅಮೃತ ನಗರ ಯೋಜನೆಯಡಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೇ ವೇಳೆ ನಗರದಲ್ಲಿ 14 ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ, ಇದು ಮಾತ್ರ ಸುಸ್ಥಿತಿಯಲ್ಲಿದೆ.</p>.<p>ಈ ಉದ್ಯಾನ ಬೆಳಿಗ್ಗೆ 6 ರಿಂದ 9, ಸಂಜೆ 5 ರಿಂದ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇಲ್ಲಿ ಜಿಮ್ ಪರಿಕರಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಇಲ್ಲಿ ಮಕ್ಕಳಿಗಾಗಿ ಆಟಿಕೆಗಳನ್ನು ಅಳವಡಿಸಲಾಗಿದೆ. ಮಕ್ಕಳು ಇಲ್ಲಿ ಬಂದು ಆಟವಾಡಿ ಖುಷಿಪಡುತ್ತಾರೆ.</p>.<p>ಯೋಗ ಕೇಂದ್ರ, ಆಸನದ ವ್ಯವಸ್ಥೆ: ಇಲ್ಲಿ ಯೋಗ ಕೇಂದ್ರ ತೆರೆಯಲಾಗಿದೆ. ವೃದ್ಧರು, ನಿವಾಸಿಗಳು ಯೋಗ ಮಾಡುತ್ತಾರೆ.</p>.<p>ಇಲ್ಲಿ 6 ಆಸನಗಳನ್ನು ಅಳವಡಿಸಲಾಗಿದೆ.</p>.<p>ಉದ್ಯಾನದ ಸುತ್ತ 12 ವಿದ್ಯುತ್ ಕಂಬಗಳನ್ನು ನಿರ್ಮಿಸಲಾಗಿದೆ. ಉತ್ತಮ ಗುಣಮಟ್ಟದ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಶೌಚಾಲಯ ನಿರ್ಮಿಸಲಾಗಿದ್ದು, ಅದಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.</p>.<p>ಉದ್ಯಾನದ ನಿರ್ವಹಣೆಗೆ ಪೌರಕಾರ್ಮಿಕರನ್ನು ನೇಮಕ ಮಾಡಲಾಗಿದೆ. ನೀರಿನ ವ್ಯವಸ್ಥೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ನಗರದ 28ನೇ ವಾರ್ಡ್ನ ಶಿಕ್ಷಕರ ಕಾಲೊನಿಯಲ್ಲಿ ನಗರಸಭೆ ನಿರ್ಮಿಸಿದ ಸರ್ವಪಲ್ಲಿ ರಾಧಾಕೃಷ್ಣ ಉದ್ಯಾನ ಗಮನ ಸೆಳೆಯುತ್ತಿದೆ.</p>.<p>ಉತ್ತಮ ನಿರ್ವಹಣೆಯ ಕಾರಣಕ್ಕೆ ಚಿಣ್ಣರು, ಯುವಕರು, ಮಹಿಳೆಯರು ಹಾಗೂ ವೃದ್ಧರನ್ನು ಆಕರ್ಷಿಸುತ್ತಿದೆ.</p>.<p>ಇದನ್ನು 2019-20ನೇ ಸಾಲಿನ ನಗರಸಭೆಯ ಅಮೃತ ನಗರ ಯೋಜನೆಯಡಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೇ ವೇಳೆ ನಗರದಲ್ಲಿ 14 ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ, ಇದು ಮಾತ್ರ ಸುಸ್ಥಿತಿಯಲ್ಲಿದೆ.</p>.<p>ಈ ಉದ್ಯಾನ ಬೆಳಿಗ್ಗೆ 6 ರಿಂದ 9, ಸಂಜೆ 5 ರಿಂದ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇಲ್ಲಿ ಜಿಮ್ ಪರಿಕರಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಇಲ್ಲಿ ಮಕ್ಕಳಿಗಾಗಿ ಆಟಿಕೆಗಳನ್ನು ಅಳವಡಿಸಲಾಗಿದೆ. ಮಕ್ಕಳು ಇಲ್ಲಿ ಬಂದು ಆಟವಾಡಿ ಖುಷಿಪಡುತ್ತಾರೆ.</p>.<p>ಯೋಗ ಕೇಂದ್ರ, ಆಸನದ ವ್ಯವಸ್ಥೆ: ಇಲ್ಲಿ ಯೋಗ ಕೇಂದ್ರ ತೆರೆಯಲಾಗಿದೆ. ವೃದ್ಧರು, ನಿವಾಸಿಗಳು ಯೋಗ ಮಾಡುತ್ತಾರೆ.</p>.<p>ಇಲ್ಲಿ 6 ಆಸನಗಳನ್ನು ಅಳವಡಿಸಲಾಗಿದೆ.</p>.<p>ಉದ್ಯಾನದ ಸುತ್ತ 12 ವಿದ್ಯುತ್ ಕಂಬಗಳನ್ನು ನಿರ್ಮಿಸಲಾಗಿದೆ. ಉತ್ತಮ ಗುಣಮಟ್ಟದ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಶೌಚಾಲಯ ನಿರ್ಮಿಸಲಾಗಿದ್ದು, ಅದಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.</p>.<p>ಉದ್ಯಾನದ ನಿರ್ವಹಣೆಗೆ ಪೌರಕಾರ್ಮಿಕರನ್ನು ನೇಮಕ ಮಾಡಲಾಗಿದೆ. ನೀರಿನ ವ್ಯವಸ್ಥೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>