ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ತಡವಾಗಿ ಅನೇಕರು ಬಂದ ಕಾರಣ ಪೊಲೀಸರ ಭಯದಿಂದ ಅಂಗಡಿಗಳನ್ನು ಮುಚ್ಚಿಕೊಂಡು ತೆರಳಿದರು. ಹಾಲು, ಔಷಧ, ತರಕಾರಿ, ಕಿರಾಣಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೃಷಿ ಮತ್ತು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಿದ್ದರೂ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದರಿಂದ ಅನೇಕರು ಪಟ್ಟಣಗಳತ್ತ ಬಾರದೇ ಕೆಲಸ ಕಾರ್ಯಕ್ಕೆ ಅಡೆತಡೆಯಾಯಿತು.