<p><strong>ಗಂಗಾವತಿ</strong>: ತುಂಗಭದ್ರಾ ಜಲಾಶಯದಿಂದ ಮಂಗಳವಾರ ಅಪಾರ ಪ್ರಮಾಣದ ನೀರು ಬಿಟ್ಟಿರುವ ಕಾರಣ ಗಂಗಾವತಿ–ಕಂಪ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.</p>.<p>ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಬೀದರ್, ಕಲಬುರಗಿ, ಮಂತ್ರಾಲಯ ಮತ್ತು ಹೈದರಾಬಾದ್ ಮಾರ್ಗದ ಬಸ್ಗಳು ನೀರಿನ ಹರಿವು ಇಳಿಮುಖವಾಗುವ ತನಕ ಬುಕ್ಕಸಾಗರ ಸೇತುವೆ ಮಾರ್ಗದಿಂದ ತೆರಳಬೇಕು ಎಂದು ಸ್ಥಳೀಯ ಆಡಳಿತ ಸೂಚಿಸಿದೆ.</p>.<p>ನದಿಯ ಮಧ್ಯಭಾಗದಲ್ಲಿರುವ ಅಂಜನಾದ್ರಿ ಬೆಟ್ಟದ ಸಮೀಪದ ಋಷಿಮುಖಿ ಪರ್ವತ, ಚಂದ್ರಮೌಳೇಶ್ಚರ ದೇವಸ್ಥಾನ, ವಿರೂಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ, ಆನೆಗೊಂದಿ ಕೃಷ್ಣದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಸಂಪೂರ್ಣ ಜಲಾವೃತವಾಗಿದೆ. ನವವೃಂದಾವನ ಜನರ ಸಂಪರ್ಕ ಕಳೆದುಕೊಂಡಿದೆ.</p>.<p>ನೀರಿನ ರಭಸ ಜೋರಾಗಿದ್ದು ಹನುಮನಹಳ್ಳಿ, ದೇವಘಾಟ್, ಲಕ್ಷ್ಮೀಪುರ, ನಾಗನಳ್ಳಿ, ಚಿಕ್ಕಜಂಕಲ್, ಅಯೋಧ್ಯೆ, ಮುಸ್ಟೂರು, ಢಣಾಪುರ, ಹೆಬ್ಬಾಳ ಭಾಗದ ನದಿಪಾತ್ರದಲ್ಲಿರುವ ಭತ್ತ, ಕಬ್ಬು, ಬಾಳೆ ತೋಟಗಳು ಜಲಾವೃತವಾಗಿವೆ. ಹಲವು ಕಡೆ ಕಣಿವೆಗಳು ಕೊಚ್ಚಿಹೋಗಿವೆ.</p>.<p>ಕಂಪ್ಲಿ- ಗಂಗಾವತಿ ಸೇತುವೆ 1,944 ಅಡಿ ಉದ್ದ, 22 ಅಡಿ ಅಗಲ ಇದೆ. 38 ಅಡಿಯ ಎಲ್ಲಾ 51 ಕಮಾನುಗಳಲ್ಲಿ ನೀರು ರಭಸವಾಗಿ ಹರಿಯುತ್ತಿವೆ.</p>.<p>ಎಚ್ಚರಿಕೆ: ಅಪಾಯಮಟ್ಟದಲ್ಲಿ ನೀರು ಬಿಡುಗಡೆ ಮಾಡಲಿರುವ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ನದಿ ಪಾತ್ರದಲ್ಲಿ ಓಡಾಡಬಾರದು. ಫೋಟೊಗಳನ್ನು ತೆಗೆದುಕೊಳ್ಳಲು ತೆರಳಬಾರದು. ಜಾನುವಾರುಗಳನ್ನು ಮೇಯಿಸಬಾರದು, ನದಿಪಾತ್ರದಲ್ಲಿ ಮನೆ ಇರುವವರು ಸುರಕ್ಷಿತ ಸ್ಥಳಕ್ಕೆ ಹೋಗಬೇಕು ಎಂದು ಗಂಗಾವತಿ ತಹಶೀಲ್ದಾರ್ ಸೂಚಿಸಿದ್ದಾರೆ. ನದಿಪಾತ್ರದ ಗ್ರಾಮಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.</p>.<p><a href="https://www.prajavani.net/district/kodagu/demand-for-kodavaland-961814.html" itemprop="url">ಮಡಿಕೇರಿ: ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗೆ ಆಗ್ರಹಿಸಿ ಧರಣಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ತುಂಗಭದ್ರಾ ಜಲಾಶಯದಿಂದ ಮಂಗಳವಾರ ಅಪಾರ ಪ್ರಮಾಣದ ನೀರು ಬಿಟ್ಟಿರುವ ಕಾರಣ ಗಂಗಾವತಿ–ಕಂಪ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.