<p><strong>ಕುಷ್ಟಗಿ:</strong> ಪಟ್ಟಣದ ಹೊರವಲಯದಲ್ಲಿ ಕೋಟ್ಯಂತರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ಗ್ರಹಣ ಹಿಡಿದಿದ್ದು, ಮೂರು ದಶಕ ಕಳೆದರೂ ಸಂಗ್ರಹವಾಗಿರುವ ತರಹೇವಾರಿ ತ್ಯಾಜ್ಯದ ಗುಡ್ಡ ನಿರ್ಮಾಣವಾಗಿದೆ. ಸುತ್ತಲಿನ ಪರಿಸರ ಮತ್ತಷ್ಟೂ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.</p>.<p>ಘನತ್ಯಾಜ್ಯ ವಿಲೇವಾರಿ ಘಟಕ 2006ಲ್ಲಿಯೇ ಕಾರ್ಯಾರಂಭ ಮಾಡಿದೆ. ಪಟ್ಟಣದಲ್ಲಿನ ತ್ಯಾಜ್ಯವನ್ನು ಘಟಕದಲ್ಲಿ ಸಂಗ್ರಹಿಸುವುದು ಮತ್ತು ನಂತರ ಅದನ್ನು ಬೇರೆ ಬೇರೆ ಹಂತಗಳಲ್ಲಿ ಸಂಸ್ಕರಿಸಿ ಗೊಬ್ಬರ ತಯಾರಿಸುವುದು ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಪ್ಲಾಸ್ಟಿಕ್ ಇತರೆ ತ್ಯಾಜ್ಯವನ್ನು ಮೂರು ರೀತಿಯಲ್ಲಿ ಪ್ರತ್ಯೇಕಿಸಿ ಸಿಮೆಂಟ್ ಕಾರ್ಖಾನೆಗೆ ಕಳಿಸುವ ಮೂಲಕ ಮರುಬಳಕೆ ಉದ್ದೇಶ ಹೊಂದಲಾಗಿದೆ.</p>.<p>ಮೂವತ್ತು ವರ್ಷಗಳಿಂದ ಕೇವಲ ತ್ಯಾಜ್ಯ ಮಾತ್ರ ಸಂಗ್ರಹವಾಗುತ್ತಿದೆ. ಆದರೆ ಸಂಸ್ಕರಣೆ ಮಾತ್ರ ಮರಿಚಿಕೆಯಾಗಿದೆ. ಕೋಟಿ ಕೋಟಿ ಹಣದ ವೆಚ್ಚದಲ್ಲಿ ಬೃಹತ್ ಶೆಡ್ಗಳು ನಿರ್ಮಾಣಗೊಂಡಿವೆ. ₹ 20 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಆದರೆ ಮಹತ್ವದ ಉದ್ದೇಶ ಮಾತ್ರ ಈಡೇರಿಲ್ಲ.</p>.<p>ತ್ಯಾಜ್ಯ ಪ್ರತ್ಯೇಕಿಸಿ ಅಂತಿಮವಾಗಿ ಗೊಬ್ಬರ ಹೊರಹಾಕುವ ಯಂತ್ರ ಈಗಷ್ಟೆ ಬಂದಿದ್ದು ಪ್ರಾಯೋಗಿಕ ಹಂತದಲ್ಲಿದೆ. ಇನ್ನೂ ಕೆಲಸ ಆರಂಭಿಸಿಲ್ಲ.</p>.<p>ಸಂಸ್ಕರಿಸಲು ತ್ಯಾಜ್ಯ ಒಣಗಿರಬೇಕು, ಹಾಗಾಗಿ ಮಳೆಗಾಲದಲ್ಲಿ ತ್ಯಾಜ್ಯ ಸಂಗ್ರಹಣೆಗೆಂದು ದೊಡ್ಡ ಗಾತ್ರದ ‘ಮಾನ್ಸೂನ್ ಶೆಡ್’ ಸಹ ನಿರ್ಮಾಣ ಮಾಡಲಾಗಿದೆ. ಗೊಬ್ಬರವಾಗದ ಮತ್ತು ಕೊಳೆಯದ ಕಲ್ಲು ಮತ್ತಿತರೆ ವಸ್ತುಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುವುದಿಲ್ಲ. ಟಾರ್ಪಾಲಿನ್ ಹೊದಿಕೆ ಅಳವಡಿಸಿರುವ ಅತಿ ದೊಡ್ಡ ಪ್ರಮಾಣದ ಆಳ, ಅಗಲ ಮತ್ತು ಉದ್ದನೆ ಹೊಂಡದಲ್ಲಿ ಅಂಥ ತ್ಯಾಜವನ್ನು ಸುರಿಯಲಾಗುತ್ತದೆ. ಹೊಂಡ ಭರ್ತಿಯಾದ ನಂತರ ಅದರ ಮೇಲೆ ಕೆಂಪು ಮಣ್ಣಿನ ಹೊದಿಕೆಹಾಕಿ ಸಮತಟ್ಟು ಮಾಡಿ ಅದನ್ನು ಉದ್ಯಾನವನ್ನಾಗಿ ಪರಿವರ್ತಿಸಲಾಗುವುದು ಎನ್ನುತ್ತದೆ ಪುರಸಭೆ ಮೂಲಗಳು.