<p><strong>ಕುಷ್ಟಗಿ:</strong> ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಲ್ಲಿಯ ಪುರಸಭೆಯ ಎಲ್ಲ ಸಿಬ್ಬಂದಿ ತೆರಳಿದ್ದರಿಂದ ಅಧಿಕಾರಿ, ಸಿಬ್ಬಂದಿ ಇಲ್ಲದೇ ಕಚೇರಿ ಭಣಗುಡುತ್ತಿದ್ದುದು ಶುಕ್ರವಾರ ಕಂಡುಬಂದಿತು.</p>.<p>ವಿದ್ಯುತ್ ಸಂಪರ್ಕದ ಆರ್.ಆರ್ ಸಂಖ್ಯೆ ಹೊಂದಿರುವ ಪಟ್ಟಣದ 23 ವಾರ್ಡುಗಳಿಗೆ ಜಿಪಿಎಸ್ ಆಧಾರಿತ ಜಿಯೊ ಟ್ಯಾಗ್ ಮಾಡಿ ಯುಎಚ್ಐಡಿ ಸಂಖ್ಯೆಯನ್ನೂ ನಮೂದಿಸಲಾಗಿದೆ. ಆದರೆ ಜಿಯೊ ಟ್ಯಾಗ್ ಮಾಡಿದ ಆರ್ಆರ್ ಸಂಖ್ಯೆ ಮನೆಗಳು ಮಾತ್ರ ಬೇರೆ ಬೇರೆ ವಾರ್ಡುಗಳಲ್ಲಿರುವುದರಿಂದ ಸಮೀಕ್ಷೆದಾರರ ಕರ್ತವ್ಯಕ್ಕೆ ಅಡ್ಡಿಯಾಗಿತ್ತು.</p>.<p>ಇದರಿಂದ ಸಮೀಕ್ಷೆ ನಿಗದಿತ ಅವಧಿಯಲ್ಲಿ ಮುಗಿಯುವುದೇ ಅನುಮಾನ ಎಂದರಿತ ಅಧಿಕಾರಿಗಳು ಮನೆಗಳನ್ನು ಪತ್ತೆಹಚ್ಚುವ ಕೆಲಸಕ್ಕೆ ಪುರಸಭೆ ಸಿಬ್ಬಂದಿ ನೆರವು ಪಡೆಯುತ್ತಿದ್ದಾರೆ. ಹಾಗಾಗಿ ಕರ್ತವ್ಯದಲ್ಲಿರುವ ಪುರಸಭೆಯ ಮುಖ್ಯಾಧಿಕಾರಿ ಸಹಿತ ಎಲ್ಲ ಸಿಬ್ಬಂದಿ ಮನೆಗಳ ಪತ್ತೆ ಕಾರ್ಯಕ್ಕೆ ಸಮೀಕ್ಷಕರಿಗೆ ಸಹಕರಿಸುತ್ತಿದ್ದಾರೆ. ಈ ಕಾರಣದಿಂದ ಪುರಸಭೆ ಕಚೇರಿಯಲ್ಲಿ ಬಹಳಷ್ಟು ಸಿಬ್ಬಂದಿ ಪೈಕಿ ಕೇವಲ ಇಬ್ಬರು ಮಾತ್ರ ಇರುವುದು ಕಂಡುಬಂದಿತು.</p>.<p>ಸರ್ಕಾರದ ವಿವಿಧ ಸೇವೆಗಳಿಗೆಂದು ಪುರಸಭೆಗೆ ಬಂದಿದ್ದ ಸಾರ್ವಜನಿಕರು ಬಂದ ದಾರಿಗೆ ಸುಂಕ ಇಲ್ಲವೆಂದು ಗೊಣಗುತ್ತಿದ್ದರು. ಚೇಂಬರ್ನಲ್ಲಿ ಕುಳಿತಿದ್ದ ಅಧ್ಯಕ್ಷ ಮಹಾಂತೇಶ ಕಲಭಾವಿ ಅವರು ಸಿಬ್ಬಂದಿ ಇಲ್ಲ ಸೋಮವಾರ ಬನ್ನಿ ಎಂದು ಹೇಳುತ್ತಿದ್ದುದು ಕಂಡುಬಂದಿತು.</p>.<p>ಈ ಕುರಿತು ನಂತರ ವಿವರಿಸಿದ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಸಮೀಕ್ಷೆ ಕೆಲಸ ವಿಳಂಬವಾಗುತ್ತಿರುವುದರಿಂದ ಎಲ್ಲ ಸಿಬ್ಬಂದಿ ಸಮೀಕ್ಷೆ ಕೆಲಸದಲ್ಲಿರುವವರಿಗೆ ಮನೆಗಳನ್ನು ಗುರುತಿಸಲು ಸಹಾಯ ಮಾಡಲು ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದರು.</p>.