‘ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಅಕ್ಕಪಕ್ಕದ ರೈತರು ಹಾಗೂ ಇಟ್ಟಿಗೆ ಭಟ್ಟಿಗಳವರಿಗೆ ಅವಶ್ಯ ಇದ್ದವರು ಈಗಲೇ ಪೈಪ್ಲೈನ್ ಮಾಡಿಕೊಳ್ಳಿ ಎಂದು ಗುತ್ತಿಗೆದಾರರು ತಿಳಿಸಿದ್ದರು. ಆದರೆ ರಸ್ತೆ ನಿರ್ಮಾಣವಾಗುವವರೆಗೆ ಸುಮ್ಮನೆ ಕುಳಿತು ರಸ್ತೆ ಸಿದ್ಧವಾದ ಕೆಲ ದಿನಗಳಲ್ಲಿಯೇ ಹೀಗೆ ಕಡಿದು ಹಾಕಿರುವುದು ಸರಿಯಲ್ಲ’ ಎಂದು ಜಹಗೀರಗುಡದೂರ ಗ್ರಾಮದ ಬಸವರಾಜ ಬೆನಕನಾಳ ಹಾಗೂ ಗುರಪ್ಪ ಕಾಟಾಪೂರ ಹೇಳಿದರು.