</p>.<div><blockquote>ಘಟಕ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ. ಪ್ಲಾಸ್ಟಿಕ್ನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳಿಸಲಾಗುತ್ತಿದ್ದು ಅದಕ್ಕಾಗಿ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತದೆ.</blockquote><span class="attribution">ವೆಂಕಪ್ಪ ಬೀಳಗಿ ಪುರಸಭೆ ಮುಖ್ಯಾಧಿಕಾರಿ</span></div>.<div><blockquote>ಸಂಗ್ರಹವಾಗಿರುವ ತಾಜ್ಯವನ್ನೆಲ್ಲ ಅರು ತಿಂಗಳ ಒಳಗೆ ಸಂಸ್ಕರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. </blockquote><span class="attribution">ಪ್ರಾಣೇಶ ಬಳ್ಳಾರಿ ನೈರ್ಮಲ್ಯ ನಿರೀಕ್ಷಕ</span></div>.<p><strong>ಉತ್ತರ ಸಿಗದ ಪ್ರಶ್ನೆಗಳು</strong> </p><p>ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ ಘಟಕದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ರೀತಿಯ ಸಂದೇಹಗಳಿದ್ದು ಅವುಗಳಿಗೆ ಉತ್ತರ ದೊರಕಿಲ್ಲ. ವಿಲೇವಾರಿ ಮಾಡಲು ಸಾಧ್ಯವಾಗದ ತ್ಯಾಜ್ಯ ಸುರಿಯುವ ಗುಂಡಿ ತುಂಬಿದ ಮೇಲೆ ಪುನಃ ಅಂಥ ತ್ಯಾಜ್ಯವನ್ನು ಎಲ್ಲಿ ಸುರಿಯಲಾಗುತ್ತದೆ ಪ್ಲಾಸ್ಟಿಕ್ ಕಲ್ಲು ಇತರೆ ತ್ಯಾಜ್ಯ ಬೇರ್ಪಡಿಸಿದ ನಂತರ ಉಳಿಯುವುದೇ ಗೊಬ್ಬರ ಎನ್ನಲಾಗುತ್ತಿದ್ದು ಕೊಳಚೆ ಮಣ್ಣು ಬಿಟ್ಟರೆ ಅದರಲ್ಲಿ ಏನೂ ಇರುವುದಿಲ್ಲ. ಅಷ್ಟೇ ಅಲ್ಲ ಹರಳುಗಳು ಗಾಜಿನ ಚೂರುಗಳೂ ಗೊಬ್ಬರದಲ್ಲಿ ಸಂಗ್ರಹವಾಗುತ್ತಿದ್ದು ಅದನ್ನು ರೈತರು ತೋಟಗಳಿಗೆ ಬಳಸಬಹುದೆ ಎಂಬುದಕ್ಕೆ ಪುರಸಭೆ ಬಳಿ ಉತ್ತರ ಇಲ್ಲ. ಈ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿದರೆ ಜಿಲ್ಲಾ ಅಭಿವೃದ್ಧಿ ಕೋಶದ ಅಧಿಕಾರಿಗಳು ಎಂಜಿನಿಯರ್ಗಳು ದೂರವಾಣಿ ಕರೆ ಸ್ವೀಕರಿಸಲಿಲ್ಲ.