<p>ಈ ಮಧ್ಯೆ ಅ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಆಗಮಿಸುತ್ತಿದ್ದಾರೆ. ಸಮೀಕ್ಷೆ ಕೆಲಸವನ್ನು ಅಚ್ಚುಕಟ್ಟಾಗಿ ತ್ವರಿತಗತಿಯಲ್ಲಿ ನಿರ್ವಹಿಸಲು ಜಿಲ್ಲಾಡಳಿತ ಎಲ್ಲ ಸಿಬ್ಬಂದಿಯನ್ನೂ ಸಮೀಕ್ಷೆ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ದೊರೆಯದಂತಾಗಿದೆ ಎಂದು ಪುರಸಭೆಯಲ್ಲಿ ಪ್ರತಿನಿಧಿಯೊಬ್ಬರು ಬೇಸರ ಹೊರಹಾಕಿದರು. </p>.<p><strong>ಪ್ರಮುಖ ಸಿಬ್ಬಂದಿ ಹುದ್ದೆ ಖಾಲಿ</strong></p><p>ಪುರಸಭೆಯಲ್ಲಿ ಒಟ್ಟು 23 ಸಿಬ್ಬಂದಿ ಇದ್ದಾರೆ. ಆದರೆ ಪ್ರಮುಖ ಶಾಖೆಗಳಾದ ಕಂದಾಯ ಅಧಿಕಾರಿ ಕಂದಾಯ ನಿರೀಕ್ಷಕ ವಿನ್ಯಾಸ ಶಾಖೆಗಳ ಸಿಬ್ಬಂದಿ ವರ್ಗವಾಗಿದ್ದು ಅನೇಕ ತಿಂಗಳುಗಳಿಂದಲೂ ಈ ಹುದ್ದೆಗಳು ಖಾಲಿ ಉಳಿದಿವೆ.</p><p>ಕಚೇರಿಯಲ್ಲಿನ ಸಿಬ್ಬಂದಿಗೆ ಹೆಚ್ಚುವರಿಯಾಗಿ ತಲಾ ಮೂರು ನಾಲ್ಕು ಶಾಖೆಗಳ ಪ್ರಭಾರ ಅಧಿಕಾರ ವಹಿಸಲಾಗಿದೆ. ಕಿರಿಯ ಎಂಜಿನಿಯರ್ ವಾರದಲ್ಲಿ ಎರಡು ದಿನ ಇಲ್ಲಿಗೆ ಬರಬೇಕಿದ್ದರೂ ಬರುತ್ತಿಲ್ಲ. ಖಾಲಿ ಹುದ್ದೆಗಳ ಭರ್ತಿಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೇವೆ ಎಂದು ಅಧ್ಯಕ್ಷ ಮಹಾಂತೇಶ ಕಲಭಾವಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಲ್ಲಿಯ ಪುರಸಭೆಯ ಎಲ್ಲ ಸಿಬ್ಬಂದಿ ತೆರಳಿದ್ದರಿಂದ ಅಧಿಕಾರಿ, ಸಿಬ್ಬಂದಿ ಇಲ್ಲದೇ ಕಚೇರಿ ಭಣಗುಡುತ್ತಿದ್ದುದು ಶುಕ್ರವಾರ ಕಂಡುಬಂದಿತು.</p>.<p>ವಿದ್ಯುತ್ ಸಂಪರ್ಕದ ಆರ್.ಆರ್ ಸಂಖ್ಯೆ ಹೊಂದಿರುವ ಪಟ್ಟಣದ 23 ವಾರ್ಡುಗಳಿಗೆ ಜಿಪಿಎಸ್ ಆಧಾರಿತ ಜಿಯೊ ಟ್ಯಾಗ್ ಮಾಡಿ ಯುಎಚ್ಐಡಿ ಸಂಖ್ಯೆಯನ್ನೂ ನಮೂದಿಸಲಾಗಿದೆ. ಆದರೆ ಜಿಯೊ ಟ್ಯಾಗ್ ಮಾಡಿದ ಆರ್ಆರ್ ಸಂಖ್ಯೆ ಮನೆಗಳು ಮಾತ್ರ ಬೇರೆ ಬೇರೆ ವಾರ್ಡುಗಳಲ್ಲಿರುವುದರಿಂದ ಸಮೀಕ್ಷೆದಾರರ ಕರ್ತವ್ಯಕ್ಕೆ ಅಡ್ಡಿಯಾಗಿತ್ತು.</p>.<p>ಇದರಿಂದ ಸಮೀಕ್ಷೆ ನಿಗದಿತ ಅವಧಿಯಲ್ಲಿ ಮುಗಿಯುವುದೇ ಅನುಮಾನ ಎಂದರಿತ ಅಧಿಕಾರಿಗಳು ಮನೆಗಳನ್ನು ಪತ್ತೆಹಚ್ಚುವ ಕೆಲಸಕ್ಕೆ ಪುರಸಭೆ ಸಿಬ್ಬಂದಿ ನೆರವು ಪಡೆಯುತ್ತಿದ್ದಾರೆ. ಹಾಗಾಗಿ ಕರ್ತವ್ಯದಲ್ಲಿರುವ ಪುರಸಭೆಯ ಮುಖ್ಯಾಧಿಕಾರಿ ಸಹಿತ ಎಲ್ಲ ಸಿಬ್ಬಂದಿ ಮನೆಗಳ ಪತ್ತೆ ಕಾರ್ಯಕ್ಕೆ ಸಮೀಕ್ಷಕರಿಗೆ ಸಹಕರಿಸುತ್ತಿದ್ದಾರೆ. ಈ ಕಾರಣದಿಂದ ಪುರಸಭೆ ಕಚೇರಿಯಲ್ಲಿ ಬಹಳಷ್ಟು ಸಿಬ್ಬಂದಿ ಪೈಕಿ ಕೇವಲ ಇಬ್ಬರು ಮಾತ್ರ ಇರುವುದು ಕಂಡುಬಂದಿತು.