</p>.<p>ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಬೀದರ್, ಕಲಬುರಗಿ, ಮಂತ್ರಾಲಯ ಮತ್ತು ಹೈದರಾಬಾದ್ ಮಾರ್ಗದ ಬಸ್ಗಳು ನೀರಿನ ಹರಿವು ಇಳಿಮುಖವಾಗುವ ತನಕ ಬುಕ್ಕಸಾಗರ ಸೇತುವೆ ಮಾರ್ಗದಿಂದ ತೆರಳಬೇಕು ಎಂದು ಸ್ಥಳೀಯ ಆಡಳಿತ ಸೂಚಿಸಿದೆ.</p>.<p>ನದಿಯ ಮಧ್ಯಭಾಗದಲ್ಲಿರುವ ಅಂಜನಾದ್ರಿ ಬೆಟ್ಟದ ಸಮೀಪದ ಋಷಿಮುಖಿ ಪರ್ವತ, ಚಂದ್ರಮೌಳೇಶ್ಚರ ದೇವಸ್ಥಾನ, ವಿರೂಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ, ಆನೆಗೊಂದಿ ಕೃಷ್ಣದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಸಂಪೂರ್ಣ ಜಲಾವೃತವಾಗಿದೆ. ನವವೃಂದಾವನ ಜನರ ಸಂಪರ್ಕ ಕಳೆದುಕೊಂಡಿದೆ.</p>.<p>ನೀರಿನ ರಭಸ ಜೋರಾಗಿದ್ದು ಹನುಮನಹಳ್ಳಿ, ದೇವಘಾಟ್, ಲಕ್ಷ್ಮೀಪುರ, ನಾಗನಳ್ಳಿ, ಚಿಕ್ಕಜಂಕಲ್, ಅಯೋಧ್ಯೆ, ಮುಸ್ಟೂರು, ಢಣಾಪುರ, ಹೆಬ್ಬಾಳ ಭಾಗದ ನದಿಪಾತ್ರದಲ್ಲಿರುವ ಭತ್ತ, ಕಬ್ಬು, ಬಾಳೆ ತೋಟಗಳು ಜಲಾವೃತವಾಗಿವೆ. ಹಲವು ಕಡೆ ಕಣಿವೆಗಳು ಕೊಚ್ಚಿಹೋಗಿವೆ.</p>.<p>ಕಂಪ್ಲಿ- ಗಂಗಾವತಿ ಸೇತುವೆ 1,944 ಅಡಿ ಉದ್ದ, 22 ಅಡಿ ಅಗಲ ಇದೆ. 38 ಅಡಿಯ ಎಲ್ಲಾ 51 ಕಮಾನುಗಳಲ್ಲಿ ನೀರು ರಭಸವಾಗಿ ಹರಿಯುತ್ತಿವೆ.</p>.<p>ಎಚ್ಚರಿಕೆ: ಅಪಾಯಮಟ್ಟದಲ್ಲಿ ನೀರು ಬಿಡುಗಡೆ ಮಾಡಲಿರುವ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ನದಿ ಪಾತ್ರದಲ್ಲಿ ಓಡಾಡಬಾರದು. ಫೋಟೊಗಳನ್ನು ತೆಗೆದುಕೊಳ್ಳಲು ತೆರಳಬಾರದು. ಜಾನುವಾರುಗಳನ್ನು ಮೇಯಿಸಬಾರದು, ನದಿಪಾತ್ರದಲ್ಲಿ ಮನೆ ಇರುವವರು ಸುರಕ್ಷಿತ ಸ್ಥಳಕ್ಕೆ ಹೋಗಬೇಕು ಎಂದು ಗಂಗಾವತಿ ತಹಶೀಲ್ದಾರ್ ಸೂಚಿಸಿದ್ದಾರೆ. ನದಿಪಾತ್ರದ ಗ್ರಾಮಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.</p>.<p><a href="https://www.prajavani.net/district/kodagu/demand-for-kodavaland-961814.html" itemprop="url">ಮಡಿಕೇರಿ: ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗೆ ಆಗ್ರಹಿಸಿ ಧರಣಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>