ಗಂಗಾವತಿ: ಇಲ್ಲಿನ ಆನೆಗೊಂದಿ ರಸ್ತೆಯಲ್ಲಿನ ರಾಮಮಂದಿರದಲ್ಲಿ ರಾಮನವಮಿ ನಿಮಿತ್ತ ಬುಧವಾರ ರಾಮದೇವರ ತೊಟ್ಟಿಲು ಪೂಜೆ ಕಾರ್ಯಕ್ರಮ ನಡೆಯಿತು.
ದೇವಸ್ಥಾನದಲ್ಲಿ ರಾಮ, ಲಕ್ಷ್ಮಣ ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ನಂತರ ಭಜನಾ ಮಂಡಳಿಗಳಿಂದ ಭಜನೆ, ಪಾರಾಯಣ, ಸಹಸ್ರನಾಮವಳಿ ನಡೆದವು. ನೂರಾರು ಭಕ್ತರು ರಾಮದೇವರ ತೊಟ್ಟಿಲು ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಮಾಲಾಧಾರಿಗಳಿಂದ ಪಾನಕ ವಿತರಣೆ: ರಾಮನವಮಿ ನಿಮಿತ್ತ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಹನುಮಮಾಲಾಧಾರಿಗಳು ಸಾರ್ವಜನಿಕರು ಪಾನಕ ವಿತರಿಸಿದರು. ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಗಂಗಾವತಿ ಕೃಷ್ಣದೇವರಾಯ ವೃತ್ತದಲ್ಲಿ ರಾಮನವಮಿಯ ಅಂಗವಾಗಿ ಬುಧವಾರ ಹನುಮಮಾಲಾಧಾರಿಗಳಿಂದ ಸಾರ್ವಜನಿಕರಿಗೆ ಪಾನಕ ವಿತರಣೆ ಮಾಡಲಾಯಿತು