</p>.<p>ಸರ್ಕಾರದ ವಿವಿಧ ಸೇವೆಗಳಿಗೆಂದು ಪುರಸಭೆಗೆ ಬಂದಿದ್ದ ಸಾರ್ವಜನಿಕರು ಬಂದ ದಾರಿಗೆ ಸುಂಕ ಇಲ್ಲವೆಂದು ಗೊಣಗುತ್ತಿದ್ದರು. ಚೇಂಬರ್ನಲ್ಲಿ ಕುಳಿತಿದ್ದ ಅಧ್ಯಕ್ಷ ಮಹಾಂತೇಶ ಕಲಭಾವಿ ಅವರು ಸಿಬ್ಬಂದಿ ಇಲ್ಲ ಸೋಮವಾರ ಬನ್ನಿ ಎಂದು ಹೇಳುತ್ತಿದ್ದುದು ಕಂಡುಬಂದಿತು.</p>.<p>ಈ ಕುರಿತು ನಂತರ ವಿವರಿಸಿದ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಸಮೀಕ್ಷೆ ಕೆಲಸ ವಿಳಂಬವಾಗುತ್ತಿರುವುದರಿಂದ ಎಲ್ಲ ಸಿಬ್ಬಂದಿ ಸಮೀಕ್ಷೆ ಕೆಲಸದಲ್ಲಿರುವವರಿಗೆ ಮನೆಗಳನ್ನು ಗುರುತಿಸಲು ಸಹಾಯ ಮಾಡಲು ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದರು.</p>.<p>ಈ ಮಧ್ಯೆ ಅ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಆಗಮಿಸುತ್ತಿದ್ದಾರೆ. ಸಮೀಕ್ಷೆ ಕೆಲಸವನ್ನು ಅಚ್ಚುಕಟ್ಟಾಗಿ ತ್ವರಿತಗತಿಯಲ್ಲಿ ನಿರ್ವಹಿಸಲು ಜಿಲ್ಲಾಡಳಿತ ಎಲ್ಲ ಸಿಬ್ಬಂದಿಯನ್ನೂ ಸಮೀಕ್ಷೆ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ದೊರೆಯದಂತಾಗಿದೆ ಎಂದು ಪುರಸಭೆಯಲ್ಲಿ ಪ್ರತಿನಿಧಿಯೊಬ್ಬರು ಬೇಸರ ಹೊರಹಾಕಿದರು. </p>.<p><strong>ಪ್ರಮುಖ ಸಿಬ್ಬಂದಿ ಹುದ್ದೆ ಖಾಲಿ</strong></p><p>ಪುರಸಭೆಯಲ್ಲಿ ಒಟ್ಟು 23 ಸಿಬ್ಬಂದಿ ಇದ್ದಾರೆ. ಆದರೆ ಪ್ರಮುಖ ಶಾಖೆಗಳಾದ ಕಂದಾಯ ಅಧಿಕಾರಿ ಕಂದಾಯ ನಿರೀಕ್ಷಕ ವಿನ್ಯಾಸ ಶಾಖೆಗಳ ಸಿಬ್ಬಂದಿ ವರ್ಗವಾಗಿದ್ದು ಅನೇಕ ತಿಂಗಳುಗಳಿಂದಲೂ ಈ ಹುದ್ದೆಗಳು ಖಾಲಿ ಉಳಿದಿವೆ.</p><p>ಕಚೇರಿಯಲ್ಲಿನ ಸಿಬ್ಬಂದಿಗೆ ಹೆಚ್ಚುವರಿಯಾಗಿ ತಲಾ ಮೂರು ನಾಲ್ಕು ಶಾಖೆಗಳ ಪ್ರಭಾರ ಅಧಿಕಾರ ವಹಿಸಲಾಗಿದೆ. ಕಿರಿಯ ಎಂಜಿನಿಯರ್ ವಾರದಲ್ಲಿ ಎರಡು ದಿನ ಇಲ್ಲಿಗೆ ಬರಬೇಕಿದ್ದರೂ ಬರುತ್ತಿಲ್ಲ. ಖಾಲಿ ಹುದ್ದೆಗಳ ಭರ್ತಿಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೇವೆ ಎಂದು ಅಧ್ಯಕ್ಷ ಮಹಾಂತೇಶ ಕಲಭಾವಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>