ಮಳೆಯಿಂದಾಗಿ ಜಿಲ್ಲೆಯಲ್ಲಿ ಮೆಕ್ಕೆ ಜೋಳ ಬೆಳೆ ಹಾಳಾಗುವ ಸಂಕಷ್ಟ ಎದುರಾಗಿದೆ. ನವಲಿ 3.3 ಸೆಂ.ಮೀ., ಕೊಪ್ಪಳ 1.94 ಸೆಂ.ಮೀ., ಇರಕಲ್ಗಡ 6.7 ಸೆಂ.ಮೀ., ಅಳವಂಡಿ 1.06 ಸೆಂ.ಮೀ., ಹಿರೇಸಿಂದೋಗಿ 1.8 ಸೆಂ.ಮೀ., ಕಿನ್ನಾಳ 3.84 ಸೆಂ.ಮೀ., ಗುಳದಳ್ಳಿ 4.24 ಸೆಂ.ಮೀ., ಕುಷ್ಟಗಿ 1.4 ಸೆಂ.ಮೀ. ಮಳೆಯಾಗಿದೆ. ಕಾರಟಗಿ, ಹನುಮಸಾಗರ, ಕುಷ್ಟಗಿ, ಅಳವಂಡಿ ಮತ್ತು ಗಂಗಾವತಿಯಲ್ಲಿ ಮಳೆ ಸುರಿದಿದೆ.