ಜಾತ್ರೆ, ಚುನಾವಣೆ ಸೇರಿ ಹಲವು ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿರುತ್ತಾರೆ. ಅನೇಕ ಅಡೆತಡೆ ಮಧ್ಯೆ ತಮ್ಮ ಜೀವ ಒತ್ತೆ ಇಟ್ಟು ಕೆಲಸಮಾಡುತ್ತಿರುತ್ತಾರೆ. ನಾವೆಲ್ಲ ಭದ್ರತೆಯಲ್ಲಿ ಹೊರಗಡೆ ಸುತ್ತಾಡುತ್ತಿರುತ್ತೇವೆ. ಆದರೆ ಅವರಿಗೆ ಯಾವ ಭದ್ರತೆಯೂ ಇರುವುದಿಲ್ಲ. ಆ ಮಧ್ಯೆಯೂ ನಮ್ಮ ರಕ್ಷಣೆಗೆ ಅವರು ಹೋರಾಡುತ್ತಾರೆ. ಅಂತವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.