</p>.<p> <strong>ಮಾಲಿನ್ಯದಿಂದ ಕಂಗೆಟ್ಟ ರೈತರು</strong> </p><p>ಬೃಹದಾಕಾರದಲ್ಲಿ ತ್ಯಾಜ್ಯದ ಗುಡ್ಡ ಬೆಳೆಯುತ್ತಿದ್ದು ಅಪಾಯಕಾರಿ ತ್ಯಾಜ್ಯಗಳು ಅದರಲ್ಲಿವೆ. ಪೌರಕಾರ್ಮಿಕರೂ ಯಾವುದೇ ರಕ್ಷಾ ಕವಚಗಳಿಲ್ಲದೇ ಅಂಥ ತ್ಯಾಜ್ಯದಲ್ಲೇ ಆರೋಗ್ಯ ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿದ್ದಾರೆ. ಬೇಸಿಗೆಯಲ್ಲಿ ತ್ಯಾಜ್ಯದ ಮೇಲ್ಮೈ ಧೂಳು ಸುತ್ತಲೂ ಹರಡುತ್ತಿದೆ. ಮಳೆಗಾಲದಲ್ಲಂತೂ ಮಾಲಿನ್ಯ ಹೆಚ್ಚಿ ಘನತ್ಯಾಜ್ಯ ಘಟಕದ ಸುತ್ತಲೂ ಕೃಷಿ ಕೆಲಸದಲ್ಲಿ ತೊಡಗಲು ಸಾಧ್ಯವಾಗದ ರೀತಿಯಲ್ಲಿ ಗಬ್ಬು ವಾಸನೆ ಇರುತ್ತಿದ್ದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ರೈತ ವೀರಭದ್ರಪ್ಪ ಟೆಂಗುಂಟಿ ಬಸನಗೌಡ ಪಾಟೀಲ ಇತರರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ಪಟ್ಟಣದ ಹೊರವಲಯದಲ್ಲಿ ಕೋಟ್ಯಂತರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ಗ್ರಹಣ ಹಿಡಿದಿದ್ದು, ಮೂರು ದಶಕ ಕಳೆದರೂ ಸಂಗ್ರಹವಾಗಿರುವ ತರಹೇವಾರಿ ತ್ಯಾಜ್ಯದ ಗುಡ್ಡ ನಿರ್ಮಾಣವಾಗಿದೆ. ಸುತ್ತಲಿನ ಪರಿಸರ ಮತ್ತಷ್ಟೂ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.</p>.<p>ಘನತ್ಯಾಜ್ಯ ವಿಲೇವಾರಿ ಘಟಕ 2006ಲ್ಲಿಯೇ ಕಾರ್ಯಾರಂಭ ಮಾಡಿದೆ. ಪಟ್ಟಣದಲ್ಲಿನ ತ್ಯಾಜ್ಯವನ್ನು ಘಟಕದಲ್ಲಿ ಸಂಗ್ರಹಿಸುವುದು ಮತ್ತು ನಂತರ ಅದನ್ನು ಬೇರೆ ಬೇರೆ ಹಂತಗಳಲ್ಲಿ ಸಂಸ್ಕರಿಸಿ ಗೊಬ್ಬರ ತಯಾರಿಸುವುದು ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಪ್ಲಾಸ್ಟಿಕ್ ಇತರೆ ತ್ಯಾಜ್ಯವನ್ನು ಮೂರು ರೀತಿಯಲ್ಲಿ ಪ್ರತ್ಯೇಕಿಸಿ ಸಿಮೆಂಟ್ ಕಾರ್ಖಾನೆಗೆ ಕಳಿಸುವ ಮೂಲಕ ಮರುಬಳಕೆ ಉದ್ದೇಶ ಹೊಂದಲಾಗಿದೆ.</p>.