<p><strong>ತಾವರಗೇರಾ:</strong> ‘ಮನುಷ್ಯ ಹೆಚ್ಚೆಚ್ಚು ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಿಂದ ಮಾನಸಿಕ ಒತ್ತಡಗಳು ದೂರವಾಗುತ್ತವೆ. ಸಾಮಾನ್ಯ ಜ್ಞಾನದ ಜೊತೆ ಸಾಹಿತ್ಯ ಜ್ಞಾನ ಬೆಳೆಯುತ್ತದೆ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಹೇಳಿದರು.</p>.<p>ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ ಮತ್ತು ಹೋಬಳಿ ಘಟಕ, ಸರ್ಕಾರಿ ಬಾಲಕರ ಪ.ಪೂ.ಕಾಲೇಜು ಸಹಯೋಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ವೇದಿಕೆಯಲ್ಲಿದ್ದ ಗಣ್ಯರು, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮತ್ತು ತಾವರಗೇರಾ ಪಟ್ಟಣದ ದತ್ತಿ ದಾನಿಗಳಾದ ದಿ. ಶ್ರೀಧರಪ್ಪ ತಾಳಿಕೋಟಿ, ದಿ.ನೀಲಮ್ಮ ಮಲಕಾಜಪ್ಪ ದಂಡಿನ ಅವರ ಭಾವಚಿತ್ರ ಗಳಿಗೆ ಪೂಜೆ ಸಲ್ಲಿಸಿದರು.</p>.<p>ತಾಲ್ಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ನಿವೃತ್ತ ಮುಖ್ಯ ಶಿಕ್ಷಕ ಹಂಪಣ್ಣ ಗುಡದೂರ, ಕುಷ್ಟಗಿಯ ಸಾಹಿತಿ ರವೀಂದ್ರ ಬಾಕಳೆ, ಟಿ.ಸಿ.ಎಚ್. ಕಾಲೇಜಿನ ಪ್ರಾಚಾರ್ಯ ರಂಗನಾಥ ಅಂಬಿಗೇರ, ಪ.ಪಂ.ಸದಸ್ಯೆ ಬೇಬಿರೇಖಾ ಮಾತನಾಡಿದರು.</p>.<p>ಕಾಲೇಜಿನ ಪ್ರಾಚಾರ್ಯ ಕೆ.ಹೆಚ್.ಹುಲಿ, ಶಿಕ್ಷಕ ಸಂಗಪ್ಪ ಗುಡದೂರ, ಕಾಲೇಜಿನ ಉಪನ್ಯಾಸಕ ವಿ.ಎನ್. ಪಾಟೀಲ, ಭಾವಿಕಟ್ಟಿ, ಮಲ್ಲಮ್ಮ ಪಾಟೀಲ,ಚೌಧರಿ, ಪರಶುರಾಮ ಬಂಡಿ, ಭೀಮನಗೌಡ ಪಾಟೀಲ ತೆಮ್ಮಿನಾಳ ಹೋಬಳಿ ಕಸಾಪ ಅಧ್ಯಕ್ಷ ರವೀಂದ್ರ ಬಳಿಗಾರ, ಗೌರವ ಕಾರ್ಯದರ್ಶಿ ಶರಣಪ್ಪ ಲೈನದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾವರಗೇರಾ:</strong> ‘ಮನುಷ್ಯ ಹೆಚ್ಚೆಚ್ಚು ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಿಂದ ಮಾನಸಿಕ ಒತ್ತಡಗಳು ದೂರವಾಗುತ್ತವೆ. ಸಾಮಾನ್ಯ ಜ್ಞಾನದ ಜೊತೆ ಸಾಹಿತ್ಯ ಜ್ಞಾನ ಬೆಳೆಯುತ್ತದೆ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ ಹೇಳಿದರು.</p>.<p>ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ ಮತ್ತು ಹೋಬಳಿ ಘಟಕ, ಸರ್ಕಾರಿ ಬಾಲಕರ ಪ.ಪೂ.ಕಾಲೇಜು ಸಹಯೋಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ವೇದಿಕೆಯಲ್ಲಿದ್ದ ಗಣ್ಯರು, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮತ್ತು ತಾವರಗೇರಾ ಪಟ್ಟಣದ ದತ್ತಿ ದಾನಿಗಳಾದ ದಿ. ಶ್ರೀಧರಪ್ಪ ತಾಳಿಕೋಟಿ, ದಿ.ನೀಲಮ್ಮ ಮಲಕಾಜಪ್ಪ ದಂಡಿನ ಅವರ ಭಾವಚಿತ್ರ ಗಳಿಗೆ ಪೂಜೆ ಸಲ್ಲಿಸಿದರು.</p>.<p>ತಾಲ್ಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ನಿವೃತ್ತ ಮುಖ್ಯ ಶಿಕ್ಷಕ ಹಂಪಣ್ಣ ಗುಡದೂರ, ಕುಷ್ಟಗಿಯ ಸಾಹಿತಿ ರವೀಂದ್ರ ಬಾಕಳೆ, ಟಿ.ಸಿ.ಎಚ್. ಕಾಲೇಜಿನ ಪ್ರಾಚಾರ್ಯ ರಂಗನಾಥ ಅಂಬಿಗೇರ, ಪ.ಪಂ.ಸದಸ್ಯೆ ಬೇಬಿರೇಖಾ ಮಾತನಾಡಿದರು.</p>.<p>ಕಾಲೇಜಿನ ಪ್ರಾಚಾರ್ಯ ಕೆ.ಹೆಚ್.ಹುಲಿ, ಶಿಕ್ಷಕ ಸಂಗಪ್ಪ ಗುಡದೂರ, ಕಾಲೇಜಿನ ಉಪನ್ಯಾಸಕ ವಿ.ಎನ್. ಪಾಟೀಲ, ಭಾವಿಕಟ್ಟಿ, ಮಲ್ಲಮ್ಮ ಪಾಟೀಲ,ಚೌಧರಿ, ಪರಶುರಾಮ ಬಂಡಿ, ಭೀಮನಗೌಡ ಪಾಟೀಲ ತೆಮ್ಮಿನಾಳ ಹೋಬಳಿ ಕಸಾಪ ಅಧ್ಯಕ್ಷ ರವೀಂದ್ರ ಬಳಿಗಾರ, ಗೌರವ ಕಾರ್ಯದರ್ಶಿ ಶರಣಪ್ಪ ಲೈನದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>