<p><strong>ಯಲಬುರ್ಗಾ:</strong> ತಾಲ್ಲೂಕಿನ ಯಡ್ಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಓಸಾಟ ಧರ್ಮದತ್ತಿ ಸಂಸ್ಥೆ ಹಾಗೂ ಸ್ನೇಹ ಕೀರ್ತಿ ಅವರಿಂದ ಹೊಸ 4 ಕೊಠಡಿಗಳು ಮತ್ತು 2 ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿ ಉದ್ಘಾಟಿಸಲಾಯಿತು.</p>.<p>ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ, ‘ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗಳು ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡುವ ಮೂಲಕ ಶೈಕ್ಷಣಿಕ ಸುಧಾರಣೆ ಪ್ರೇರಣೆ ನೀಡಿದಂತಾಗಿದೆ. ಅಚ್ಚುಕಟ್ಟಾದ ಕಟ್ಟಡವಾಗಿರುವುದರಿಂದ ಈ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿ ಸಂಸ್ಥೆಗಳ ಪ್ರೋತ್ಸಾಹಕ್ಕೆ ಸಾರ್ಥಕಗೊಳಿಸಬೇಕಾಗಿದೆ, ಸಂಸ್ಥೆಯ ಸಾಮಾಜಿಕ ಕಾರ್ಯವು ಶ್ಲಾಘಿಸುವಂತಹದು’ ಎಂದರು.</p>.<p>ಓಸಾಟಾ ಸಂಸ್ಥೆಯ ಪ್ರತಿನಿಧಿ ಗೋಪಾಲಾಚಾರ್ಯ ಗ್ರಾಮದಲ್ಲಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿದ್ದು ಸಂತಸ ತಂದಿದೆ. ಇಲ್ಲಿಯ ಮಕ್ಕಳಿಗೆ ಅನುಕೂಲವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಗೊಂಡರೆ ಸಂಸ್ಥೆಯು ಹೆಮ್ಮೆಪಡುತ್ತದೆ ಎಂದರು. </p>.<p>ಸಂಸ್ಥೆಯ ನಾರಾಯಣಸ್ವಾಮಿ, ಮಹೇಶ ಬಿ. ಮಾತನಾಡಿದರು. ಓಸಾಟಾ ಧರ್ಮದತ್ತಿ ಸಂಸ್ಥೆ ಬೆಂಗಳೂರಿನ ಪ್ರತಿನಿಧಿಗಳನ್ನು ಗ್ರಾಮ ಮತ್ತು ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. </p>.<p>ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯಮನೂರಸಾಬ್ ನದಾಫ್, ಬಸವರಾಜ ಮುಳಗುಂದ, ಸಂಗಯ್ಯ ಹಿರೇಮಠ, ಅಯ್ಯನಗೌಡ, ಮುಖ್ಯಶಿಕ್ಷಕಿ ಸವಿತಾ, ಫಕೀರಗೌಡ ಮಾಲಿಪಾಟೀಲ, ಸುರೇಶ, ಕೃಷ್ಣಾ ಪತ್ತಾರ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು ಗಣ್ಯರು ಪಾಲ್ಗೊಂಡಿದ್ದರು. ರಮೇಶ ಆವೋಜಿ ನಿರೂಪಿಸಿದರು. ವಿರೂಪಾಕ್ಷಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ:</strong> ತಾಲ್ಲೂಕಿನ ಯಡ್ಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಓಸಾಟ ಧರ್ಮದತ್ತಿ ಸಂಸ್ಥೆ ಹಾಗೂ ಸ್ನೇಹ ಕೀರ್ತಿ ಅವರಿಂದ ಹೊಸ 4 ಕೊಠಡಿಗಳು ಮತ್ತು 2 ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿ ಉದ್ಘಾಟಿಸಲಾಯಿತು.</p>.<p>ಉದ್ಘಾಟಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ, ‘ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗಳು ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಡುವ ಮೂಲಕ ಶೈಕ್ಷಣಿಕ ಸುಧಾರಣೆ ಪ್ರೇರಣೆ ನೀಡಿದಂತಾಗಿದೆ. ಅಚ್ಚುಕಟ್ಟಾದ ಕಟ್ಟಡವಾಗಿರುವುದರಿಂದ ಈ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿ ಸಂಸ್ಥೆಗಳ ಪ್ರೋತ್ಸಾಹಕ್ಕೆ ಸಾರ್ಥಕಗೊಳಿಸಬೇಕಾಗಿದೆ, ಸಂಸ್ಥೆಯ ಸಾಮಾಜಿಕ ಕಾರ್ಯವು ಶ್ಲಾಘಿಸುವಂತಹದು’ ಎಂದರು.</p>.<p>ಓಸಾಟಾ ಸಂಸ್ಥೆಯ ಪ್ರತಿನಿಧಿ ಗೋಪಾಲಾಚಾರ್ಯ ಗ್ರಾಮದಲ್ಲಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿದ್ದು ಸಂತಸ ತಂದಿದೆ. ಇಲ್ಲಿಯ ಮಕ್ಕಳಿಗೆ ಅನುಕೂಲವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಗೊಂಡರೆ ಸಂಸ್ಥೆಯು ಹೆಮ್ಮೆಪಡುತ್ತದೆ ಎಂದರು. </p>.<p>ಸಂಸ್ಥೆಯ ನಾರಾಯಣಸ್ವಾಮಿ, ಮಹೇಶ ಬಿ. ಮಾತನಾಡಿದರು. ಓಸಾಟಾ ಧರ್ಮದತ್ತಿ ಸಂಸ್ಥೆ ಬೆಂಗಳೂರಿನ ಪ್ರತಿನಿಧಿಗಳನ್ನು ಗ್ರಾಮ ಮತ್ತು ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. </p>.<p>ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯಮನೂರಸಾಬ್ ನದಾಫ್, ಬಸವರಾಜ ಮುಳಗುಂದ, ಸಂಗಯ್ಯ ಹಿರೇಮಠ, ಅಯ್ಯನಗೌಡ, ಮುಖ್ಯಶಿಕ್ಷಕಿ ಸವಿತಾ, ಫಕೀರಗೌಡ ಮಾಲಿಪಾಟೀಲ, ಸುರೇಶ, ಕೃಷ್ಣಾ ಪತ್ತಾರ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು ಗಣ್ಯರು ಪಾಲ್ಗೊಂಡಿದ್ದರು. ರಮೇಶ ಆವೋಜಿ ನಿರೂಪಿಸಿದರು. ವಿರೂಪಾಕ್ಷಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>