‘ಪಂಚಾಯಿತಿ ಕಾರ್ಯಾಲಯ ಕಟ್ಟಡಕ್ಕೆ ನಿವೇಶನ ನೀಡುವುದಾಗಿ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರು. ಅಲ್ಲದೇ ಅಧಿಕಾರಿಗಳು ಹಾಗೂ ಆಗಿನ ಜನಪ್ರತಿನಿಧಿಗಳು ಕೂಡಾ ಕಟ್ಟಡಕ್ಕೆ ಹಣ ಮಂಜೂರಾಗಿದೆ ಎಂದು ಹೇಳಿದ್ದರು. ಆದರೆ 5ವರ್ಷ ಕಳೆದರೂ ಯಾವುದೇ ಪಂಚಾಯಿತಿ ಕಟ್ಟಡ ನಿರ್ಮಾಣವಾಗಿಲ್ಲ. ಬರೀ ಭರವಸೆಗಳ ಮಾತುಗಳು ಕೇಳಿ ಬರುತ್ತಿವೆ‘ ಎಂದು ಸ್ಥಳೀಯ ಬಸವರಾಜ ತಾಳಕೇರಿ, ಯಮನೂರಪ್ಪ ಮೇಗಳಮನಿ, ಅಸಮಾಧಾನ ವ್ಯಕ್ತಪಡಿಸುತ್ತಾರೆ.