ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ: ಆಮೆಗತಿಯಲ್ಲಿ ಸಾಗುತ್ತಿರುವ ರೈಲು ನಿಲ್ದಾಣದ ಕಾಮಗಾರಿ

ಮತದಾನಕ್ಕೆ ಹೋದ ಕಾರ್ಮಿಕರು ಮರಳಿ ಬಂದಿಲ್ಲ: ಕಾಮಗಾರಿಗೆ ಮಳೆಗಾಲವೂ ಅಡ್ಡಿ
Published : 28 ಮೇ 2024, 5:24 IST
Last Updated : 28 ಮೇ 2024, 5:24 IST
ಫಾಲೋ ಮಾಡಿ
Comments
ಕಾರ್ಮಿಕರು ಕೆಲಸಕ್ಕೆ ಬಂದರೆ ಕೇವಲ ಎರಡು ತಿಂಗಳಲ್ಲಿಯೇ ಕೆಲಸ ಪೂರ್ಣಗೊಳ್ಳುತ್ತದೆ. ಏನೇ ಆದರೂ 3-4 ತಿಂಗಳಲ್ಲಿ ಈ ಭಾಗದ ಜನರ ರೈಲು ಪ್ರಯಾಣದ ಕನಸು ನನಸಾಗಲಿದೆ.
ಅಶೋಕ ಮುದಗೌಡರ ಎಇಇ ನೈಋತ್ಯ ರೈಲ್ವೆ
ಯಾರ ‘ಕೈ’ಯಿಂದ ಹಸಿರು ನಿಶಾನೆ
ರಾಜಕೀಯ ಒತ್ತಡದ ಕಾರಣಕ್ಕೆ ಕಳಪೆಯಾದರೂ ತರಾತುರಿಯಲ್ಲಿ ಕೆಲಸ ಕೈಗೊಂಡ ರೈಲ್ವೆ ಇಲಾಖೆ ಕಳೆದ ಮಾರ್ಚ್ 31ಕ್ಕೆ ರೈಲು ಸಂಚಾರದ ಉದ್ಘಾಟನೆ ನೆರವೇರಿಸಲು ಯೋಜಿಸಿತ್ತು. ಅಷ್ಟೇ ಅಲ್ಲ ರೈಲ್ವೆ ಮಾರ್ಗದ ನಿರ್ಮಾಣದ ಕಾಮಗಾರಿಯ ಅನುಷ್ಠಾನದಲ್ಲಿ ಮುತುವರ್ಜಿ ವಹಿಸಿದ್ದ ಆಗಿನ ಸಂಸದ ಸಂಗಣ್ಣ ಕರಡಿ ಅವರಿಗೆ ‘ಕುಷ್ಟಗಿವರೆಗೆ ರೈಲು ಓಡಿಸಿದ್ದೇವೆ’ ಎಂಬ ಸಾಧನೆ ವಿಚಾರವನ್ನು ಚುನಾವಣೆಯಲ್ಲಿ ಮತದಾರರ ಮುಂದಿಡುವ ಬಲವಾದ ಆಲೋಚನೆಯೂ ಇತ್ತು. ಆದರೆ ರೈಲು ಓಡಲಿಲ್ಲ ಮತ್ತು ಸಂಗಣ್ಣ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಸಾಧ್ಯವಾಗದಿರುವುದು ಬೇರೆ ಮಾತು. ಚುನಾವಣೆಗೂ ಮೊದಲು ತಾವೇ ರೈಲು ಮಾರ್ಗ ಉದ್ಘಾಟಿಸುವುದಾಗಿ ಹೇಳಿದ್ದ ಸಂಗಣ್ಣ ನಂತರ ಪ್ರಚಾರದ ವೇಳೆ ‘ನಮ್ಮ ನೂತನ ಸಂಸದ ರಾಜಶೇಖರ ಹಿಟ್ನಾಳ ಅವರೊಂದಿಗೆ ಸೇರಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುತ್ತೇವೆ’ ಎಂದೇ ಹೇಳಿದ್ದರು. ಯಾರು ಹಸಿರು ನಿಶಾನೆ ತೋರಿಸುತ್ತಾರೆ ಎಂಬುದು ಇಲ್ಲಿಯ ಜನರಲ್ಲಿಯೂ ಕುತೂಹಲ ಇದ್ದು ಅದಕ್ಕೆ ಇನ್ನೂ ಒಂದು ವಾರ ಕಾಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT