<p><strong>ಗಂಗಾವತಿ</strong>: ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ. ವಾಲ್ಮೀಕಿ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ವಾಲ್ಮೀಕಿ ಸಮಾಜದ ಮುಖಂಡ ಟಿ.ಮಾರುತಿ ನಾಯಕ ಹೇಳಿದರು.</p>.<p>ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಭಾನುವಾರ ಆಯೋ ಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.</p>.<p>‘ವಾಲ್ಮೀಕಿ ಸಮುದಾಯದ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು. ಎಲ್ಲರೂ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮುದಾಯದ ಜನರಲ್ಲಿ ಒಗ್ಗಟ್ಟು ಮೂಡಬೇಕು. ಆಗ ಮಾತ್ರ ಸಮಾಜ ಬಲಿಷ್ಠವಾಗಿ ರಚನೆಯಾಗಲು ಸಾಧ್ಯ’ ಎಂದರು.</p>.<p>ಮುಖಂಡ ಟಿ.ಷಣ್ಮುಖ ನಾಯಕ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ಅವರ ತತ್ವಾದ ರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದರು. </p>.<p>ಅದ್ದೂರಿ ಮೆರವಣಿಗೆ: ವಡ್ಡರಹಟ್ಟಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಗ್ರಾಮದ ಮುಖಂಡರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಆರಂಭಗೊಂಡ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳ ಮುಖಾಂತರ ಅದ್ದೂರಿಯಾಗಿ ಜರುಗಿತು.</p>.<p>ಶಿವಪ್ಪ ನಾಯಕ ಹತ್ತಿಮರದ, ಟಿ.ಷಣ್ಮುಖ ನಾಯಕ, ಟಿ.ತಿಮ್ಮಣ್ಣ ನಾಯಕ, ಎನ್. ವೀರೇಶಪ್ಪ ನಾಯಕ, ವಕೀಲರಾದ ಟಿ.ಹನುಮಗೌಡ ಹತ್ತಿಮರದ ರಾಮಣ್ಣ, ಎಚ್.ವೀರೇಶ, ಚಿನ್ನಪ್ಪ ನಾಯಕ, ಟಿ.ಮಲ್ಲೇಶ, ಜಿ.ಪರಶುರಾಮ, ಶ್ರೀನಿವಾಸ ನಾಯಕ, ವದ್ದಟ್ಟಿ ಲಕ್ಷ್ಮಣ್, ಆದಪ್ಪ ದೋಟಿಹಾಳ, ಮಂಜುನಾಥ ರಾಟಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ. ವಾಲ್ಮೀಕಿ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ವಾಲ್ಮೀಕಿ ಸಮಾಜದ ಮುಖಂಡ ಟಿ.ಮಾರುತಿ ನಾಯಕ ಹೇಳಿದರು.</p>.<p>ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಭಾನುವಾರ ಆಯೋ ಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.</p>.<p>‘ವಾಲ್ಮೀಕಿ ಸಮುದಾಯದ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು. ಎಲ್ಲರೂ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮುದಾಯದ ಜನರಲ್ಲಿ ಒಗ್ಗಟ್ಟು ಮೂಡಬೇಕು. ಆಗ ಮಾತ್ರ ಸಮಾಜ ಬಲಿಷ್ಠವಾಗಿ ರಚನೆಯಾಗಲು ಸಾಧ್ಯ’ ಎಂದರು.</p>.<p>ಮುಖಂಡ ಟಿ.ಷಣ್ಮುಖ ನಾಯಕ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ಅವರ ತತ್ವಾದ ರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದರು. </p>.<p>ಅದ್ದೂರಿ ಮೆರವಣಿಗೆ: ವಡ್ಡರಹಟ್ಟಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಗ್ರಾಮದ ಮುಖಂಡರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಆರಂಭಗೊಂಡ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳ ಮುಖಾಂತರ ಅದ್ದೂರಿಯಾಗಿ ಜರುಗಿತು.</p>.<p>ಶಿವಪ್ಪ ನಾಯಕ ಹತ್ತಿಮರದ, ಟಿ.ಷಣ್ಮುಖ ನಾಯಕ, ಟಿ.ತಿಮ್ಮಣ್ಣ ನಾಯಕ, ಎನ್. ವೀರೇಶಪ್ಪ ನಾಯಕ, ವಕೀಲರಾದ ಟಿ.ಹನುಮಗೌಡ ಹತ್ತಿಮರದ ರಾಮಣ್ಣ, ಎಚ್.ವೀರೇಶ, ಚಿನ್ನಪ್ಪ ನಾಯಕ, ಟಿ.ಮಲ್ಲೇಶ, ಜಿ.ಪರಶುರಾಮ, ಶ್ರೀನಿವಾಸ ನಾಯಕ, ವದ್ದಟ್ಟಿ ಲಕ್ಷ್ಮಣ್, ಆದಪ್ಪ ದೋಟಿಹಾಳ, ಮಂಜುನಾಥ ರಾಟಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>