2017ರ ಅವಧಿಯಲ್ಲಿ ಅನಾವೃಷ್ಟಿ, ಅಂತರ್ಜಲ ಕೊರತೆಯಿಂದ ಜಿಲ್ಲೆಯ ಜನ ಜಾನುವಾರುಗಳು ಕಂಗೆಟ್ಟಿದ್ದು, ಇತರೆ ಕೆರೆಗಳಂತೆ ತಲ್ಲೂರು ಕೆರೆಯೂ ಬತ್ತಿಹೋಗಿದ್ದು ಜಲ ಸಂರಕ್ಷಣೆ ಕಾರ್ಯಕರ್ತರ ಮೂಲಕ ಯಶೋಮಾರ್ಗ ಫೌಂಡೇಷನ್ ಗಮನಕ್ಕೆ ಬಂದಿತ್ತು. ನಂತರ ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸಲು ಫೌಂಡೇಷನ್ ಯೋಜನೆ ರೂಪಿಸಿತ್ತು.