<p><strong>ಯಲಬುರ್ಗಾ:</strong> ಮಣ್ಣೆತ್ತಿನ ಅಮವಾಸ್ಯೆಯು ಗ್ರಾಮೀಣ ಜನರ ಸಂಭ್ರಮದ ಹಬ್ಬ. ಮಣ್ಣಿನ ಎತ್ತುಗಳನ್ನು ಪೂಜಿಸುವ ಮೂಲಕ ರೈತನ ಸಂಗಾತಿ ಎತ್ತುಗಳಿಗೆ ಗೌರವಿಸುವ ಸುದಿನ.</p>.<p>ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಸಗಡಗರ ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದ ಪ್ರಯುಕ್ತ ಪ್ರತಿಯೊಂದು ಮನೆಯಲ್ಲಿ ಮಣ್ಣಿನಿಂತ ತಯಾರಿಸಿದ ಎತ್ತುಗಳನ್ನು ತಂದು ಅವುಗಳಿಗೆ ಪೂಜಿಸಿ ನಂತರ ಅವುಗಳನ್ನು ಬಾವಿ ಅಥವಾ ಹಳ್ಳದಲ್ಲಿ ವಿಸರ್ಜನೆ ಮಾಡುತ್ತಾರೆ.</p>.<p>ಹಬ್ಬದ ಅಂಗವಾಗಿಯೇ ವಿವಿಧ ಓಣಿಯ ಮಕ್ಕಳು ಕರಗಲ್ಲ ಪೂಜೆ ಮಾಡಿ ನಂತರ ಕರಿ ಹರಿಯುತ್ತಾರೆ. ಇದರ ಅಂಗವಾಗಿ ಮಕ್ಕಳು ಮನೆ ಮನೆಗೆ ಹೋಗಿ ಧವಸ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಧಾನ್ಯಗಳನ್ನು ಅಡುಗೆ ಮಾಡಿ ಸಂಭ್ರಮಿಸುತ್ತಾರೆ.</p>.<p class="Subhead">ಭರ್ಜರಿ ವ್ಯಾಪಾರ: ಮಣ್ಣೆತ್ತಿನ ಪೂಜೆ ಪ್ರತಿಯೊಂದು ಮನೆಯಲ್ಲಿ ನಡೆಯುವುದರಿಂದ ಈ ಸಂದರ್ಭದಲ್ಲಿ ಮಣ್ಣಿನ ಎತ್ತುಗಳ ಖರೀದಿ ಬಲು ಜೋರಾಗಿಯೇ ಇರುತ್ತದೆ. ಎತ್ತುಗಳ ಗಾತ್ರ ಮತ್ತು ವಿನ್ಯಾಸದ ಆಧಾರದ ಮೇಲೆ ಅವುಗಳ ದರ ನಿಗದಿಯಾಗಿರುತ್ತವೆ.</p>.<p>ಸಾಮಾನ್ಯವಾಗಿ ಕನಿಷ್ಠ ₹25 ರೂಪಾಯಿಗಳಿಂದ ಅವುಗಳ ಬೆಲೆ ನಿಗದಿಯಾಗಿರುತ್ತದೆ. ಪಟ್ಟಣದಲ್ಲಿ ವಿರೂಪಾಕ್ಷಪ್ಪ ಬಡಿಗೇರ ಹಾಗೂ ಕೆಂಚಮ್ಮ ಕುಂಬಾರ ಮನೆಯವರು ಸುಮಾರು ವರ್ಷಗಳಿಂದಲೂ ಮಣ್ಣೆತ್ತುಗಳ ಮಾರಾಟದಲ್ಲಿ ನಿರತರಾಗಿದ್ದಾರೆ. ಅಮವಾಸ್ಯೆಯ ಮುನ್ನ ಒಂದು ವಾರ ಮೊದಲು ಎತ್ತುಗಳ ನಿರ್ಮಾಣಕ್ಕೆ ಮುಂದಾಗುವ ಈ ಕುಟುಂಬಗಳ ಮನೆ ಸದಸ್ಯರು ಭಾಗವಹಿಸುತ್ತಾರೆ. ಸುಮಾರು ಸಾವಿರ ಜೋಡಿಗಳನ್ನು ಮಾರಾಟ ಮಾಡಿ ಆರ್ಥಿಕವಾಗಿ ಉತ್ತಮ ಆದಾಯ ಪಡೆದುಕೊಳ್ಳುತ್ತಾರೆ.</p>.<p>‘ಸುಮಾರು ವರ್ಷಗಳಿಂದಲೂ ಮಣ್ಣೆತ್ತುಗಳ ಮಾರಾಟದಲ್ಲಿ ನಿರತರಾಗಿರುವುದರಿಂದ ಇಂದಿಗೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಹೆಚ್ಚಿನ ಆದಾಯ ಬರದಿದ್ದರೂ ಖರ್ಚಿಗೂ ಆದಾಯಕ್ಕೆ ಸರಿಹೋಗುತ್ತದೆ. ಕಾಯಂ ಗ್ರಾಹಕರು ಇರುವುದರಿಂದ ಪ್ರತಿವರ್ಷ ಮನೆಗೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಬಡಿಗೇರ ಕುಟುಂಬದ ಪ್ರಶಾಂತ ತಿಳಿಸಿದರು.</p>.