<p><strong>ತಾವರಗೇರಾ</strong> : ಸಮೀಪದ ಹಿರೇಮನ್ನಾಪೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಎಸ್ಡಿಎಂಸಿ ಸದಸ್ಯರು ವಿವಿಧ ಬಣ್ಣ ಹಚ್ಚಿ ಕೊಠಡಿಗಳನ್ನು ಶೃಂಗಾರಗೊಳಿಸಿದ್ದು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.</p>.<p>ಕರವೇ (ನಾರಾಯಣಗೌಡ ಬಣ) ಹೋಬಳಿಘಟಕದ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ ಮಾತನಾಡಿ, ನಮ್ಮ ಗ್ರಾಮದ ಸರ್ಕಾರಿ ಶಾಲೆ ಮಾದರಿ ಶಾಲೆ, ಶಿಕ್ಷಣ ಜೊತೆಗೆ ಸ್ವಚ್ಛತೆ, ಶುದ್ಧ ಪರಿಸರ, ಅಚ್ಚುಕಟ್ಟು ವಾತಾವರಣದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ನಾವು ಎಸ್ಡಿಎಂಸಿ ಸಹಕಾರದಿಂದ ಕಳೆದ 2 ದಿನಗಳಿಂದ ಹಗಲು , ರಾತ್ರಿ ಕೊಠಡಿಗಳಿಗೆ ಬಣ್ಣ ಹಚ್ಚಿದ್ದೇವೆ. ಗೋಡೆಗಳಿಗೆ ಬರಹಗಳು, ಕವಿಗಳ ಹೆಸರು, ಸಾಮಾನ್ಯ ಜ್ಞಾನದ ವಾಕ್ಯಗಳನ್ನು ಬರೆಯಲಾಗಿದೆ. ಸ್ವಂತ ಹಣ, ಕಾರ್ಯಕರ್ತರ ಧನ ಸಹಾಯದಿಂದ ಬಣ್ಣಹಚ್ಚುವ ಮೂಲಕ ತರಗತಿಗಳು ಸ್ವಚ್ಛವಾಗಿ ಕಾಣುವಂತೆ ಮಾಡುತ್ತಿವೆ ಎಂದರು</p>.<p>ಶಿಕ್ಷಣ ಇಲಾಖೆ ಅಧಿಕಾರಿಗಳು,ಸ್ಥಳೀಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ಸಿಬ್ಬಂದಿ ಇಂತಹ ಅವಕಾಶ ನೀಡಿದ್ದು, ಮಕ್ಕಳಿಗೆ ಪಠ್ಯದ ಬೋಧನೆ ಜೊತೆಗೆ ಶುದ್ಧ ವಾತಾವರಣ ಸೃಷ್ಟಿಯಾಗಬೇಕಿದೆ. ಆದ್ದರಿಂದ ಇಲ್ಲಿಯ 8 ಕೊಠಡಿಗಳನ್ನು ನಾವು ಬಣ್ಣ ಸ್ವಚ್ಚಗೊಳಿಸಿ ಬಣ್ಣ ಹಚ್ಚಿದ್ದೇವೆ ಎಂದು ಕರವೇ ಕಾರ್ಯಕರ್ತರು ತಿಳಿಸಿದರು.</p>.<p>ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ತಾವರಗೇರಾ, ಕರವೇ ಹೋಬಳಿ ಘಟಕದ ಉಪಾಧ್ಯಕ್ಷ ಮರಿಯಪ್ಪ, ಕಾರ್ಯದರ್ಶಿ ಶರಣಪ್ಪ ನಿಡಗುಂದಿ, ಪ್ರವೀಣ ಭೋವಿ, ಬಸವರಾಜ ತಾವರಗೇರಾ, ಹನಮೇಶ,ಬಸವರಾಜ, ಯಮನೂರಪ್ಪ ತಳವಾರ, ವಿರೇಶ ಟೆಂಗುಂಟಿ, ಬಾಲಾಜಿ ಚೆನ್ನದಾಸರ, ಸಿದ್ದಪ್ಪ ಭೋವಿ ಮತ್ತು ಕರವೇ ಕಾರ್ಯಕರ್ತರು ಇದ್ದರು.</p>.<div><blockquote>ಗ್ರಾಮದ ಸರ್ಕಾರಿ ಶಾಲೆಗೆ ಸಮುದಾಯ ಇಷ್ಟೊಂದು ಶ್ರಮಿಸುತ್ತಿರುವದು ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. </blockquote><span class="attribution">ವಿಜಯಲಕ್ಷ್ಮೀ ಹಿರೇಮಠ., ಸ.ಮಾ. ಹಿ. ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಹಿರೇಮನ್ನಾಪೂರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾವರಗೇರಾ</strong> : ಸಮೀಪದ ಹಿರೇಮನ್ನಾಪೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಎಸ್ಡಿಎಂಸಿ ಸದಸ್ಯರು ವಿವಿಧ ಬಣ್ಣ ಹಚ್ಚಿ ಕೊಠಡಿಗಳನ್ನು ಶೃಂಗಾರಗೊಳಿಸಿದ್ದು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.</p>.<p>ಕರವೇ (ನಾರಾಯಣಗೌಡ ಬಣ) ಹೋಬಳಿಘಟಕದ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ ಮಾತನಾಡಿ, ನಮ್ಮ ಗ್ರಾಮದ ಸರ್ಕಾರಿ ಶಾಲೆ ಮಾದರಿ ಶಾಲೆ, ಶಿಕ್ಷಣ ಜೊತೆಗೆ ಸ್ವಚ್ಛತೆ, ಶುದ್ಧ ಪರಿಸರ, ಅಚ್ಚುಕಟ್ಟು ವಾತಾವರಣದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ನಾವು ಎಸ್ಡಿಎಂಸಿ ಸಹಕಾರದಿಂದ ಕಳೆದ 2 ದಿನಗಳಿಂದ ಹಗಲು , ರಾತ್ರಿ ಕೊಠಡಿಗಳಿಗೆ ಬಣ್ಣ ಹಚ್ಚಿದ್ದೇವೆ. ಗೋಡೆಗಳಿಗೆ ಬರಹಗಳು, ಕವಿಗಳ ಹೆಸರು, ಸಾಮಾನ್ಯ ಜ್ಞಾನದ ವಾಕ್ಯಗಳನ್ನು ಬರೆಯಲಾಗಿದೆ. ಸ್ವಂತ ಹಣ, ಕಾರ್ಯಕರ್ತರ ಧನ ಸಹಾಯದಿಂದ ಬಣ್ಣಹಚ್ಚುವ ಮೂಲಕ ತರಗತಿಗಳು ಸ್ವಚ್ಛವಾಗಿ ಕಾಣುವಂತೆ ಮಾಡುತ್ತಿವೆ ಎಂದರು</p>.<p>ಶಿಕ್ಷಣ ಇಲಾಖೆ ಅಧಿಕಾರಿಗಳು,ಸ್ಥಳೀಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ಸಿಬ್ಬಂದಿ ಇಂತಹ ಅವಕಾಶ ನೀಡಿದ್ದು, ಮಕ್ಕಳಿಗೆ ಪಠ್ಯದ ಬೋಧನೆ ಜೊತೆಗೆ ಶುದ್ಧ ವಾತಾವರಣ ಸೃಷ್ಟಿಯಾಗಬೇಕಿದೆ. ಆದ್ದರಿಂದ ಇಲ್ಲಿಯ 8 ಕೊಠಡಿಗಳನ್ನು ನಾವು ಬಣ್ಣ ಸ್ವಚ್ಚಗೊಳಿಸಿ ಬಣ್ಣ ಹಚ್ಚಿದ್ದೇವೆ ಎಂದು ಕರವೇ ಕಾರ್ಯಕರ್ತರು ತಿಳಿಸಿದರು.</p>.<p>ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ತಾವರಗೇರಾ, ಕರವೇ ಹೋಬಳಿ ಘಟಕದ ಉಪಾಧ್ಯಕ್ಷ ಮರಿಯಪ್ಪ, ಕಾರ್ಯದರ್ಶಿ ಶರಣಪ್ಪ ನಿಡಗುಂದಿ, ಪ್ರವೀಣ ಭೋವಿ, ಬಸವರಾಜ ತಾವರಗೇರಾ, ಹನಮೇಶ,ಬಸವರಾಜ, ಯಮನೂರಪ್ಪ ತಳವಾರ, ವಿರೇಶ ಟೆಂಗುಂಟಿ, ಬಾಲಾಜಿ ಚೆನ್ನದಾಸರ, ಸಿದ್ದಪ್ಪ ಭೋವಿ ಮತ್ತು ಕರವೇ ಕಾರ್ಯಕರ್ತರು ಇದ್ದರು.</p>.<div><blockquote>ಗ್ರಾಮದ ಸರ್ಕಾರಿ ಶಾಲೆಗೆ ಸಮುದಾಯ ಇಷ್ಟೊಂದು ಶ್ರಮಿಸುತ್ತಿರುವದು ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. </blockquote><span class="attribution">ವಿಜಯಲಕ್ಷ್ಮೀ ಹಿರೇಮಠ., ಸ.ಮಾ. ಹಿ. ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಹಿರೇಮನ್ನಾಪೂರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>