<p>ಮೂವತ್ತು ವರ್ಷಗಳಿಂದ ಕೇವಲ ತ್ಯಾಜ್ಯ ಮಾತ್ರ ಸಂಗ್ರಹವಾಗುತ್ತಿದೆ. ಆದರೆ ಸಂಸ್ಕರಣೆ ಮಾತ್ರ ಮರಿಚಿಕೆಯಾಗಿದೆ. ಕೋಟಿ ಕೋಟಿ ಹಣದ ವೆಚ್ಚದಲ್ಲಿ ಬೃಹತ್ ಶೆಡ್ಗಳು ನಿರ್ಮಾಣಗೊಂಡಿವೆ. ₹ 20 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಆದರೆ ಮಹತ್ವದ ಉದ್ದೇಶ ಮಾತ್ರ ಈಡೇರಿಲ್ಲ.</p>.<p>ತ್ಯಾಜ್ಯ ಪ್ರತ್ಯೇಕಿಸಿ ಅಂತಿಮವಾಗಿ ಗೊಬ್ಬರ ಹೊರಹಾಕುವ ಯಂತ್ರ ಈಗಷ್ಟೆ ಬಂದಿದ್ದು ಪ್ರಾಯೋಗಿಕ ಹಂತದಲ್ಲಿದೆ. ಇನ್ನೂ ಕೆಲಸ ಆರಂಭಿಸಿಲ್ಲ.</p>.<p>ಸಂಸ್ಕರಿಸಲು ತ್ಯಾಜ್ಯ ಒಣಗಿರಬೇಕು, ಹಾಗಾಗಿ ಮಳೆಗಾಲದಲ್ಲಿ ತ್ಯಾಜ್ಯ ಸಂಗ್ರಹಣೆಗೆಂದು ದೊಡ್ಡ ಗಾತ್ರದ ‘ಮಾನ್ಸೂನ್ ಶೆಡ್’ ಸಹ ನಿರ್ಮಾಣ ಮಾಡಲಾಗಿದೆ. ಗೊಬ್ಬರವಾಗದ ಮತ್ತು ಕೊಳೆಯದ ಕಲ್ಲು ಮತ್ತಿತರೆ ವಸ್ತುಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುವುದಿಲ್ಲ. ಟಾರ್ಪಾಲಿನ್ ಹೊದಿಕೆ ಅಳವಡಿಸಿರುವ ಅತಿ ದೊಡ್ಡ ಪ್ರಮಾಣದ ಆಳ, ಅಗಲ ಮತ್ತು ಉದ್ದನೆ ಹೊಂಡದಲ್ಲಿ ಅಂಥ ತ್ಯಾಜವನ್ನು ಸುರಿಯಲಾಗುತ್ತದೆ. ಹೊಂಡ ಭರ್ತಿಯಾದ ನಂತರ ಅದರ ಮೇಲೆ ಕೆಂಪು ಮಣ್ಣಿನ ಹೊದಿಕೆಹಾಕಿ ಸಮತಟ್ಟು ಮಾಡಿ ಅದನ್ನು ಉದ್ಯಾನವನ್ನಾಗಿ ಪರಿವರ್ತಿಸಲಾಗುವುದು ಎನ್ನುತ್ತದೆ ಪುರಸಭೆ ಮೂಲಗಳು.</p>.<div><blockquote>ಘಟಕ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ. ಪ್ಲಾಸ್ಟಿಕ್ನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳಿಸಲಾಗುತ್ತಿದ್ದು ಅದಕ್ಕಾಗಿ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತದೆ.</blockquote><span class="attribution">ವೆಂಕಪ್ಪ ಬೀಳಗಿ ಪುರಸಭೆ ಮುಖ್ಯಾಧಿಕಾರಿ</span></div>.<div><blockquote>ಸಂಗ್ರಹವಾಗಿರುವ ತಾಜ್ಯವನ್ನೆಲ್ಲ ಅರು ತಿಂಗಳ ಒಳಗೆ ಸಂಸ್ಕರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. </blockquote><span class="attribution">ಪ್ರಾಣೇಶ ಬಳ್ಳಾರಿ ನೈರ್ಮಲ್ಯ ನಿರೀಕ್ಷಕ</span></div>.