ಯೋಜನೆ ಪೂರ್ಣಗೊಂಡ ಬಳಿಕ ಕೊಪ್ಪಳ ರೈಲು ನಿಲ್ದಾಣ ಅಭಿವೃದ್ಧಿಗೊಳ್ಳಲಿರುವ ಮಾದರಿಯ ನೀಲನಕ್ಷೆ
ಕೊಪ್ಪಳ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯ
ಅಂಜನಾದ್ರಿ ಪರ್ವತ
ರಾಯಚೂರುವರೆಗೆ ರೈಲ್ವೆ ಯೋಜನೆ ವಿಸ್ತರಣೆ ಸೇತುವೆ ಸಂಪರ್ಕದಿಂದ ಪ್ರಯಾಣದ ಅಂತರ ತಗ್ಗಿಸುವ ಕಾಮಗಾರಿ ಅಗತ್ಯವಿರುವೆಡೆ ರಸ್ತೆಯ ಸುಧಾರಣೆಯ ಜೊತೆಗೆ ಕೇಂದ್ರ ಸರ್ಕಾರದ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳ ಲಾಭ ಕ್ಷೇತ್ರದ ಜನರಿಗೆ ತಲುಪಿಸುವಲ್ಲಿ ಉತ್ಸುಕತೆಯಿಂದ ಕೆಲಸ ಮಾಡಬೇಕು. ಕರಡಿ ಸಂಗಣ್ಣ ಅವರ ರೀತಿ ಸುಲಭವಾಗಿ ಜನರ ಕೈಗೆ ಸಿಗಬೇಕು
ಖಾನಾವಳಿ ಶರಣಯ್ಯಸ್ವಾಮಿ ಹಿರೇಮಠ ಕಾರಟಗಿ
ಸಂಗಮೇಶ ಕವಡಿಮಟ್ಟಿ
ನನೆಗುದಿಗೆ ಬಿದ್ದಿರುವ ಶಿಗ್ಗಾವ್ ಕಲ್ಮಲಾ ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಪ್ರಾಶಸ್ತ್ಯ ಕೊಡಬೇಕು. ಸಿಂಗಟಾಲೂರ ಏತ ನೀರಾವರಿ ಯೋಜನೆಯಲ್ಲಿ ಸಮರ್ಪಕವಾಗಿ ರೈತರಿಗೆ ನೀರಾವರಿಗೆ ಅನುಕೂಲ ಮಾಡಿಕೊಡಬೇಕು. ಖೇಲೊ ಇಂಡಿಯಾ ಯೋಜನೆಯಡಿ ಸ್ಥಳೀಯವಾಗಿಯೇ ಕ್ರೀಡಾ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು.
ಸಂಗಮೇಶ ಕವಡಿಮಟ್ಟಿ ಅಳವಂಡಿ ಗ್ರಾಮಸ್ಥ
ಕನಕರೆಡ್ಡಿ ಕೆರಿ
ಕೊಪ್ಪಳ ಲೋಕಸಭಾ ಕ್ಷೇತ್ರದ ನೂತನ ಸಂಸದರು ಈ ಭಾಗಕ್ಕೆ ಅವಶ್ಯಕವಾಗಿ ಬೇಕಾಗಿರುವ ದರೋಜಿಯಿಂದ ಬಾಗಲಕೋಟೆ ರೈಲ್ವೆ ಯೋಜನೆಯನ್ನು ಆರಂಭಿಸಬೇಕು ಒಣಭೂಮಿ ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪಿಸಬೇಕು. ಸ್ಮಾರಕಗಳ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು
ಕನಕರೆಡ್ಡಿ ಕೆರಿ ಗೌರವ ಕಾರ್ಯದರ್ಶಿ ತಾಲ್ಲೂಕು ಕ.ಸಾ.ಪ
ಹನುಮಂತಪ್ಪ ಸಜ್ಜಲಗುಡ್ಡ
ನೂತನ ಸಂಸದರಾಗಿರುವ ರಾಜಶೇಖರ ಹಿಟ್ನಾಳ ಅವರು ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಳಮಟ್ಟದಿಂದಲೂ ಜನರೊಂದಿಗೆ ಒಡನಾಟವಿದೆ. ಸಮಗ್ರವಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಬೇಕು
ಹನುಮಂತಪ್ಪ ಸಜ್ಜಲಗುಡ್ಡ ಮೆಣೆಧಾಳ ಗ್ರಾಮದ ನಿವಾಸಿ
ಸೈಫರ್ ರೆಹಮಾನ್
ಕೊಪ್ಪಳ ಜಿಲ್ಲೆ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಹಿಂದುಳಿದಿದ್ದು ನೂತನ ಸಂಸದರು ಅಂಜನಾದ್ರಿ ಅಭಿವೃದ್ಧಿ ಜತೆಗೆ ಎಲ್ಲ ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಹೆಚ್ಚಿಸಲು ನೆರವಾಗಬೇಕು. ಜಿಲ್ಲೆ ಪ್ರವಾಸೋದ್ಯಮ ಹಬ್ ಆಗಲು ಹೇರಳ ಅವಕಾಶಗಳು ಇವೆ. ರಾಜ್ಯದ ಪ್ರಯತ್ನಕ್ಕೆ ಕೇಂದ್ರದ ಅನುದಾನದ ಮೂಲಕ ನೆರವಾಗಬೇಕು