‘ಹದಿನೈದು ದಿನಗಳಿಂದಲೂ ಹಣ್ಣನ್ನು ಕೀಳಲಾಗುತ್ತಿದ್ದು, ಖರೀದಿದಾರರು ಮುಂದಕ್ಕೆ ಬಾರದ ಹಿನ್ನೆಲೆಯಲ್ಲಿ ಹಣ್ಣುಗಳನ್ನು ಒಂದೆಡೆ ಸಂಗ್ರಹಿಸಲಾಗಿದೆ. ಹಣ್ಣು ಮತ್ತಷ್ಟು ಕೆಡಬಾರದು ಎಂಬ ಕಾರಣಕ್ಕೆ ಪಕ್ಕದ ರಾಯಚೂರು, ಮಾನ್ವಿಯ ಖರೀದಿದಾರರಿಗೆ ಕೆಜಿಗೆ ₹ 5 ರಿಂದ ₹ 6ಕ್ಕೆ ಮಾರಾಟ ಮಾಡುತ್ತಿದ್ದೇನೆ. ಹಣ್ಣಿನ ಗುಣಮಟ್ಟ ಚೆನ್ನಾಗಿದ್ದು, ರುಚಿಯಾಗಿದೆ. ಆದರೆ ಬೇಡಿಕೆ ಕುಸಿದಿದೆ‘ ಎಂದು ರೈತ ದುರಗನಗೌಡ ಅಳಲು ತೋಡಿಕೊಂಡರು.