<p class="Briefhead"><strong>ಮಣ್ಣೆತ್ತಿನ ಅಮವಾಸ್ಯೆ; ಭರದ ಸಿದ್ಧತೆ</strong></p>.<p>ರೈತರ ಮೊದಲ ಕೃಷಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಣ್ಣೆತ್ತಿನ ಅಮವಾಸೆ ಜುಲೈ 9, 10ರಂದು ನಡೆಯಲಿದ್ದು, ಜಿಲ್ಲೆಯಲ್ಲಿ ಹಬ್ಬದ ಸಿದ್ಧತೆ ಭರದಿಂದ ನಡೆದಿದೆ.</p>.<p>ರೈತರು ತಮ್ಮ ಆಪ್ತಮಿತ್ರ ಎತ್ತಿನ ಜೋಡಿಗೆ ವಿಶೇಷ ಪೂಜೆ ಮಾಡುವುದರ ಮೂಲಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ. ರೈತರ ಪಾಲಿಗೆ ಮಣ್ಣೆತ್ತಿನ ಅಮಾವಾಸೆ ಎಂದರೆ ಎಲ್ಲಿಲ್ಲದ ಹಿಗ್ಗು. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಆಚರಿಸುತ್ತಾರೆ.</p>.<p>ಗಂಗಾವತಿ, ಕುಕನೂರು, ಕನಕಗಿರಿ, ಕುಷ್ಟಗಿ, ಹನುಮಸಾಗರ, ಮುನಿರಾಬಾದ್, ಕಾರಟಗಿ, ತಾವರಗೇರಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೈತರು ಹಬ್ಬಕ್ಕೆ ಸಿದ್ಧಗೊಳ್ಳುತ್ತಿರುವು ದೃಶ್ಯಗಳು ಗುರುವಾರ ಕಂಡುಬಂದವು. ಮುಂಗಾರಿನಲ್ಲಿ ಬರುವ ಈ ಹಬ್ಬದಲ್ಲಿ ರೈತರು ಮಳೆ ಬೆಳೆಯು ಉತ್ತಮವಾಗಿ ಆಗಲಿ, ಫಸಲು ಬರಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ:</strong> ಮಣ್ಣೆತ್ತಿನ ಅಮವಾಸ್ಯೆಯು ಗ್ರಾಮೀಣ ಜನರ ಸಂಭ್ರಮದ ಹಬ್ಬ. ಮಣ್ಣಿನ ಎತ್ತುಗಳನ್ನು ಪೂಜಿಸುವ ಮೂಲಕ ರೈತನ ಸಂಗಾತಿ ಎತ್ತುಗಳಿಗೆ ಗೌರವಿಸುವ ಸುದಿನ.</p>.<p>ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಸಗಡಗರ ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದ ಪ್ರಯುಕ್ತ ಪ್ರತಿಯೊಂದು ಮನೆಯಲ್ಲಿ ಮಣ್ಣಿನಿಂತ ತಯಾರಿಸಿದ ಎತ್ತುಗಳನ್ನು ತಂದು ಅವುಗಳಿಗೆ ಪೂಜಿಸಿ ನಂತರ ಅವುಗಳನ್ನು ಬಾವಿ ಅಥವಾ ಹಳ್ಳದಲ್ಲಿ ವಿಸರ್ಜನೆ ಮಾಡುತ್ತಾರೆ.</p>.<p>ಹಬ್ಬದ ಅಂಗವಾಗಿಯೇ ವಿವಿಧ ಓಣಿಯ ಮಕ್ಕಳು ಕರಗಲ್ಲ ಪೂಜೆ ಮಾಡಿ ನಂತರ ಕರಿ ಹರಿಯುತ್ತಾರೆ. ಇದರ ಅಂಗವಾಗಿ ಮಕ್ಕಳು ಮನೆ ಮನೆಗೆ ಹೋಗಿ ಧವಸ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಧಾನ್ಯಗಳನ್ನು ಅಡುಗೆ ಮಾಡಿ ಸಂಭ್ರಮಿಸುತ್ತಾರೆ.</p>.<p class="Subhead">ಭರ್ಜರಿ ವ್ಯಾಪಾರ: ಮಣ್ಣೆತ್ತಿನ ಪೂಜೆ ಪ್ರತಿಯೊಂದು ಮನೆಯಲ್ಲಿ ನಡೆಯುವುದರಿಂದ ಈ ಸಂದರ್ಭದಲ್ಲಿ ಮಣ್ಣಿನ ಎತ್ತುಗಳ ಖರೀದಿ ಬಲು ಜೋರಾಗಿಯೇ ಇರುತ್ತದೆ. ಎತ್ತುಗಳ ಗಾತ್ರ ಮತ್ತು ವಿನ್ಯಾಸದ ಆಧಾರದ ಮೇಲೆ ಅವುಗಳ ದರ ನಿಗದಿಯಾಗಿರುತ್ತವೆ.