<p><strong>ಉತ್ತರ ಸಿಗದ ಪ್ರಶ್ನೆಗಳು</strong> </p><p>ಘನತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ ಘಟಕದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ರೀತಿಯ ಸಂದೇಹಗಳಿದ್ದು ಅವುಗಳಿಗೆ ಉತ್ತರ ದೊರಕಿಲ್ಲ. ವಿಲೇವಾರಿ ಮಾಡಲು ಸಾಧ್ಯವಾಗದ ತ್ಯಾಜ್ಯ ಸುರಿಯುವ ಗುಂಡಿ ತುಂಬಿದ ಮೇಲೆ ಪುನಃ ಅಂಥ ತ್ಯಾಜ್ಯವನ್ನು ಎಲ್ಲಿ ಸುರಿಯಲಾಗುತ್ತದೆ ಪ್ಲಾಸ್ಟಿಕ್ ಕಲ್ಲು ಇತರೆ ತ್ಯಾಜ್ಯ ಬೇರ್ಪಡಿಸಿದ ನಂತರ ಉಳಿಯುವುದೇ ಗೊಬ್ಬರ ಎನ್ನಲಾಗುತ್ತಿದ್ದು ಕೊಳಚೆ ಮಣ್ಣು ಬಿಟ್ಟರೆ ಅದರಲ್ಲಿ ಏನೂ ಇರುವುದಿಲ್ಲ. ಅಷ್ಟೇ ಅಲ್ಲ ಹರಳುಗಳು ಗಾಜಿನ ಚೂರುಗಳೂ ಗೊಬ್ಬರದಲ್ಲಿ ಸಂಗ್ರಹವಾಗುತ್ತಿದ್ದು ಅದನ್ನು ರೈತರು ತೋಟಗಳಿಗೆ ಬಳಸಬಹುದೆ ಎಂಬುದಕ್ಕೆ ಪುರಸಭೆ ಬಳಿ ಉತ್ತರ ಇಲ್ಲ. ಈ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿದರೆ ಜಿಲ್ಲಾ ಅಭಿವೃದ್ಧಿ ಕೋಶದ ಅಧಿಕಾರಿಗಳು ಎಂಜಿನಿಯರ್ಗಳು ದೂರವಾಣಿ ಕರೆ ಸ್ವೀಕರಿಸಲಿಲ್ಲ.</p>.<p> <strong>ಮಾಲಿನ್ಯದಿಂದ ಕಂಗೆಟ್ಟ ರೈತರು</strong> </p><p>ಬೃಹದಾಕಾರದಲ್ಲಿ ತ್ಯಾಜ್ಯದ ಗುಡ್ಡ ಬೆಳೆಯುತ್ತಿದ್ದು ಅಪಾಯಕಾರಿ ತ್ಯಾಜ್ಯಗಳು ಅದರಲ್ಲಿವೆ. ಪೌರಕಾರ್ಮಿಕರೂ ಯಾವುದೇ ರಕ್ಷಾ ಕವಚಗಳಿಲ್ಲದೇ ಅಂಥ ತ್ಯಾಜ್ಯದಲ್ಲೇ ಆರೋಗ್ಯ ಲೆಕ್ಕಿಸದೆ ಕೆಲಸ ನಿರ್ವಹಿಸುತ್ತಿದ್ದಾರೆ. ಬೇಸಿಗೆಯಲ್ಲಿ ತ್ಯಾಜ್ಯದ ಮೇಲ್ಮೈ ಧೂಳು ಸುತ್ತಲೂ ಹರಡುತ್ತಿದೆ. ಮಳೆಗಾಲದಲ್ಲಂತೂ ಮಾಲಿನ್ಯ ಹೆಚ್ಚಿ ಘನತ್ಯಾಜ್ಯ ಘಟಕದ ಸುತ್ತಲೂ ಕೃಷಿ ಕೆಲಸದಲ್ಲಿ ತೊಡಗಲು ಸಾಧ್ಯವಾಗದ ರೀತಿಯಲ್ಲಿ ಗಬ್ಬು ವಾಸನೆ ಇರುತ್ತಿದ್ದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ರೈತ ವೀರಭದ್ರಪ್ಪ ಟೆಂಗುಂಟಿ ಬಸನಗೌಡ ಪಾಟೀಲ ಇತರರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>