</p>.<p>ಸಾಮಾನ್ಯವಾಗಿ ಕನಿಷ್ಠ ₹25 ರೂಪಾಯಿಗಳಿಂದ ಅವುಗಳ ಬೆಲೆ ನಿಗದಿಯಾಗಿರುತ್ತದೆ. ಪಟ್ಟಣದಲ್ಲಿ ವಿರೂಪಾಕ್ಷಪ್ಪ ಬಡಿಗೇರ ಹಾಗೂ ಕೆಂಚಮ್ಮ ಕುಂಬಾರ ಮನೆಯವರು ಸುಮಾರು ವರ್ಷಗಳಿಂದಲೂ ಮಣ್ಣೆತ್ತುಗಳ ಮಾರಾಟದಲ್ಲಿ ನಿರತರಾಗಿದ್ದಾರೆ. ಅಮವಾಸ್ಯೆಯ ಮುನ್ನ ಒಂದು ವಾರ ಮೊದಲು ಎತ್ತುಗಳ ನಿರ್ಮಾಣಕ್ಕೆ ಮುಂದಾಗುವ ಈ ಕುಟುಂಬಗಳ ಮನೆ ಸದಸ್ಯರು ಭಾಗವಹಿಸುತ್ತಾರೆ. ಸುಮಾರು ಸಾವಿರ ಜೋಡಿಗಳನ್ನು ಮಾರಾಟ ಮಾಡಿ ಆರ್ಥಿಕವಾಗಿ ಉತ್ತಮ ಆದಾಯ ಪಡೆದುಕೊಳ್ಳುತ್ತಾರೆ.</p>.<p>‘ಸುಮಾರು ವರ್ಷಗಳಿಂದಲೂ ಮಣ್ಣೆತ್ತುಗಳ ಮಾರಾಟದಲ್ಲಿ ನಿರತರಾಗಿರುವುದರಿಂದ ಇಂದಿಗೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಹೆಚ್ಚಿನ ಆದಾಯ ಬರದಿದ್ದರೂ ಖರ್ಚಿಗೂ ಆದಾಯಕ್ಕೆ ಸರಿಹೋಗುತ್ತದೆ. ಕಾಯಂ ಗ್ರಾಹಕರು ಇರುವುದರಿಂದ ಪ್ರತಿವರ್ಷ ಮನೆಗೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಬಡಿಗೇರ ಕುಟುಂಬದ ಪ್ರಶಾಂತ ತಿಳಿಸಿದರು.</p>.<p class="Briefhead"><strong>ಮಣ್ಣೆತ್ತಿನ ಅಮವಾಸ್ಯೆ; ಭರದ ಸಿದ್ಧತೆ</strong></p>.<p>ರೈತರ ಮೊದಲ ಕೃಷಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಣ್ಣೆತ್ತಿನ ಅಮವಾಸೆ ಜುಲೈ 9, 10ರಂದು ನಡೆಯಲಿದ್ದು, ಜಿಲ್ಲೆಯಲ್ಲಿ ಹಬ್ಬದ ಸಿದ್ಧತೆ ಭರದಿಂದ ನಡೆದಿದೆ.</p>.<p>ರೈತರು ತಮ್ಮ ಆಪ್ತಮಿತ್ರ ಎತ್ತಿನ ಜೋಡಿಗೆ ವಿಶೇಷ ಪೂಜೆ ಮಾಡುವುದರ ಮೂಲಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ. ರೈತರ ಪಾಲಿಗೆ ಮಣ್ಣೆತ್ತಿನ ಅಮಾವಾಸೆ ಎಂದರೆ ಎಲ್ಲಿಲ್ಲದ ಹಿಗ್ಗು. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಆಚರಿಸುತ್ತಾರೆ.</p>.<p>ಗಂಗಾವತಿ, ಕುಕನೂರು, ಕನಕಗಿರಿ, ಕುಷ್ಟಗಿ, ಹನುಮಸಾಗರ, ಮುನಿರಾಬಾದ್, ಕಾರಟಗಿ, ತಾವರಗೇರಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೈತರು ಹಬ್ಬಕ್ಕೆ ಸಿದ್ಧಗೊಳ್ಳುತ್ತಿರುವು ದೃಶ್ಯಗಳು ಗುರುವಾರ ಕಂಡುಬಂದವು. ಮುಂಗಾರಿನಲ್ಲಿ ಬರುವ ಈ ಹಬ್ಬದಲ್ಲಿ ರೈತರು ಮಳೆ ಬೆಳೆಯು ಉತ್ತಮವಾಗಿ ಆಗಲಿ, ಫಸಲು ಬರಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>